ದೇಶ

ಚೆನ್ನೈ: ಕಬ್ಬಿಣದ ಸರಳುಗಳನ್ನು ಕದ್ದಿದ್ದಕ್ಕಾಗಿ 20 ವರ್ಷದ ಯುವಕನನ್ನು ಥಳಿಸಿ ಹತ್ಯೆ; 8 ಮಂದಿಯ ಬಂಧನ

Ramyashree GN

ಚೆನ್ನೈ: ನಿರ್ಮಾಣ ಸ್ಥಳದಿಂದ ಕಬ್ಬಿಣದ ರಾಡ್‌ಗಳನ್ನು ಕದ್ದ ಆರೋಪದ ಮೇಲೆ 20 ವರ್ಷದ ಯುವಕನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರೇಟರ್ ಚೆನ್ನೈ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ ಮತ್ತು ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮೃತರನ್ನು ಶಾಹಿನ್ ಶಾ ಖಾದರ್ (20) ಎಂದು ಗುರುತಿಸಲಾಗಿದ್ದು, ತನ್ನ ಸ್ನೇಹಿತರಾದ ವಿನೋದ್ (20) ಮತ್ತು ಹೇಮನಂತನ್ (20) ಅವರೊಂದಿಗೆ ಸೋಮವಾರ ರಾತ್ರಿ ಚೆನ್ನೈನ ಸೈದಾಪೇಟ್‌ನ ತೋಡುಂಟರ್ ನಗರದಲ್ಲಿ ನಿರ್ಮಾಣ ಸ್ಥಳದಿಂದ ಕಬ್ಬಿಣದ ರಾಡ್‌ಗಳನ್ನು ಕದಿಯುತ್ತಿದ್ದರು ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೂವರು ಸರ್ಕಾರಿ ಕ್ವಾರ್ಟರ್ಸ್ ನಿರ್ಮಾಣದ ಸ್ಥಳದಿಂದ ಕಬ್ಬಿಣದ ರಾಡ್‌ಗಳನ್ನು ಕದಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸೈಟ್‌ನಿಂದ ಕಬ್ಬಿಣದ ರಾಡ್‌ಗಳನ್ನು ಕಳ್ಳತನ ಮಾಡಲಾಗುತ್ತಿದೆ ಎಂದು ತಿಳಿದ ನಂತರ ಸೈಟ್ ಎಂಜಿನಿಯರ್‌ಗಳು ಮತ್ತು ಕಟ್ಟಡ ಕಾರ್ಮಿಕರು ಸ್ಥಳಕ್ಕೆ ತಲುಪಿದ್ದಾರೆ. ವಿನೋದ್ ಮತ್ತು ಶಾಹಿನ್ ಶಾ ಖಾದರ್ ಸಿಕ್ಕಿಬಿದ್ದರೆ, ಹೇಮಂತನ್ ಪರಾರಿಯಾಗಿದ್ದಾನೆ.

ಬಳಿಕ, ವಿನೋದ್ ಮತ್ತು ಶಾಹಿನ್ ಶಾ ಖಾದರ್ ಅವರ ಕುಟುಂಬ ಸದಸ್ಯರಿಗೆ ನಿರ್ಮಾಣ ಸ್ಥಳದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಹೇಮಂತನ್ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿವೆ.

ವಿನೋದ್ ಮತ್ತು ಶಾಹಿನ್ ಶಾ ಖಾದರ್ ಇಬ್ಬರ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿನೋದ್ ಚೇತರಿಸಿಕೊಳ್ಳುತ್ತಿದ್ದಾಗ, ಶಾಹಿನ್ ಶಾ ಖಾದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇಬ್ಬರ ಮೇಲೆ ಹಲ್ಲೆ ನಡೆಸಿದ ಎಲ್ಲರನ್ನೂ ಬಂಧಿಸಿದ್ದೇವೆ. ಆದರೆ, ಹಲ್ಲೆಯ ಬಗ್ಗೆ ಮಾಹಿತಿ ಮರೆಮಾಚಿದ್ದ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದೆ ಎಂದು ಪೊಲೀಸ್ ತಂಡ ಐಎಎನ್‌ಎಸ್‌ಗೆ ತಿಳಿಸಿದೆ.

SCROLL FOR NEXT