ಪ್ಯಾಂಡೋರಾ ಪೇಪರ್ಸ್ ಕೇಸ್ ಸಾಂದರ್ಭಿಕ ಚಿತ್ರ 
ದೇಶ

ಪ್ಯಾಂಡೋರಾ ಪೇಪರ್ಸ್ ಕೇಸ್: ಬಹು ಏಜೆನ್ಸಿ ಗ್ರೂಪ್ ನಿಂದ ತನಿಖೆ ಮೇಲ್ವಿಚಾರಣೆ

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷರ ನೇತೃತ್ವದಲ್ಲಿನ ಬಹು-ಏಜೆನ್ಸಿ ಗ್ರೂಪ್  ಪಂಡೋರಾ ಪೇಪರ್ಸ್ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅಧಿಕೃತ ಹೇಳಿಕೆ ಸೋಮವಾರ ತಿಳಿಸಿದೆ.

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷರ ನೇತೃತ್ವದಲ್ಲಿನ ಬಹು-ಏಜೆನ್ಸಿ ಗ್ರೂಪ್  ಪಂಡೋರಾ ಪೇಪರ್ಸ್ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅಧಿಕೃತ ಹೇಳಿಕೆ ಸೋಮವಾರ ತಿಳಿಸಿದೆ.

ಉದ್ಯಮಿಗಳು ಸೇರಿದಂತೆ 300ಕ್ಕೂ ಹೆಚ್ಚು ಭಾರತೀಯ ಶ್ರೀಮಂತರ ಹೆಸರುಗಳು ಪಂಡೋರಾ ಪೇಪರ್ಸ್ ಕೇಸ್ ನಲ್ಲಿ ಕಂಡುಬಂದಿದ್ದು, ವಿಶ್ವದಾದ್ಯಂತ ಶ್ರೀಮಂತರು ಹೊಂದಿರುವ ರಹಸ್ಯ ಸಂಪತ್ತಿನ ಮಾಹಿತಿ ಸೋರಿಕೆಯಾಗಿದ್ದು, ಅನೇಕ ಭಾರತೀಯರು ತಪ್ಪು ಆರೋಪಗಳನ್ನು ತಿರಸ್ಕರಿಸಿದ್ದಾರೆ.

ಕಡಲಾಚೆ ಸೋರಿಕೆಯಾದ ಸಂಪತ್ತಿನ ದಾಖಲೆಗಳನ್ನು ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಪಡೆದಿದೆ.ಸರ್ಕಾರವು ಇದನ್ನು ಗಮನಿಸಿದೆ ಮತ್ತು ಸಂಬಂಧಿತ ತನಿಖಾ ಸಂಸ್ಥೆಗಳು ಈ ಪ್ರಕರಣಗಳಲ್ಲಿ ತನಿಖೆ ನಡೆಸುತ್ತವೆ ಮತ್ತು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಬಿಡಿಟಿ ಹೇಳಿದೆ.

ಪಂಡೋರಾ ಪೇಪರ್ಸ್ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಬಂದ ಕೇಸ್ ತನಿಖೆಯನ್ನು ಸಿಬಿಡಿಟಿ ಅಧ್ಯಕ್ಷರ ನೇತೃತ್ವದಲ್ಲಿನ ಬಹು ಏಜೆನ್ಸಿ ಗ್ರೂಪ್ ಮೇಲ್ವಿಚಾರಣೆ ಮಾಡಲಿದೆ. ಇದರಲ್ಲಿ ಸಿಬಿಡಿಟಿ, ಆರ್ ಬಿಐ ಮತ್ತು ಎಫ್ ಐಯು ಪ್ರತಿನಿಧಿಗಳಿರುತ್ತಾರೆ ಎಂದು ಸರ್ಕಾರ ಇಂದು ನಿರ್ದೇಶಿಸಿದೆ. 

ಈ ಪ್ರಕರಣಗಳ ಪರಿಣಾಮಕಾರಿ ತನಿಖೆಯನ್ನು ಖಚಿತಪಡಿಸಿಕೊಳ್ಳಲು, ಸಂಬಂಧಿತ ತೆರಿಗೆದಾರರು, ಘಟಕಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಸರ್ಕಾರವು ವಿದೇಶಿ ನ್ಯಾಯವ್ಯಾಪ್ತಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತದೆ. ಇಂತಹ ಸೋರಿಕೆಗೆ ಸಂಬಂಧಿಸಿದ ತೆರಿಗೆ ಅಪಾಯಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು  ಅಂತರ್ ಸರ್ಕಾರದ ಗ್ರೂಪ್ ನೊಂದಿಗೆ ಭಾರತ ಸರ್ಕಾರ ಕೂಡಾ ಭಾಗಿಯಾಗುತ್ತದೆ ಎಂದು ಸಿಬಿಡಿಟಿ ಹೇಳಿದೆ.

ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟದ ವೆಬ್‌ಸೈಟ್ ಕೂಡ ಇನ್ನೂ ಎಲ್ಲಾ ಘಟಕಗಳ ಹೆಸರುಗಳು ಮತ್ತು ಇತರ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಹಂತ ಹಂತವಾಗಿ ಮಾಹಿತಿ ಬಿಡುಗಡೆ ಮಾಡಲಾಗುವುದು,  ಪಂಡೋರಾ ಪೇಪರ್ಸ್ ತನಿಖೆಗೆ ಸಂಬಂಧಿಸಿದ ರಚನಾತ್ಮಕ ಡೇಟಾವನ್ನು ಮುಂದಿನ ದಿನಗಳಲ್ಲಿ ತನ್ನ ಕಡಲಾಚೆಯ ಸೋರಿಕೆ ಡೇಟಾಬೇಸ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿಜಿಐಜೆ ವೆಬ್ ಸೈಟ್ ಸಲಹೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT