ಸಂಗ್ರಹ ಚಿತ್ರ 
ದೇಶ

ಅಶ್ಲೀಲ ವಿಡಿಯೋ ನೋಡಲ್ಲ ಎಂದ 6 ವರ್ಷದ ಬಾಲಕಿಯನ್ನು ಕೊಲೆಗೈದ ಅಪ್ರಾಪ್ತರು!

ಮೂವರು ಅಪ್ರಾಪ್ತರೊಂದಿಗೆ ಅಪ್ರಾಪ್ತೆ ಅಶ್ಲೀಲ ವಿಡಿಯೋ ನೋಡಿಲ್ಲವೆಂದು, ಆಕೆಯನ್ನು ಕೊಲೆ ಮಾಡಿರುವ ಘಟನೆ ಸೆಂಟ್ರಲ್ ಅಸ್ಸೋಂನ ನಾಗಾಂವ್ ಜಿಲ್ಲೆಯ ಕಾಲಿಯಾಬಾರ್​​ನಲ್ಲಿ ನಡೆದಿದೆ.

ನಾಗಾಂವ್: ಮೂವರು ಅಪ್ರಾಪ್ತರೊಂದಿಗೆ ಅಪ್ರಾಪ್ತೆ ಅಶ್ಲೀಲ ವಿಡಿಯೋ ನೋಡಿಲ್ಲವೆಂದು, ಆಕೆಯನ್ನು ಕೊಲೆ ಮಾಡಿರುವ ಘಟನೆ ಸೆಂಟ್ರಲ್ ಅಸ್ಸೋಂನ ನಾಗಾಂವ್ ಜಿಲ್ಲೆಯ ಕಾಲಿಯಾಬಾರ್​​ನಲ್ಲಿ ನಡೆದಿದೆ.

ಅಷ್ಟೇ ಅಲ್ಲದೇ ಬಾಲಾಪರಾಧಿಗಳೊಬ್ಬರ ಪೈಕಿಯ ತಂದೆಗೆ ಈ ಘಟನೆ ಬಗ್ಗೆ ತಿಳಿದಿದ್ರೂ ಸಹ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ನಮ್ಮ ದೇಶದಲ್ಲಿ ಅಶ್ಲೀಲ ವಿಡಿಯೋ ನೋಡುವುದನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ. ಆದ್ರೆ ಇಲ್ಲಿ ಆರು ವರ್ಷದ ಬಾಲಕಿ ನೋಡಲು ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲ್ಲಲಾಗಿದೆ.

ನಾಗಾಂವ್ ಜಿಲ್ಲೆಯಲ್ಲಿ ಕಲ್ಲು ಪುಡಿ ಮಾಡುವ ಗಿರಣಿಯ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಅಲ್ಲಿನ ಓರ್ವ ಹುಡುಗನಿಂದ ಮಾಹಿತಿ ಪಡೆದ ಬಾಲಕಿ ಮನೆಯವರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ, ನಂತರ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ಅಲ್ಲಿ ವೈದ್ಯರು ಆಕೆ ಸತ್ತಿದ್ದಾಳೆ ಎಂದು ಹೇಳಿದ್ದಾರೆ.

ಈ ಮೂವರು ದಿನನಿತ್ಯ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದರು. ಆ ದಿನ ಮಧ್ಯಾಹ್ನ ಸಹ ಅಶ್ಲೀಲ ವಿಡಿಯೋ ನೋಡುತ್ತಿದ್ದರು. ಆ ವೇಳೆ ಹುಡುಗಿಗೆ ಅಶ್ಲೀಲ ವಿಡಿಯೋ ನೋಡಲು ಹೇಳಿದರು. ಆಕೆ ವಿಡಿಯೋ ನೋಡಲು ನಿರಾಕರಿಸಿದಳು. ಇದರಿಂದ ಕುಪಿತರಾದ ಆ ಮೂವರು ಬಾಲಕರು ಆಕೆ ಮೇಲೆ ದಾಳಿ ಮಾಡಿ ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಕೊಂದಿದ್ದಾರೆ. ಬುಧವಾರ ಪೊಲೀಸರು 8 ರಿಂದ 11 ವರ್ಷದೊಳಗಿನ ಮೂವರು ಅಪ್ರಾಪ್ತ ವಯಸ್ಕರನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT