ಸಿಬಿಐ ತನಿಖೆ ಮುಗಿಸಿ ಹೊರಬರುತ್ತಿರುವ ತೆಲಂಗಾಣ ಭಾರತ್ ರಾಷ್ಟ್ರ ಸಮಿತಿಯ ಕೆ ಕವಿತಾ(ಸಂಗ್ರಹ ಚಿತ್ರ) 
ದೇಶ

ಆಮ್ ಆದ್ಮಿ ಪಾರ್ಟಿಗೆ ಲಿಕ್ಕರ್ ಕಿಕ್ ಬ್ಯಾಕ್ ಮಾಡುತ್ತಿದ್ದ ವಿಧಾನ ಹೇಗೆ?: ಇಡಿಯಿಂದ ಬಹಿರಂಗ

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕರ ನಡುವಿನ ಆಳವಾದ ಸಂಬಂಧವನ್ನು ಬಹಿರಂಗವಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ, ಕವಿತಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕರ ಮಧ್ಯೆ ನೀತಿಯಲ್ಲಿ ಒಲವು ಮತ್ತು ದೊಡ್ಡ ಕಿಕ್‌ಬ್ಯಾಕ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಮಧ್ಯವರ್ತಿಗಳನ್ನು ಪ್ರತಿನಿಧಿಗಳನ್ನು ಬಳಸಿಕೊಂಡ

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕರ ನಡುವಿನ ಆಳವಾದ ಸಂಬಂಧವನ್ನು ಬಹಿರಂಗವಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ, ಕವಿತಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕರ ಮಧ್ಯೆ ನೀತಿಯಲ್ಲಿ ಒಲವು ಮತ್ತು ದೊಡ್ಡ ಕಿಕ್‌ಬ್ಯಾಕ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಮಧ್ಯವರ್ತಿಗಳನ್ನು ಪ್ರತಿನಿಧಿಗಳನ್ನು ಬಳಸಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. 

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ತನಿಖೆ ನಡೆಸಿದಾಗ, ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಬಿಗಿಯಾಗಿ ನಿಯಂತ್ರಿತ ಕಾರ್ಟೆಲ್‌ಗಳ ಬಹಿರಂಗವಾಗಿದೆ. "ಪ್ರತಿ ಕಾರ್ಟೆಲ್ ಪ್ರತಿನಿಧಿ ಮಾಲೀಕರು, ಸ್ಲೀಪಿಂಗ್ ಪಾಲುದಾರರು, ಗುಪ್ತ ಹೂಡಿಕೆಗಳು, ಇತ್ಯಾದಿ ಸೇರಿದಂತೆ ಬೃಹತ್ ಸಂಖ್ಯೆಯ ಘಟಕಗಳು ಮತ್ತು ವ್ಯಕ್ತಿಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿರುವ ಜಾರಿ ನಿರ್ದೇಶನಾಲಯ ಅದರ ತನಿಖೆಯನ್ನು ಲಿಕ್ಕರ್ ಹಗರಣ ವಿಚಾರದಲ್ಲಿ ಮುಂದುವರಿಸಿದೆ. 

