ಆರ್ಡೆಮ್ ಪಟಪೂಟಿಯನ್ 
ದೇಶ

ವೈದ್ಯಕೀಯ ನೊಬೆಲ್ ವಿಜೇತನ ಸಂಶೋಧನೆಗೆ ಭಾರತ ಸರ್ಕಾರದ ಪ್ರಯೋಗಾಲಯ ಸಹಾಕಾರಿ!?

ಮನುಷ್ಯನಿಗೆ ತಾಪಮಾನ ಹಾಗೂ ಸ್ಪರ್ಶದ ಅನುಭವ ಪಡೆಯುವುದಕ್ಕೆ ಅನುವು ಮಾಡಿಕೊಡುವ ರಿಸೆಪ್ಟರ್ ಗಳನ್ನು ಶೋಧನೆ ಮಾಡಿದ್ದಕ್ಕಾಗಿ ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದಾರೆ.

ನವದೆಹಲಿ: ಮನುಷ್ಯನಿಗೆ ತಾಪಮಾನ ಹಾಗೂ ಸ್ಪರ್ಶದ ಅನುಭವ ಪಡೆಯುವುದಕ್ಕೆ ಅನುವು ಮಾಡಿಕೊಡುವ ರಿಸೆಪ್ಟರ್ ಗಳನ್ನು ಶೋಧನೆ ಮಾಡಿದ್ದಕ್ಕಾಗಿ ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದಾರೆ. ಈ ವೈಜ್ಞಾನಿಕ ಮಹತ್ವವನ್ನು ಸ್ಥಾಪಿಸುವುದಕ್ಕೆ ಅವರಿಗೆ ಈ ಹಿಂದೆ ಭಾರತ ಸರ್ಕಾರದ  ಪ್ರಯೋಗಾಲಯದಲ್ಲಿನ ಪ್ರಯೋಗಗಳೂ ನೆರವಾಗಿರಬಹುದು ಎಂದು ಈಗ ವಿಶ್ಲೇಷಿಸಲಾಗುತ್ತಿದೆ. 

ಸಿಎಸ್ಐಆರ್ ನೇತೃತ್ವದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ (ಐಐಸಿಬಿ) 2018 ರಲ್ಲಿ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆ ದೈಹಿಕ ಸೂಚನೆಗಳನ್ನು ಪಡೆಯುವುದಕ್ಕೆ ಈ ರಿಸೆಪ್ಟರ್ ಗಳ ಮೇಲೆ ಅವಲಂಬಿತವಾಗಿರುತ್ತವೆ ಎಂಬ ಅಂಶವನ್ನು ತೋರಿಸಿತ್ತು.

ಪೀಜೋ ಚಾನೆಲ್‌ಗಳನ್ನು ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ಪತ್ತೆ ಮಾಡಿದ್ದು ಇದು 2010 ಕ್ಕಿಂತಲೂ ಮುಂಚೆ ತಿಳಿಯದ ಜೀವಶಾಸ್ತ್ರದ ಸಾಮಾನ್ಯ ವಾಸ್ತವ ಅಂಶವಾಗಿದ್ದು 2010 ಕ್ಕಿಂತಲೂ ಮುನ್ನ ನರಮಂಡಲದ ವ್ಯವಸ್ಥೆಯಲ್ಲಿ ಈ ರಿಸೆಪ್ಟರ್ ಗಳ ಇನ್ನಷ್ಟು ಪಾತ್ರವನ್ನು ಅರಿಯುವುದಕ್ಕಾಗಿ ಹಲವಾರು ಸಂಶೋಧನೆಗಳು ನಡೆದಿವೆ. ಈ ಪೈಕಿ ಭಾರತದ್ದೂ ಸಂಶೋಧನೆ 
 
ಉದಾಹರಣೆಗೆ 2014 ರಲ್ಲಿ ಯೂನಿವರ್ಸಿಟಿ ಆಫ್ ಲೀಡ್ಸ್ ನಲ್ಲಿ ಡೇವಿಡ್ ಬೀಚೆಸ್ ಲ್ಯಾಬ್, ರಕ್ತದೊತ್ತಡದಲ್ಲಿನ ಬದಲಾವಣೆಗಳನ್ನು ಅರಿಯುವುದಕ್ಕೆ ಹೃದಯರಕ್ತನಾಳದ ವ್ಯವಸ್ಥೆಯಲ್ಲಿ ಈ ಚಾನಲ್ ಗಳು ಬಹಳ ಮುಖ್ಯಪಾತ್ರ ವಹಿಸುವ ಮೂಲಕ ಒತ್ತಡ ಸಂವೇದಕಗಳಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. 

ನಮ್ಮ ಕೀಲುಗಳ ಕಾರ್ಟಿಲೆಜ್ ಗಳಲ್ಲಿನ ಒತ್ತಡದ ಸಂವೇದಿಯಾಗಿಯೂ ಈ ಚಾನಲ್ ಗಳು ಕಾರ್ಯನಿರ್ವಹಣೆ ಮಾಡುವುದನ್ನು 2014 ರಲ್ಲಿ ಡ್ಯೂಕ್ ವಿವಿಯಲ್ಲಿ ವುಲ್ಫ್‌ಗ್ಯಾಂಗ್ ಲೈಡ್‌ಕೆ ಗ್ರೂಪ್ ತೋರಿಸಿತ್ತು. 

ಭಾರತದಲ್ಲಿ ದೀಪ್ಯಮಾನ್ ಗಂಗೂಲಿ ನೇತೃತ್ವದ ಐಐಸಿಬಿ ವಿಜ್ಞಾನಿಗಳು 2018 ರಲ್ಲಿ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆ ದೈಹಿಕ ಸೂಚನೆಗಳನ್ನು ಪಡೆಯುವುದಕ್ಕೆ ಈ ರಿಸೆಪ್ಟರ್ ಗಳ ಮೇಲೆ ಅವಲಂಬಿತವಾಗಿರುತ್ತವೆ ಎಂಬ ಅಂಶವನ್ನು ತೋರಿಸಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT