ಸಿಂಘು ಗಡಿಯಲ್ಲಿ ಬರ್ಬರ ಹತ್ಯೆ 
ದೇಶ

ಸಿಂಘು ಗಡಿಯಲ್ಲಿ ರೈತನ ಬರ್ಬರ ಹತ್ಯೆ: ಕೈ ಕಾಲು ಕತ್ತರಿಸಿ ಬ್ಯಾರಿಕೇಡ್​​ಗೆ ಕಟ್ಟಿಹಾಕಿದ ದುಷ್ಕರ್ಮಿಗಳು

ದೆಹಲಿಯ ಹೊರಭಾಗದ ಸಿಂಘು ಗಡಿಯಲ್ಲಿ ರೈತನೋರ್ವ ಬರ್ಬರ ಹತ್ಯೆಯಾಗಿದ್ದು, ಕೈ ಕಾಲು ಕತ್ತರಿಸಿ ಮೃತ ದೇಹವನ್ನು ದುಷ್ಕರ್ಮಿಗಳು ಬ್ಯಾರಿಕೇಡ್ ಗೆ ಕಟ್ಟಿಹಾಕಿ ಕ್ರೂರತೆ ಮೆರೆದಿದ್ದಾರೆ.

ನವದೆಹಲಿ: ದೆಹಲಿಯ ಹೊರಭಾಗದ ಸಿಂಘು ಗಡಿಯಲ್ಲಿ ರೈತನೋರ್ವ ಬರ್ಬರ ಹತ್ಯೆಯಾಗಿದ್ದು, ಕೈ ಕಾಲು ಕತ್ತರಿಸಿ ಮೃತ ದೇಹವನ್ನು ದುಷ್ಕರ್ಮಿಗಳು ಬ್ಯಾರಿಕೇಡ್ ಗೆ ಕಟ್ಟಿಹಾಕಿ ಕ್ರೂರತೆ ಮೆರೆದಿದ್ದಾರೆ.

ಸುಮಾರು 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಕೈಕಾಲುಗಳನ್ನು ಕತ್ತರಿಸಿದ್ದ ರೈತನ ಮೃತದೇಹ ಶುಕ್ರವಾರ ಬೆಳಿಗ್ಗೆ ಪ್ರತಿಭಟನಾ ನಿರತ ರೈತರ ಮುಖ್ಯ ವೇದಿಕೆಯ ಬಳಿ ಬ್ಯಾರಿಕೇಡ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಆರಂಭದಲ್ಲಿ ಪೊಲೀಸರ ಭೇಟಿಗೆ ರೈತರು ಅವಕಾಶ ನೀಡದೆ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಆನಂತರ ಕುಂಡ್ಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಮೃತದೇಹವನ್ನು ಹತ್ತಿರದ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲು ಅನುಮತಿ ನೀಡಿದರು.

ಇನ್ನು ಈ ಘಟನೆಯಲ್ಲಿ ನಿಹಾಂಗ್ ಸಿಖ್‌ (ಯೋಧ ಸಮುದಾಯ) ಗುಂಪನ್ನು ದೂಷಿಸಲಾಗುತ್ತಿದ್ದು, ಆದರೂ ಇದನ್ನು ಅಧಿಕಾರಿಗಳು ದೃಢೀಕರಿಸಿಲ್ಲ. ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಆ ವ್ಯಕ್ತಿಯನ್ನು ಹೊಡೆದು ಕೊಂದು ಹಾಕಲಾಗಿದೆ ಎಂದು ಆರೋಪಿಸಲಾಗಿದೆ. 

ವಿಡಿಯೋ ವೈರಲ್
ಇನ್ನು ಈ ಕೊಲೆಯ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ವ್ಯಕ್ತಿಯ ಕೈಯನ್ನು ಕತ್ತರಿಸಿದ ನಂತರ ರಕ್ತದ ಮಡುವಿನಲ್ಲಿ ಜೀವಂತವಾಗಿದ್ದಾಗ ಆತನಿಂದ ಹೇಳಿಕೆ ಪಡೆಯುತ್ತಿದ್ದಾರೆ. ಆ ವ್ಯಕ್ತಿಯ ಹೆಸರು ಮತ್ತು ತನ್ನ ಮೂಲ ಹಳ್ಳಿಯ ವಿವರಗಳನ್ನು ಹೇಳುವಂತೆ ಒತ್ತಾಯಿಸಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT