ಗುವಾಹಟಿ ಹೋಟೆಲ್ ನಲ್ಲಿ ಚೆಸ್ ಆಡುತ್ತಿರುವ ಏಕನಾಥ್ ಶಿಂಧೆ. 
ದೇಶ

ಗುವಾಹಟಿ, ಸೂರತ್‌ನಲ್ಲಿ ಹೋಟೆಲ್ ಬಿಲ್‌ ಯಾರು ಪಾವತಿಸುತ್ತಿದ್ದಾರೆ; ಐಟಿ ಇಲಾಖೆ, ಇಡಿ ಈ ಬ್ಲ್ಯಾಕ್ ಮನಿ ಮೂಲ ಪತ್ತೆ ಮಾಡಬೇಕು: ಎನ್'ಸಿಪಿ

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವ ನಡುವಲ್ಲೇ ಸೂರತ್ ಹಾಗೂ ಗುವಾಹಟಿಯಲ್ಲಿ ಬಂಡಾಯ ಶಾಸಕರ ಹೋಟೆಲ್ ಬಿಲ್ ಗಳನ್ನು ಯಾರು ಪಾವತಿ ಮಾಡುತ್ತಿದ್ದಾರೆಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಶನಿವಾರ ಪ್ರಶ್ನೆ ಮಾಡಿದೆ.

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವ ನಡುವಲ್ಲೇ ಸೂರತ್ ಹಾಗೂ ಗುವಾಹಟಿಯಲ್ಲಿ ಬಂಡಾಯ ಶಾಸಕರ ಹೋಟೆಲ್ ಬಿಲ್ ಗಳನ್ನು ಯಾರು ಪಾವತಿ ಮಾಡುತ್ತಿದ್ದಾರೆಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಶನಿವಾರ ಪ್ರಶ್ನೆ ಮಾಡಿದೆ.

ಎನ್'ಸಿಪಿ ಮುಖ್ಯ ವಕ್ತಾರ ಮಹೇಶ್ ತಾಪಸೆ ಅವರು ಮಾತನಾಡಿ, ಸೂರತ್ ಮತ್ತು ಗುವಾಹಟಿಯ ಹೋಟೆಲ್‌ಗಳು ಹಾಗೂ ಚಾರ್ಟರ್ಡ್ ಫ್ಲೈಟ್‌ನ ಬಿಲ್‌ಗಳನ್ನು ಯಾರು ಪಾವತಿಸುತ್ತಿದ್ದಾರೆ? ಕುದುರೆ ವ್ಯಾಪಾರದ ದರ 50 ಕೋಟಿ ರೂಪಾಯಿಗಳು ನಿಜವೇ?" ಇಡಿ ಮತ್ತು ಐಟಿ ತನ್ನ ಕಾರ್ಯದಲ್ಲಿ ಸಕ್ರಿಯಗೊಂಡರೆ ಈ ಕಪ್ಪು ಹಣದ ಮೂಲ ಬಯಲಾಗುತ್ತದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವರಾಗಿದ್ದ ಏಕನಾಥ್ ಶಿಂಧೆ ಬಂಡಾಯವೆದ್ದಿದ್ದು, ವಿಧಾನ ಪರಿಷತ್‌ ಮತ್ತು ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲೇ 10ಕ್ಕೂ ಹೆಚ್ಚು ಸೇನಾ ಶಾಸಕರೊಂದಿಗೆ ಸೂರತ್‌ಗೆ ತೆರಳಿದ್ದರು. ನಂತರ 26ಕ್ಕೂ ಹೆಚ್ಚು ಶಾಸಕರು ಠಾಕ್ರೆ ವಿರುದ್ಧ ಬಂಡಾಯವೆದ್ದು, ಶಿಂಧೆ ಜೊತೆ ಗುಜರಾತ್‌ಗೆ ತೆರಳಿದ್ದರು. ಇದೀಗ ರೆಬೆಲ್ ಶಾಸಕರನ್ನ ಸೂರತ್‌ನಿಂದ ಅಸ್ಸಾಂನ ಗುವಾಹಟಿಗೆ ಸ್ಥಳಾಂತರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT