ದೇಶ

ಎಎಪಿ ಶಾಸಕರ ಭೇಟಿ: 'ರಾಜ್ ಘಾಟ್' ಶುದ್ಧೀಕರಣ ಕಾರ್ಯಕ್ಕೆ ಬಿಜೆಪಿ ಕಾರ್ಯಕರ್ತರು ಮುಂದು

Nagaraja AB

ನವದೆಹಲಿ: ಅಬಕಾರಿ ನೀತಿ ಸುತ್ತ ಎದ್ದಿರುವ ವಿವಾದಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಆಮ್ ಆದ್ಮಿ ಪಕ್ಷದ ಮುಖಂಡರು ರಾಜ್ ಘಾಟ್ ಗೆ ಭೇಟಿ ನೀಡಿರುವುದಾಗಿ ಗುರುವಾರ ಹೇಳಿರುವ ಬಿಜೆಪಿ, ತನ್ನ ಕಾರ್ಯಕರ್ತರು ಗಂಗಾ ಜಲವನ್ನು ಸಿಂಪಡಿಸಿ ಮಹಾತ್ಮ ಗಾಂಧಿಯ ಸಮಾಧಿಯನ್ನು ಶುದ್ಧೀಕರಿಸಲಿದ್ದಾರೆ ಎಂದು ಹೇಳಿದೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಸುದಾಂಶು ತ್ರಿವೇದಿ, ಅಬಕಾರಿ ನೀತಿ ವಿಚಾರದಲ್ಲಿ ಪಾರದರ್ಶಕವಾಗಿ ಬರುವಂತೆ ಬಿಜೆಪಿ ನಿರಂತರವಾಗಿ ಎಎಪಿಗೆ ಹೇಳುತ್ತಿದೆ. ಆದರೆ, ಅರವಿಂದ್ ಕೇಜ್ರಿವಾಲ್ ಜನರ ಗಮನವನ್ನು ಬೇರೆಡೆ ಸೆಳೆಯಲು ಒಂದಲ್ಲಾ ಒಂದು ರೀತಿಯ ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದರು. 

ಎಎಪಿ ಮುಖಂಡರು ಮಹಾತ್ಮ ಗಾಂಧಿ ಸಮಾಧಿ ಬಳಿಗೆ ಹೋಗಿದ್ದಾರೆ ಎಂದರೆ ನಿಜವಾಗಿಯೂ ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬರ್ಥ ಬರುತ್ತಿದೆ. ಆದ್ದರಿಂದ ಅದನ್ನು ಶುದ್ದೀಕರಿಸಲು ಬಿಜೆಪಿ ಕಾರ್ಯಕರ್ತರು ಸಮಾಧಿಗೆ ಗಂಗಾ ಜಲ ಸಿಂಪಡಿಸಲಿದ್ದಾರೆ ಎಂದು ಅವರು ತಿಳಿಸಿದರು.

SCROLL FOR NEXT