ದೇಶ

ಉತ್ತರಾಖಂಡದಲ್ಲಿ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಮಹಾರಾಷ್ಟ್ರ ಮಾದರಿ ಅಳವಡಿಸಿಕೊಳ್ಳಿ: ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ

Lingaraj Badiger

ಪಿಥೋರಗಢ: ಕೃಷಿ ಮತ್ತು ಕರಕುಶಲಕ್ಕೆ ಉತ್ತೇಜ ನೀಡುವ ಮಹಾರಾಷ್ಟ್ರ ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತರಾಖಂಡದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಗುರುವಾರ ಹೇಳಿದ್ದಾರೆ.

"ಮಹಾರಾಷ್ಟ್ರದ ರೈತರು ರಾಜ್ಯಕ್ಕೆ ವಿಶಿಷ್ಟವಾದ ಕೃಷಿ ಉತ್ಪನ್ನಗಳಿಗೆ ಪೇಟೆಂಟ್ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಾರೆ. ನಾವು ಸಹ ಅದೇ ಮಾರ್ಗದಲ್ಲಿ ಕೆಲಸ ಮಾಡಿದರೆ ಹಿಮಾಲಯ ಪ್ರದೇಶದಲ್ಲಿ ಪ್ರತ್ಯೇಕವಾಗಿ ಉತ್ಪಾದಿಸುವ ರಾಜ್ಮಾ ಮತ್ತು ಗಿಡಮೂಲಿಕೆಗಳಿಗೆ ಹೆಚ್ಚಿನ ಬೆಲೆಯನ್ನು ಪಡೆಯಬಹುದು" ಎಂದು ಮೂಲತಃ ಉತ್ತರಾಖಂಡದವರಾದ ಕೋಶ್ಯಾರಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಲ್ಲಿ ಬೆಳೆಯುವ ಅಪರೂಪದ ಮತ್ತು ಸಾವಯವ ಕೃಷಿ ಉತ್ಪನ್ನಗಳು ಮತ್ತು ಹಿಮಾಲಯದ ಕರಕುಶಲ ವಸ್ತುಗಳ ಮೇಲೆ ಜವಾಬ್ದಾರಿಯನ್ನು ಹಾಕಿದರೆ ಉತ್ತರಾಖಂಡದ ನಿರುದ್ಯೋಗ ಸಮಸ್ಯೆ ಪರಿಹರಿಸಬಹುದು ಎಂದು ಅವರು ಹೇಳಿದರು.

ಈ ದಿಸೆಯಲ್ಲಿ ರಾಜ್ಯದ ಕೆಲವು ಎನ್‌ಜಿಒಗಳು ಮತ್ತು ಯುವಕರು ಮಾಡಿರುವ ಕಾರ್ಯವನ್ನು ಕೋಶ್ಯಾರಿ ಅವರು ಶ್ಲಾಘಿಸಿದರು.

ಹಿಮಾಲಯದ ಕೃಷಿ, ಕರಕುಶಲ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸುವ ಮೂಲಕ ನಿರುದ್ಯೋಗವನ್ನು ಕಡಿಮೆ ಮಾಡುವ ಮಾರ್ಗಗಳನ್ನು ತೋರಿಸಿರುವ ಕೆಲವು ಅರ್ಹ ಯುವಕರು ರಾಜ್ಯದಲ್ಲಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯಪಾಲರು ಹೇಳಿದ್ದಾರೆ.

SCROLL FOR NEXT