ರಾಹುಲ್ ಶೆವಾಲೆ 
ದೇಶ

ಉದ್ಧವ್ ಗೆ ಹಿನ್ನಡೆ: ಲೋಕಸಭೆ ಶಿವಸೇನೆ ನಾಯಕರಾಗಿ ರಾಹುಲ್ ಶೆವಾಲೆ ಹೆಸರಿಸಿದ ಸ್ಪೀಕರ್ ಓಂ ಬಿರ್ಲಾ

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಬಂಡಾಯ ಸಂಸದ ರಾಹುಲ್ ಶೆವಾಲೆ ಅವರನ್ನು ಸಂಸತ್ತಿನ ಕೆಳಮನೆಯ ಶಿವಸೇನೆ ಪಕ್ಷದ ನಾಯಕ ಎಂದು ಹೆಸರಿಸಿದ್ದಾರೆ.

ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಬಂಡಾಯ ಸಂಸದ ರಾಹುಲ್ ಶೆವಾಲೆ ಅವರನ್ನು ಸಂಸತ್ತಿನ ಕೆಳಮನೆಯ ಶಿವಸೇನೆ ಪಕ್ಷದ ನಾಯಕ ಎಂದು ಹೆಸರಿಸಿದ್ದಾರೆ.

ಲೋಕಸಭೆ ಸೆಕ್ರೆಟರಿಯೇಟ್ ಹೊರಡಿಸಿದ ಸುತ್ತೋಲೆಯ ಮೂಲಕ ತಡರಾತ್ರಿ ಈ ನಿರ್ಧಾರವನ್ನು ತಿಳಿಸಲಾಗಿದೆ.

ಹಾಲಿ ವಿನಾಯಕ ರಾವುತ್ ಅವರ ಮೇಲೆ ಅವಿಶ್ವಾಸ ವ್ಯಕ್ತಪಡಿಸಿ ಶಿವಸೇನೆಯ ಕನಿಷ್ಠ 12 ಲೋಕಸಭಾ ಸದಸ್ಯರು ಸ್ಪೀಕರ್‌ಗೆ ಪತ್ರ ಬರೆದು, ಹಾಲಿ ಸದನದಲ್ಲಿ ಶೆವಾಲೆ ಅವರನ್ನು ತಮ್ಮ ನಾಯಕನನ್ನಾಗಿ ನೇಮಿಸುವಂತೆ ಒತ್ತಾಯಿಸಿದರು. 

ನಿನ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಶಿವಸೇನೆಯ 19 ಲೋಕಸಭಾ ಸದಸ್ಯರಲ್ಲಿ 12 ಮಂದಿ ತಮ್ಮ ಕಡೆಯಿದ್ದು, ಶೆವಾಲೆ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕ ಎಂದು ಹೆಸರಿಸಿದರು.

ಜೂನ್ 20ರಂದು ದೊಡ್ಡ ಪ್ರಮಾಣದ ಶಾಸಕರೊಂದಿಗೆ ಪಕ್ಷದಿಂದ ಹೊರ ನಡೆದ ಶಿಂಧೆ ಅವರು ಬಂಡಾಯದ ನೇತೃತ್ವದ ಒಂದು ತಿಂಗಳ ನಂತರ ಸಂಸತ್ತಿನಲ್ಲಿ ಶಿವಸೇನೆ ಶ್ರೇಣಿಯಲ್ಲಿ ಬ್ರೇಕ್ ಬಿದ್ದಿತು.

ಶಿವಸೇನೆಯಿಂದ ಶಿಂಧೆ ಪಾಳಯಕ್ಕೆ ಸೇರುವ ಶಾಸಕರ ಸಂಖ್ಯೆ ಕ್ರಮೇಣ ಒಟ್ಟು 55ರಲ್ಲಿ 40ಕ್ಕೆ ಏರಿತ್ತು.

ಬಂಡಾಯದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಜೂನ್ 30ರಂದು ಶಿಂಧೆ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!