ಎಸ್ಎಸ್ಎಲ್ ವಿ ಮಿಷನ್ 
ದೇಶ

ವಿಚಲನೆಯ ಬಳಿಕ ಉಪಗ್ರಹಗಳ ಬಳಕೆ ಸಾಧ್ಯವಿಲ್ಲ: ಎಸ್ಎಸ್ಎಲ್ ವಿ ಮಿಷನ್ ಬಳಿಕ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಉಡಾವಣೆ ಮಾಡಿರುವ ಎಸ್ಎಸ್ಎಲ್ ವಿ-ಡಿ1 ಉಪಗ್ರಹವನ್ನು ವೃತ್ತಾಕಾರದ ಕಕ್ಷೆಯ ಬದಲಿಗೆ ದೀರ್ಘವೃತ್ತದ ಕಕ್ಷೆಗೆ ಸೇರಿಸಿದ್ದು, ಅದನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ. 

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಉಡಾವಣೆ ಮಾಡಿರುವ ಎಸ್ಎಸ್ಎಲ್ ವಿ-ಡಿ1 ಉಪಗ್ರಹವನ್ನು ವೃತ್ತಾಕಾರದ ಕಕ್ಷೆಯ ಬದಲಿಗೆ ದೀರ್ಘವೃತ್ತದ ಕಕ್ಷೆಗೆ ಸೇರಿಸಿದ್ದು, ಅದನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ. 

ಇಂದಿನ ಉಡಾವಣೆಗೆ ಸಂಬಂಧಿಸಿದಂತೆ ವಿಶ್ಲೇಷಣೆ ನಡೆಸಿ  ಶಿಫಾರಸುಗಳನ್ನು ನೀಡಲು ಸಮಿತಿಯೊಂದನ್ನು ರಚನೆ ಮಾಡಲಾಗಿದೆ, ಶಿಫಾರಸುಗಳನ್ನು ಆಧರಿಸಿ ಇಸ್ರೋ ಎಸ್ಎಸ್ಎಲ್ ವಿ-ಡಿ2 ಉಪಗ್ರಹದೊಂದಿಗೆ ಶೀಘ್ರವೇ ಬರಲಿದೆ ಎಂದು ಹೇಳಿದೆ.

ಎಸ್ಎಸ್ಎಲ್ ವಿ-ಡಿ1 ಉಪಗ್ರಹಗಳನ್ನು 356ಕಿ.ಮೀx 76 ಕಿ.ಮೀ ನ ದೀರ್ಘ ವೃತ್ತಾಕಾರದ  ಕಕ್ಷೆಯಲ್ಲಿರಿಸಿದೆ. ಆದರೆ ಅದು 356 ಕಿ.ಮೀ ವೃತ್ತಾಕಾರಾದ ಕಕ್ಷೆಗೆ ಸೇರಬೇಕಿತ್ತು. ಈ ಉಪಗ್ರಹಗಳನ್ನು ಬಳಕೆ ಮಾಡಲು ಸಾಧ್ಯವಿಲ್ಲ.  ಸಂವೇದಕ ವೈಫಲ್ಯವನ್ನು ಗುರುತಿಸಲು ಲಾಜಿಕ್ ನ ವಿಫಲತೆಯಿಂದ ಈ ಅವಘಡ ಉಂಟಾಗಿದೆ ಎಂದು ಇಸ್ರೋ ಟ್ವಿಟರ್ ಮೂಲಕ ಪ್ರಕಟಿಸಿದೆ. 

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರ ವಿವರವಾದ ಹೇಳಿಕೆಯನ್ನು ಶೀಘ್ರವೇ ಅಪ್ಲೋಡ್ ಮಾಡುವುದಾಗಿ ಇಸ್ರೋ ತಿಳಿಸಿದೆ. 
ಎಸ್‌ಎಸ್‌ಎಲ್‌ವಿ-ಡಿ1 ಇಒಎಸ್ -02 ಉಪಗ್ರಹವನ್ನು ಮತ್ತು ವಿದ್ಯಾರ್ಥಿಗಳೇ ತಯಾರಿಸಿರುವ AzadiSAT ಉಪಗ್ರಹವನ್ನು ಉಡಾವಣೆ ಮಾಡಿತ್ತು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT