ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಸ್ಲಿಂ ಟೋಪಿ ಧರಿಸಿರುವ ಹಾಗೂ ಅವರು 'ಹಿಂದೂ ವಿರೋಧಿ' ಎಂದು ಬಿಂಬಿಸುವ ಬ್ಯಾನರ್ಗಳು ಗುಜರಾತ್ನ ಹಲವು ಪ್ರಮುಖ ನಗರಗಳಲ್ಲಿ ಶನಿವಾರ ಕಾಣಿಸಿಕೊಂಡಿವೆ.
ಕೇಜ್ರಿವಾಲ್ ವಿಧಾನಸಭಾ ಚುನಾವಣೆ ಹಿನ್ನಲೆ ಚುನಾವಣಾ ಪ್ರಚಾರಕ್ಕಾಗಿ ಗುಜರಾತ್ ಗೆ ಆಗಮಿಸುತ್ತಿದ್ದು ಇದರ ಮಧ್ಯೆ 'ನಾನು ಹಿಂದೂ ಧರ್ಮದವನ್ನು ಹುಚ್ಚುತನವೆಂದು ಪರಿಗಣಿಸುತ್ತೇನೆ" ಎಂದು ಬರೆದಿರುವ ಹಾಗೂ ಮುಸ್ಲಿಂ ಕ್ಯಾಪ್ ಧರಿಸಿರುವ ಬ್ಯಾನರ್ ಗಳು ಕಾಣಸಿಗುತ್ತಿದೆ. ಇನ್ನು ಕೆಲವಡೆ 'ಹಿಂದೂ ವಿರೋಧಿ ಕೇಜ್ರಿವಾಲ್ ಗೋ ಬ್ಯಾಕ್' ಎಂದು ಬರೆದಿರುವ ಬ್ಯಾನರ್ ಗಳು ಪ್ರತ್ಯಕ್ಷವಾಗಿದೆ.
ಈ ಬ್ಯಾನರ್ಗಳು ಅಹಮದಾಬಾದ್, ರಾಜ್ಕೋಟ್, ಸೂರತ್ ಮತ್ತು ವಡೋದರಾ ನಗರಗಳಲ್ಲಿ ಕಟ್ಟಲಾಗಿದೆ. ಆಮ್ ಆದ್ಮಿ ಪಕ್ಷದ ದೆಹಲಿ ಸಚಿವ ರಾಜೇಂದ್ರ ಪಾಲ್ ಗೌತಮ್ 'ಧಾರ್ಮಿಕ ಮತಾಂತರ' ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳನ್ನು ನಿರಾಕರಿಸುವ ಪ್ರಮಾಣ ವಚನ ಸ್ವೀಕರಿಸುತ್ತಿರುವ ವಿಡಿಯೋ ವೈರಲ್ ಬಳಿಕ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕೇಜ್ರಿವಾಲ್ ಮತ್ತು ಗ್ಯಾಂಗ್ ಹಿಂದೂ, ಹಿಂದುತ್ವವನ್ನು ಏಕೆ ದ್ವೇಷಿಸುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ: ಕಿರಣ್ ರಿಜಿಜು
ಇನ್ನು ಬಿಜೆಪಿ ಸಚಿವ ರಾಜೇಂದ್ರ ಪಾಲ್ ಗೌತಮ್ ನಡೆಯನ್ನು ತೀವ್ರವಾಗಿ ಖಂಡಿಸಿದ್ದು ನೀವು ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದ್ದೀರಿ ಎಂದು ಆರೋಪಿಸಿದೆ. 'ನಾನು ಹಿಂದೂ ಧರ್ಮವನ್ನು ಹುಚ್ಚುತನ ಎಂದು ಪರಿಗಣಿಸುತ್ತೇನೆ', 'ಬ್ರಹ್ಮ, ವಿಷ್ಣು, ರಾಮ ಮತ್ತು ಕೃಷ್ಣರನ್ನು ನಾನು ನಂಬುವುದಿಲ್ಲ' ಮತ್ತು 'ನಾನು ಶ್ರದ್ಧಾ, ಪಿಂಡ ದಾನ ಅಥವಾ ಇತರ ಯಾವುದೇ ಹಿಂದೂ ಆಚರಣೆಗಳನ್ನು ಮಾಡುವುದಿಲ್ಲ ಎಂದು ಬ್ಯಾನರ್ ಗಳ ಮೇಲೆ ಬರೆದಿದೆ.
ಎಎಪಿ ಮತ್ತು ಕೇಜ್ರಿವಾಲ್ ಅವರನ್ನು ಟೀಕಿಸುವ ಪೋಸ್ಟರ್ಗಳನ್ನು ರಾಜ್ಕೋಟ್ನಲ್ಲಿ ಪಕ್ಷದ ಸದಸ್ಯರು ಕಿತ್ತುಹಾಕಿದ್ದಾರೆ. ದೆಹಲಿ ಮುಖ್ಯಮಂತ್ರಿ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಶನಿವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದ ದಾಹೋದ್ ನಗರದಲ್ಲಿ 'ಹಿಂದೂ ವಿರೋಧಿ ಕೇಜ್ರಿವಾಲ್ ಗೋ ಬ್ಯಾಕ್' ಎಂಬ ಬ್ಯಾನರ್ಗಳು ಕಂಡುಬಂದಿವೆ. ಈ ಇಬ್ಬರು ಎಎಪಿ ನಾಯಕರು ತಮ್ಮ ಎರಡು ದಿನಗಳ ಗುಜರಾತ್ ಭೇಟಿಯನ್ನು ಶನಿವಾರ ಆರಂಭಿಸಿದ್ದಾರೆ.