ಜಾರಿ ನಿರ್ದೇಶನಾಲಯ ಪ್ರಕಾರ, ಕವಿತಾ ಚಿಲ್ಲರೆ ವ್ಯಾಪಾರಿ-ಸಗಟು ವ್ಯಾಪಾರಿ-ತಯಾರಕ ಕಾರ್ಟೆಲ್‌ನ ಭಾಗವಾಗಿದ್ದು ಅದು ಸಾಕಷ್ಟು ಲಾಭ ಗಳಿಸಿದ್ದಾರೆ. ಇದು 32 ಚಿಲ್ಲರೆ ವಲಯಗಳಲ್ಲಿ ಒಂಬತ್ತು ಮತ್ತು ಪ್ರಮುಖ ಸಗಟು ಪರವಾನಗಿಗಳನ್ನು ನಿಯಂತ್ರಿಸುವ ಮೂಲಕ ದೆಹಲಿ ಮದ್ಯದ ವ್ಯಾಪಾರದಿಂದ ಹೆಚ್ಚಿನ ಲಾಭವನ್ನು ಮೂಲೆಗುಂಪು ಮಾಡಿದೆ. AAP ನಾಯಕರಿಗೆ ಭಾರಿ ಕಿಕ್‌ಬ್ಯಾಕ್‌ಗಳನ್ನು ನೀಡಿದೆ ಎಂದು ಇಡಿ ಹೇಳಿಕೊಂಡಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಎಪಿ ಪ್ರಮುಖ ವಿಜಯ್ ನಾಯರ್ ಈ ವ್ಯವಹಾರದ ಪ್ರಮುಖ ಡೀಲ್ ಮೇಕರ್ ಎಂದು ಸಂಸ್ಥೆ ಆರೋಪಿಸಿದೆ. ಅವರು ನೂರಾರು ಕೋಟಿ ರೂಪಾಯಿಗಳ ಕಿಕ್‌ಬ್ಯಾಕ್‌ಗಳನ್ನು ಸಂಗ್ರಹಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದರು ಎಂದು ಅದು ಹೇಳಿದೆ.

ನಾಯರ್ ಅವರು ಆಯ್ಕೆ ಮಾಡಿದ ಸಗಟು ವ್ಯಾಪಾರಿಗಳಿಗೆ ತಮ್ಮ ಡೀಲರ್‌ಶಿಪ್ ನೀಡಲು ಪೆರ್ನೋಡ್ ರಿಕಾರ್ಡ್‌ನಂತಹ ದೊಡ್ಡ ಮದ್ಯ ತಯಾರಕರನ್ನು ಪ್ರಭಾವಿಸಿದ್ದಾರೆ ಎಂದು ಇಡಿ ಹೇಳಿದೆ. ಇದು ಈ ಸಗಟು ವ್ಯಾಪಾರಿಗಳಿಗೆ ದೊಡ್ಡ ವ್ಯಾಪಾರವನ್ನು ನೀಡಿದೆ. ನಂತರ ಅವರ ಶೇಕಡಾ 12ರಷ್ಟು ಲಾಭಾಂಶದ ಅರ್ಧದಷ್ಟು ಭಾಗವನ್ನು ಕಿಕ್‌ಬ್ಯಾಕ್‌ಗಳಾಗಿ ಕೇಳಲಾಗಿದೆ. 

ಕವಿತಾ ಅವರು ಅರುಣ್ ಪಿಳ್ಳೈ ಎಂಬ ಪ್ರತಿನಿಧಿ ಮೂಲಕ ಮಹೇಂದ್ರು ಅವರ ಕಂಪನಿಯಲ್ಲಿ ಶೇಕಡಾ 32.5ರಷ್ಟು ಪಾಲು ಹೊಂದಿದ್ದಾರೆ ಎಂದು ಇಡಿ ಹೇಳಿದೆ. ಕವಿತಾ ಅವರು ಮಹೇಂದ್ರು ಮತ್ತು ಅವರ ಪ್ರತಿನಿಧಿಗಳೊಂದಿಗೆ ದೆಹಲಿ ಮತ್ತು ಹೈದರಾಬಾದ್‌ನಲ್ಲಿ ಅನೇಕ ಸಭೆಗಳನ್ನು ನಡೆಸಿದ್ದಾರೆ ಎಂದು ಅದು ಹೇಳಿದೆ. ಕವಿತಾಗೆ ಪಾಲು ನೀಡುವಂತೆ ನಾಯರ್ ಮಹೇಂದ್ರು ಅವರ ಮೇಲೆ ಏಕೆ ಒತ್ತಡ ಹೇರಿದ್ದರು ಎಂಬುದನ್ನು ಪತ್ತೆ ಹಚ್ಚಲು ಇಡಿ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT