50 ರೂಪಾಯಿಗಳಿಗೆ ಸೀರೆ ನೀಡುವ ಆಫರ್ ಘೋಷಿಸಿದ್ದ ಮಳಿಗೆಗಳ ಎದುರು ನಿಂತಿರುವ ಮಹಿಳೆಯರು 
ದೇಶ

50 ರೂ. ಗೆ ಸೀರೆ ಆಫರ್: ಮಳಿಗೆ ಮುಂದೆ 5,000 ನಾರಿಯರ ಜಮಾವಣೆ; ಮಾಲಿಕನಿಗೆ 10 ಸಾವಿರ ರೂ. ದಂಡ

ಪ್ರಚಾರ ಪ್ರಿಯತೆ ಹೇಗೆ ಎಡವಟ್ಟಾಗಬಹುದು ಎಂಬುದಕ್ಕೆ ಈ ವರದಿ ಅತ್ಯುತ್ತಮ ಉದಾಹರಣೆಯಾಗಬಹುದು. 

ತೆಂಕಸಿ: ಪ್ರಚಾರ ಪ್ರಿಯತೆ ಹೇಗೆ ಎಡವಟ್ಟಾಗಬಹುದು ಎಂಬುದಕ್ಕೆ ಈ ವರದಿ ಅತ್ಯುತ್ತಮ ಉದಾಹರಣೆಯಾಗಬಹುದು. 

ಆಗಿದ್ದಿಷ್ಟು. ತಮಿಳುನಾಡಿನ ತೆಂಕಸಿಯ ಅಳಂಗುಳಂ ನಲ್ಲಿ ಟೆಕ್ಸ್ ಟೈಲ್ಸ್ ಮಳಿಗೆ ಮಾಲಿಕ 50 ರೂಪಾಯಿಗಳಿಗೆ ಸೀರೆ ನೀಡುವ ಆಫರ್ ನ್ನು ಘೋಷಿಸಿದ್ದರು. ಇಷ್ಟು ಅಗ್ಗದ ದರದಲ್ಲಿ ಸೀರೆ ಸಿಗುತ್ತೆ ಅಂದರೆ ಕೇಳಬೇಕೆ? 5000 ನಾರಿಯರು ಟೆಕ್ಸ್ ಟೈಲ್ಸ್ ಮಳಿಗೆಯತ್ತ ಧಾವಿಸಿದರು. ಇದರೊಂದಿಗೆ ಸಾಮಾಜಿಕ ಅಂತರ, ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳೆಲ್ಲಾ ಗಾಳಿಗೆ ತೂರಲ್ಪಟ್ಟಿತು.

ಪೊಲೀಸ್ ಠಾಣೆಯಿಂದ 800 ಮೀಟರ್ ದೂರ ಹಾಗೂ ತಾಲೂಕು ಕಚೇರಿಯ ಎದುರುಗಡೆ ಇರುವ ಈ ಮಳಿಗೆಯಲ್ಲಿ ಮೊದಲು ಬಂದ 3,000 ಮಂದಿ ಗ್ರಾಹಕರಿಗೆ 50 ರೂಪಾಯಿಗಳಿಗೆ ಸೀರೆ ನೀಡುವ ಘೋಷಣೆಯನ್ನು ಮಾಡಲಾಗಿತ್ತು.

ವಿಚಿತ್ರ, ವ್ಯಂಗ್ಯವೆಂದರೆ ಕುತುವಿಲಕ್ಕು ಬೆಳಗುವ ಮೂಲಕ ಅಂಗಡಿಯನ್ನು ಉದ್ಘಾಟಿಸಿದ್ದೇ ಹೆಚ್ಚುವರಿ ಎಸ್ ಪಿ (ಮಹಿಳೆಯರ ವಿರುದ್ಧ ದೌರ್ಜನ್ಯ ಅಪರಾಧ ವಿಭಾಗ) ರಾಜೇಂದ್ರನ್, ತೆಂಕಸಿ ಶಾಸಕ ಪಳನಿ ನಾಡರ್, ತಮಿಳುನಾಡು ವಾಣಿಗರ್ ಸಂಘಂಕಳೈನ್ ಪೆರಮೈಪ್ಪುವಿನ ಅಧ್ಯಕ್ಷ ವಿಕ್ರಮರಾಜ. ಮಳಿಗೆ ಉದ್ಘಾಟನೆಗೂ ಮುನ್ನ ತಿರುನಲ್ವೇಲಿ-ತೆಂಕಾಸಿ ಹೆದ್ದಾರಿಯಲ್ಲಿ 50 ರೂಪಾಯಿಗಳಿಗೆ ಸೀರೆ ಎಂಬ ಬೋರ್ಡ್ ನ್ನು ಹಾಕಲಾಗಿತ್ತು.

ಅಳಂಗುಳಂ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ 5000 ಮಂದಿ ಬೆಳಿಗ್ಗೆಯೇ ಮಳಿಗೆಯತ್ತ ಧಾವಿಸಿದ್ದರು. ಈ ಪೈಕಿ ಯಾರೂ ಮಾಸ್ಕ್ ಧರಿಸಿರಲಿಲ್ಲ, ಸಮಾಜಿಕ ಅಂತರ ಅಂದರೆ ಏನು ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಜನದಟ್ಟಣೆಯ ನಿರ್ವಹಣೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಈ ಘಟನೆ ವರದಿಯಾಗುತ್ತಿದ್ದಂತೆಯೇ ಆರೋಗ್ಯ ಅಧಿಕಾರಿಗಳು ಮಳಿಗೆಯ ಮಾಲಿಕರಿಗೆ 10,000 ರೂಪಾಯಿಗಳ ದಂಡ ವಿಧಿಸಿದ್ದು ಮಾಲಿಕ, ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT