ಆರೋಗ್ಯ ಕಾರ್ಯಕರ್ತೆ 
ದೇಶ

ವಿಲಕ್ಷಣ ಆದೇಶ: ಛತ್ತೀಸ್ ಗಢದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ಸಂಬಳವಿಲ್ಲ!

ಛತ್ತೀಸ್ ಗಢದಲ್ಲಿ ರಾಯಪುರದಿಂದ 160 ಕಿ.ಮೀ ದೂರದಲ್ಲಿರುವ ಗೌರೆಲ್ಲಾ- ಪೆಂಡ್ರಾ-ಮಾರ್ವಾಹಿ ಜಿಲ್ಲೆಯ ಬುಡುಕಟ್ಟ ಇಲಾಖೆ, ತನ್ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ  ಕೋವಿಡ್ ವಿರುದ್ಧದ ಲಸಿಕೆ ಪಡೆಯಬೇಕು, ಇಲ್ಲದಿದ್ದರೆ ಜೂನ್ ತಿಂಗಳ ಸಂಬಳ ಪಡೆಯದಿರಲು ಬದ್ಧರಾಗುವಂತೆ ಹೇಳಿದೆ.

ರಾಯಪುರ: ಕೊರೋನಾವೈರಸ್ ಎರಡನೇ ಅಲೆ ನಡುವೆ ಛತ್ತೀಸ್ ಗಢದಲ್ಲಿ ವಿಲಕ್ಷಣ ಆದೇಶವೊಂದನ್ನು ಹೊರಡಿಸಲಾಗಿದೆ.
ರಾಯಪುರದಿಂದ 160 ಕಿ.ಮೀ ದೂರದಲ್ಲಿರುವ ಗೌರೆಲ್ಲಾ- ಪೆಂಡ್ರಾ-ಮಾರ್ವಾಹಿ ಜಿಲ್ಲೆಯ ಬುಡುಕಟ್ಟ ಇಲಾಖೆ, ತನ್ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ  ಕೋವಿಡ್ ವಿರುದ್ಧದ ಲಸಿಕೆ ಪಡೆಯಬೇಕು, ಇಲ್ಲದಿದ್ದರೆ ಜೂನ್ ತಿಂಗಳ ಸಂಬಳ ಪಡೆಯದಿರಲು ಬದ್ಧರಾಗುವಂತೆ ಹೇಳಿದೆ.

ನೌಕರರು ಆದಷ್ಟು ಬೇಗ ತಮ್ಮ ಕೋವಿಡ್ ವ್ಯಾಕ್ಸಿನೇಷನ್ ಕಾರ್ಡ್ ನ್ನು  ಜಿಲ್ಲಾಧಿಕಾರಿಗಳ ಬುಡಕಟ್ಟು ವಿಭಾಗದಲ್ಲಿ ದಾಖಲೆಗಳಿಗಾಗಿ ಹಾಜರುಪಡಿಸುವಂತೆ  ಕೋರಲಾಗಿದೆ. ಒಂದು ವೇಳೆ ಲಸಿಕೆ ಪಡೆಯದಿರುವುದು ಕಂಡುಬಂದರೆ, ಜೂನ್ ತಿಂಗಳ ಸಂಬಳವನ್ನು ಸ್ಥಗಿತಗೊಳಿಸಲಾಗುವುದು, ಅದಕ್ಕೆ ಅವರೇ ಹೊಣೆಗಾರರಾಗುತ್ತಾರೆ. ಕೂಡಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಬುಡಕಟ್ಟು ಅಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಕೆ.ಎಸ್. ಮಸ್ರಾಮ್ ಸೋಮವಾರ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

ತನ್ನ ಆದೇಶವನ್ನು ಸಮರ್ಥಿಸಿಕೊಂಡಿರುವ ಮಸ್ರಾಮ್, ಯಾವುದೇ ಸರ್ಕಾರಿ ಸಿಬ್ಬಂದಿಯನ್ನು ಹೆದರಿಸುವ ಉದ್ದೇಶವಿಲ್ಲ ಆದರೆ, ನಮ್ಮ ಗುರಿ ಲಸಿಕೆ ನೀಡುವಿಕೆಯಲ್ಲಿ ಶೇಕಡ 100 ರಷ್ಟು ಪ್ರಗತಿ ಸಾಧಿಸುವುದಾಗಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT