ಆರ್ಡೆಮ್ ಪಟಪೂಟಿಯನ್ 
ದೇಶ

ವೈದ್ಯಕೀಯ ನೊಬೆಲ್ ವಿಜೇತನ ಸಂಶೋಧನೆಗೆ ಭಾರತ ಸರ್ಕಾರದ ಪ್ರಯೋಗಾಲಯ ಸಹಾಕಾರಿ!?

ಮನುಷ್ಯನಿಗೆ ತಾಪಮಾನ ಹಾಗೂ ಸ್ಪರ್ಶದ ಅನುಭವ ಪಡೆಯುವುದಕ್ಕೆ ಅನುವು ಮಾಡಿಕೊಡುವ ರಿಸೆಪ್ಟರ್ ಗಳನ್ನು ಶೋಧನೆ ಮಾಡಿದ್ದಕ್ಕಾಗಿ ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದಾರೆ.

ನವದೆಹಲಿ: ಮನುಷ್ಯನಿಗೆ ತಾಪಮಾನ ಹಾಗೂ ಸ್ಪರ್ಶದ ಅನುಭವ ಪಡೆಯುವುದಕ್ಕೆ ಅನುವು ಮಾಡಿಕೊಡುವ ರಿಸೆಪ್ಟರ್ ಗಳನ್ನು ಶೋಧನೆ ಮಾಡಿದ್ದಕ್ಕಾಗಿ ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದಾರೆ. ಈ ವೈಜ್ಞಾನಿಕ ಮಹತ್ವವನ್ನು ಸ್ಥಾಪಿಸುವುದಕ್ಕೆ ಅವರಿಗೆ ಈ ಹಿಂದೆ ಭಾರತ ಸರ್ಕಾರದ  ಪ್ರಯೋಗಾಲಯದಲ್ಲಿನ ಪ್ರಯೋಗಗಳೂ ನೆರವಾಗಿರಬಹುದು ಎಂದು ಈಗ ವಿಶ್ಲೇಷಿಸಲಾಗುತ್ತಿದೆ. 

ಸಿಎಸ್ಐಆರ್ ನೇತೃತ್ವದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ (ಐಐಸಿಬಿ) 2018 ರಲ್ಲಿ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆ ದೈಹಿಕ ಸೂಚನೆಗಳನ್ನು ಪಡೆಯುವುದಕ್ಕೆ ಈ ರಿಸೆಪ್ಟರ್ ಗಳ ಮೇಲೆ ಅವಲಂಬಿತವಾಗಿರುತ್ತವೆ ಎಂಬ ಅಂಶವನ್ನು ತೋರಿಸಿತ್ತು.

ಪೀಜೋ ಚಾನೆಲ್‌ಗಳನ್ನು ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ಪತ್ತೆ ಮಾಡಿದ್ದು ಇದು 2010 ಕ್ಕಿಂತಲೂ ಮುಂಚೆ ತಿಳಿಯದ ಜೀವಶಾಸ್ತ್ರದ ಸಾಮಾನ್ಯ ವಾಸ್ತವ ಅಂಶವಾಗಿದ್ದು 2010 ಕ್ಕಿಂತಲೂ ಮುನ್ನ ನರಮಂಡಲದ ವ್ಯವಸ್ಥೆಯಲ್ಲಿ ಈ ರಿಸೆಪ್ಟರ್ ಗಳ ಇನ್ನಷ್ಟು ಪಾತ್ರವನ್ನು ಅರಿಯುವುದಕ್ಕಾಗಿ ಹಲವಾರು ಸಂಶೋಧನೆಗಳು ನಡೆದಿವೆ. ಈ ಪೈಕಿ ಭಾರತದ್ದೂ ಸಂಶೋಧನೆ 
 
ಉದಾಹರಣೆಗೆ 2014 ರಲ್ಲಿ ಯೂನಿವರ್ಸಿಟಿ ಆಫ್ ಲೀಡ್ಸ್ ನಲ್ಲಿ ಡೇವಿಡ್ ಬೀಚೆಸ್ ಲ್ಯಾಬ್, ರಕ್ತದೊತ್ತಡದಲ್ಲಿನ ಬದಲಾವಣೆಗಳನ್ನು ಅರಿಯುವುದಕ್ಕೆ ಹೃದಯರಕ್ತನಾಳದ ವ್ಯವಸ್ಥೆಯಲ್ಲಿ ಈ ಚಾನಲ್ ಗಳು ಬಹಳ ಮುಖ್ಯಪಾತ್ರ ವಹಿಸುವ ಮೂಲಕ ಒತ್ತಡ ಸಂವೇದಕಗಳಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. 

ನಮ್ಮ ಕೀಲುಗಳ ಕಾರ್ಟಿಲೆಜ್ ಗಳಲ್ಲಿನ ಒತ್ತಡದ ಸಂವೇದಿಯಾಗಿಯೂ ಈ ಚಾನಲ್ ಗಳು ಕಾರ್ಯನಿರ್ವಹಣೆ ಮಾಡುವುದನ್ನು 2014 ರಲ್ಲಿ ಡ್ಯೂಕ್ ವಿವಿಯಲ್ಲಿ ವುಲ್ಫ್‌ಗ್ಯಾಂಗ್ ಲೈಡ್‌ಕೆ ಗ್ರೂಪ್ ತೋರಿಸಿತ್ತು. 

ಭಾರತದಲ್ಲಿ ದೀಪ್ಯಮಾನ್ ಗಂಗೂಲಿ ನೇತೃತ್ವದ ಐಐಸಿಬಿ ವಿಜ್ಞಾನಿಗಳು 2018 ರಲ್ಲಿ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆ ದೈಹಿಕ ಸೂಚನೆಗಳನ್ನು ಪಡೆಯುವುದಕ್ಕೆ ಈ ರಿಸೆಪ್ಟರ್ ಗಳ ಮೇಲೆ ಅವಲಂಬಿತವಾಗಿರುತ್ತವೆ ಎಂಬ ಅಂಶವನ್ನು ತೋರಿಸಿತ್ತು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಕ್ಷಣಾ, ಭದ್ರತಾ ಒಪ್ಪಂದ ಬಲವರ್ಧನೆ: ಭಾರತ- ಜರ್ಮನಿ ಮಹತ್ವದ ಕ್ರಮಗಳ ಘೋಷಣೆ!

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

'ಅಜ್ಮೀರ್' ದರ್ಗಾ ಶಿವ ದೇಗುಲವಾಗಿತ್ತು: ಕೋರ್ಟ್ ಮೆಟ್ಟಿಲೇರಿದ ವಿವಾದ!

'ವಿಬಿ-ಜಿ-ರಾಮ್' ಕಾಯ್ದೆ ವಿರುದ್ಧ ಕಾನೂನು ಸಮರ: ವಿಶೇಷ ಅಧಿವೇಶನ ಕರೆದು ಚರ್ಚೆ- ಸಿಎಂ ಸಿದ್ದರಾಮಯ್ಯ

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT