ಮಾಯಾವತಿ 
ದೇಶ

ಮುಸ್ಲಿಮರು ಬಿಎಸ್ ಪಿಗೆ ಮತ ಹಾಕಿದ್ದರೆ ಬಿಜೆಪಿ ಗೆಲ್ಲುತ್ತಿರಲಿಲ್ಲ: ಮಾಯಾವತಿ

ಮುಸ್ಲಿಮರು ಬಿಎಸ್ ಪಿಗೆ ಮತ ಹಾಕಿದ್ದರೆ ಬಿಜೆಪಿ ಗೆಲ್ಲುತ್ತಿರಲಿಲ್ಲ ಎಂದು ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಅಸಮಾಧಾನ ಹೊರಹಾಕಿದ್ದಾರೆ.

ಲಖನೌ: ಮುಸ್ಲಿಮರು ಬಿಎಸ್ ಪಿಗೆ ಮತ ಹಾಕಿದ್ದರೆ ಬಿಜೆಪಿ ಗೆಲ್ಲುತ್ತಿರಲಿಲ್ಲ ಎಂದು ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಅಸಮಾಧಾನ ಹೊರಹಾಕಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿ ಕೇವಲ 1 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿರುವ ಮಾಯಾವತಿ ನೇತೃತ್ವದ ಬಿಎಸ್ ಪಿ ಪಕ್ಷ ಹೀನಾಯ ಪ್ರದರ್ಶನ ತೋರಿದ್ದು, ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿರುವ ಮಾಯಾವತಿ, 'ಮುಸ್ಲಿಂ ಸಮುದಾಯದ ಮತಗಳು ದಲಿತರ ಬಳಿ ಇದ್ದಿದ್ದರೆ, ಫಲಿತಾಂಶವು ಅದ್ಭುತವಾಗಿರುತ್ತಿತ್ತು. ಆದರೆ ಮನುವಾದಿ ಮಾಧ್ಯಮಗಳು ಎಸ್‌ಪಿ ಮಾತ್ರ ಬಿಜೆಪಿಯನ್ನು ತಡೆಯಲು ಸಾಧ್ಯ ಎಂದು ನಿರೂಪಣೆ ಮಾಡುವುದರೊಂದಿಗೆ, ಮುಸ್ಲಿಮರು ಸಂಪೂರ್ಣವಾಗಿ ಎಸ್‌ಪಿಗೆ ಬೆಂಬಲ ಸೂಚಿಸಿವೆ ಎಂದು ಕಿಡಿಕಾರಿದರು.

'ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಬಿಎಸ್‌ಪಿಯ ನಿರೀಕ್ಷೆಗೆ ವಿರುದ್ಧವಾಗಿವೆ. ಅದಕ್ಕೆ ನಾವು ಎದೆಗುಂದಬಾರದು. ಬದಲಿಗೆ ನಾವು ಅದನ್ನು ರೂಪಿಸಿಕೊಳ್ಳುವುದನ್ನು ಕಲಿಯಬೇಕು, ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ನಮ್ಮ ಪಕ್ಷದ ಚಳುವಳಿಯನ್ನು ಮುಂದುವರಿಸಬೇಕು ಮತ್ತು ಮತ್ತೆ ಅಧಿಕಾರಕ್ಕೆ ಬರಬೇಕು. 2017 ರ ಮೊದಲು ಬಿಜೆಪಿ ಉತ್ತರ ಪ್ರದೇಶದಲ್ಲಿ ಉತ್ತಮ ಪಾಲನ್ನು ಹೊಂದಿರಲಿಲ್ಲ. ಅದೇ ರೀತಿ ಇಂದು, ಬಿಜೆಪಿಯಂತೆಯೇ ಕಾಂಗ್ರೆಸ್ ಕೂಡ ಅದೇ ಹಂತಕ್ಕೆ ಕುಸಿದಿದೆ. ಉತ್ತರ ಪ್ರದೇಶ ಚುನಾವಣಾ ಫಲಿತಾಂಶವು ಪ್ರಯತ್ನವನ್ನು ಮುಂದುವರಿಸಲು ನಮಗೆ ಪಾಠವಾಗಿದೆ. ನಕಾರಾತ್ಮಕ ಪ್ರಚಾರಗಳು ಮತದಾರರ ದಾರಿತಪ್ಪಿಸುವಲ್ಲಿ ಯಶಸ್ವಿಯಾಗಿವೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. 

ಅಂತೆಯೇ ಬಿಎಸ್‌ಪಿ ಬಿಜೆಪಿಯ ಬಿ-ಟೀಮ್ ಎಂಬುದು ಸತ್ಯ ಇದಕ್ಕೆ ವಿರುದ್ಧವಾಗಿದೆ, ಬಿಜೆಪಿ ಮತ್ತು ಬಿಎಸ್‌ಪಿ ಯುದ್ಧವು ರಾಜಕೀಯ ಮಾತ್ರವಲ್ಲ, ತಾತ್ವಿಕ ಮತ್ತು ಚುನಾವಣೆಯೂ ಆಗಿತ್ತು. ಎಸ್‌ಪಿಯನ್ನು ನಂಬುವುದು ನಮ್ಮ ದೊಡ್ಡ ತಪ್ಪು. ನನ್ನ ಭ್ರಾತೃತ್ವ [ದಲಿತರು] ಬಂಡೆಯಂತೆ ನನ್ನೊಂದಿಗೆ ನಿಂತಿರುವುದು ತೃಪ್ತಿಯ ವಿಷಯ ಎಂದು ಮಾಯಾವತಿ  ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT