ಅಗ್ನಿಪಥ್ ಯೋಜನೆ 
ದೇಶ

ಅಗ್ನಿಪಥ್ ನೇಮಕಾತಿ: 1 ಕೋಟಿ ವಿಮೆ, ಕ್ಯಾಂಟೀನ್, 30 ದಿನ ರಜೆ ಸೌಲಭ್ಯ- ಏರ್ ಫೋರ್ಸ್ ನಿಂದ ವಿವರ ಬಿಡುಗಡೆ 

ಅಗ್ನಿಪಥ್ ಯೋಜನೆಯಡಿ ಅಗ್ನಿವೀರರ ನೇಮಕಾತಿಗಾಗಿ ವಾಯುಪಡೆ ತನ್ನ ವೆಬ್ ಸೈಟ್ ನಲ್ಲಿ ವಿವರಗಳನ್ನು ಬಿಡುಗಡೆ ಮಾಡಿದೆ. ಈ ವಿವರದ ಪ್ರಕಾರ 4 ವರ್ಷಗಳ ಸೇವಾವಧಿಯಲ್ಲಿ ಖಾಯಂ ಯೋಧರಿಗೆ ಸಿಗುವ ಸೌಲಭ್ಯಗಳಿಗನುಗುಣವಾಗಿ ಹಲವು ಸೌಲಭ್ಯಗಳನ್ನು ಅಗ್ನಿವೀರರಿಗೂ ವಾಯುಪಡೆ ಒದಗಿಸಲಿದೆ.

ನವದೆಹಲಿ: ಅಗ್ನಿಪಥ್ ಯೋಜನೆಯಡಿ ಅಗ್ನಿವೀರರ ನೇಮಕಾತಿಗಾಗಿ ವಾಯುಪಡೆ ತನ್ನ ವೆಬ್ ಸೈಟ್ ನಲ್ಲಿ ವಿವರಗಳನ್ನು ಬಿಡುಗಡೆ ಮಾಡಿದೆ. ಈ ವಿವರದ ಪ್ರಕಾರ 4 ವರ್ಷಗಳ ಸೇವಾವಧಿಯಲ್ಲಿ ಖಾಯಂ ಯೋಧರಿಗೆ ಸಿಗುವ ಸೌಲಭ್ಯಗಳಿಗನುಗುಣವಾಗಿ ಹಲವು ಸೌಲಭ್ಯಗಳನ್ನು ಅಗ್ನಿವೀರರಿಗೂ ವಾಯುಪಡೆ ಒದಗಿಸಲಿದೆ.

ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾದ ಮಾಹಿತಿ ಪ್ರಕಾರ, ಸಂಬಳದ ಜೊತೆಗೆ ಅಗ್ನಿವೀರರಿಗೆ ಸಮವಸ್ತ್ರ ಭತ್ಯೆ, ಕ್ಯಾಂಟೀನ್ ಸೌಲಭ್ಯ ಮತ್ತು ವೈದ್ಯಕೀಯ ಸೌಲಭ್ಯವೂ ಸಿಗಲಿದೆ. ಈ  ಸೌಲಭ್ಯಗಳು ಸಾಮಾನ್ಯ ಸೈನಿಕರಿಗೂ ದೊರೆಯುತ್ತಿವೆ.

ಸೇವಾವಧಿಯಲ್ಲಿ ಅಗ್ನಿ ವೀರರು ಪ್ರಯಾಣ ಭತ್ಯೆ ಪಡೆಯಲಿದ್ದಾರೆ. ಇದಲ್ಲದೇ ವರ್ಷದಲ್ಲಿ 30 ದಿನ ರಜೆ ಸಿಗಲಿದೆ. ಅವರಿಗೆ ವೈದ್ಯಕೀಯ ರಜೆ ವ್ಯವಸ್ಥೆ ಪ್ರತ್ಯೇಕ. ಅಗ್ನಿವೀರರಿಗೆ ಸಿಎಸ್ ಡಿ ಕ್ಯಾಂಟೀನ್ ಸೌಲಭ್ಯವೂ ಸಿಗಲಿದೆ. ದುರಾದೃಷ್ಟವಶಾತ್ ಒಬ್ಬ ಅಗ್ನಿವೀರನು ಸೇವಾವಧಿಯಲ್ಲಿ (ನಾಲ್ಕು ವರ್ಷಗಳು) ಮರಣ ಹೊಂದಿದರೆ ಅವನ ಕುಟುಂಬವು ವಿಮಾ ರಕ್ಷಣೆಯನ್ನು ಪಡೆಯುತ್ತದೆ. ಇದರಡಿ ಅವರ ಕುಟುಂಬಕ್ಕೆ ಸುಮಾರು 1 ಕೋಟಿ ರೂ. ವಿಮೆ ದೊರೆಯಲಿದೆ.

ಅಗ್ನಿವೀರರು 4 ವರ್ಷಗಳ ಸೇವಾ ಅವಧಿಯಲ್ಲಿ 48 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಇದಲ್ಲದೇ  ಅಗ್ನಿವೀರನ ನಿವೃತ್ತಿ ನಿಧಿಗೆ ಠೇವಣಿ ಇಟ್ಟಿರುವ ಮೊತ್ತದ ಮೇಲಿನ ಸರ್ಕಾರದ ಕೊಡುಗೆ ಮತ್ತು ಬಡ್ಡಿಯನ್ನು ಅಗ್ನಿವೀರ್ ಕುಟುಂಬಕ್ಕೆ ನೀಡಲಾಗುತ್ತದೆ. 

ಅಗ್ನೀವೀರರು ಕರ್ತವ್ಯದ ಸಾಲಿನಲ್ಲಿ ಅಂಗವಿಕಲರಾದರೆ 44 ಲಕ್ಷ ರೂ. ಇದರೊಂದಿಗೆ ಕೆಲಸದ ಪೂರ್ಣ ವೇತನ ದೊರೆಯಲಿದೆ. ಸೇವಾ ನಿಧಿಯ ಪ್ಯಾಕೇಜ್ ಕೂಡಾ ದೊರೆಯಲಿದೆ. ಸೇವೆಯನ್ನು ಪೂರ್ಣಗೊಳಿಸಿದ ನಂತರ ಅಗ್ನಿವೀರರಿಗೆ ವಿವರವಾದ ಕೌಶಲ್ಯ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣ ಪತ್ರ ಅಗ್ನಿವೀರರ ಕೌಶಲ್ಯ ಮತ್ತು ಅರ್ಹತೆಗಳನ್ನು ವಿವರಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT