ಸುಧಾ ಮೂರ್ತಿ 
ದೇಶ

ಸುಧಾ ಮೂರ್ತಿಯವರ ಹೊಸ ಪುಸ್ತಕ, ಮಕ್ಕಳಿಗೆ ದೀಪಾವಳಿ ಉಡುಗೊರೆ

ಇನ್ಪೋಸಿಸ್ ಫೌಂಡೇಶನ್​​​ ಮುಖಸ್ಥೆ ಹಾಗೂ ಲೇಖಕಿ ಸುಧಾ ಮೂರ್ತಿ ಅವರು ಮಕ್ಕಳಿಗೆ ದೀಪಾವಳಿ ಉಡುಗೊರೆಯೊಂದನ್ನು ನೀಡಿದ್ದಾರೆ.

ನವದೆಹಲಿ: ಇನ್ಪೋಸಿಸ್ ಫೌಂಡೇಶನ್​​​ ಮುಖಸ್ಥೆ ಹಾಗೂ ಲೇಖಕಿ ಸುಧಾ ಮೂರ್ತಿ ಅವರು ಮಕ್ಕಳಿಗೆ ದೀಪಾವಳಿ ಉಡುಗೊರೆಯೊಂದನ್ನು ನೀಡಿದ್ದಾರೆ.

ಸುಧಾ ಮೂರ್ತಿ ಅವರ ಇತ್ತೀಚಿನ ಪುಸ್ತಕ "ದಿ ಸೇಜ್ ವಿತ್ ಟು ಹಾರ್ನ್ಸ್" ಇದನ್ನು ಅವರು ಮಕ್ಕಳಿಗಾಗಿ ಬರೆದಿದ್ದು, ಅದನ್ನೇ ದೀಪಾವಳಿ ಗಿಫ್ಟ್​ ಆಗಿ ನೀಡಿದ್ದಾರೆ. ಈ ಪುಸ್ತಕವು ಭಾರತೀಯ ಪುರಾಣಗಳ ಪುಟಗಳಲ್ಲಿ ಕಳೆದುಹೋಗಿರುವ ಹಲವಾರು ಯಾರಿಗೂ ತಿಳಿಯದ ಮತ್ತು ಆಕರ್ಷಕ ಕಥೆಗಳನ್ನು ಒಳಗೊಂಡಿದೆ. ರಾಜರು, ರಾಣಿಯರು, ದೇವರು ಮತ್ತು ದೇವತೆಗಳು, ಋಷಿಗಳು, ಅಸಾಮಾನ್ಯ ಬುದ್ಧಿವಂತಿಕೆಯ ಪುರುಷರು ಮತ್ತು ಮಹಿಳೆಯರ ಕಥೆಗಳು ಈ ಪುಸ್ತಕದಲ್ಲಿ ಇವೆ.

ಇದು "ದಿ ಮ್ಯಾನ್ ಫ್ರಮ್ ದಿ ಎಗ್", "ಸರ್ಪೆಂಟ್ಸ್ ರಿವೇಂಜ್", "ದಿ ಅಪ್‌ಸೈಡ್-ಡೌನ್ ಕಿಂಗ್" ಮತ್ತು "ದಿ ಡಾಟರ್ ಫ್ರಮ್ ದಿ ವಿಶಿಂಗ್ ಟ್ರೀ" ಗಳ ಅನುಸರಣೆಯಾಗಿದೆ. ಅಲ್ಲದೇ ಅವರ 'Unusual Tales from mythology'ಸರಣಿಯ ಐದನೇ ಮತ್ತು ಕೊನೆಯ ಪುಸ್ತಕವಾಗಿದೆ.

ಅವರ ಪುಸ್ತಕಗಳು ಹಲವು ವಿಧಗಳಲ್ಲಿ ಭಿನ್ನವಾಗಿರುವಂತೆ ತೋರಬಹುದು, ಆದರೆ ಎಲ್ಲಾ ಆವೃತ್ತಿಗಳಲ್ಲಿ ಥ್ರೆಡ್ ಒಂದೇ ಆಗಿರುತ್ತದೆ. ಪುರಾಣಗಳಲ್ಲಿ ಉಲ್ಲೇಖಿಸಲಾದ ಕೆಲವು ಪೋಷಕ ಪಾತ್ರಗಳು ತಮ್ಮದೇ ಆದ ಜೀವನದ ದೃಷ್ಟಿಕೋನಗಳೊಂದಿಗೆ ಹೇಳಲು ತಮ್ಮದೇ ಆದ ಕಥೆಗಳನ್ನು ಹೊಂದಿವೆ ಎಂದು ಅವರು ಹೇಳುತ್ತಾರೆ. ಪಫಿನ್ ಪ್ರಕಟಿಸಿದ ಈ ಪುಸ್ತಕವು ಪ್ರಿಯಾಂಕರ್ ಗುಪ್ತಾ ಅವರ ಚಿತ್ರಣಗಳನ್ನು ಹೊಂದಿದೆ.

ವಿಶ್ವದಲ್ಲಿ ಯಾವುದೇ ಹೆಸರಿನಿಂದ ಕರೆಯಬಹುದಾದ ಶಕ್ತಿಶಾಲಿ ಶಕ್ತಿಯಿದೆ. ಈ ಶಕ್ತಿಯು ನಮ್ಮ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಸಾಕ್ಷಿಯಾಗಿದೆ ಹಾಗೂ ನಾವು ಅದನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಿದ್ರೆ, ನಮಗೆ ಮಾರ್ಗದರ್ಶನ ನೀಡಲು ಯಾವಾಗಲೂ ಇರುತ್ತದೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ.

ಮೂರ್ತಿ ಅವರು ಕಾದಂಬರಿಗಳು, ತಾಂತ್ರಿಕ ಪುಸ್ತಕಗಳು, ಪ್ರವಾಸ ಕಥನಗಳು, ಸಣ್ಣ ಕಥೆಗಳ ಸಂಗ್ರಹಗಳು ಮತ್ತು ಕಾಲ್ಪನಿಕವಲ್ಲದ ತುಣುಕುಗಳು ಹಾಗೂ ಮಕ್ಕಳಿಗಾಗಿ ಪುಸ್ತಕಗಳನ್ನು ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT