ದೇಶ

ಕಾಶ್ಮೀರದಲ್ಲಿ ಅಮಾಯಕರ ಹತ್ಯೆ, ಆಕ್ರೋಶಿತ ಜನರಿಂದ ಹುರಿಯತ್ ಕಾನ್ಫರೆನ್ಸ್ ಕಚೇರಿಗೆ ಹಾನಿ

Nagaraja AB

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ ಇತ್ತೀಚಿಗಿನ ಅಮಾಯಕರ ಹತ್ಯೆಯಿಂದ ಆಕ್ರೋಶಗೊಂಡ ಕೆಲವು ಸಾಮಾಜಿಕ ಕಾರ್ಯಕರ್ತರು ಸೋಮವಾರ ಪ್ರತ್ಯೇಕತವಾದಿ ಹುರಿಯತ್ ಕಾನ್ಫರೆನ್ಸ್ ನ ಕಚೇರಿಯನ್ನು ಹಾನಿಗೊಳಿಸಿದ್ದಾರೆ.

ರಾಜ್ ಭಾಗ್ ಪ್ರದೇಶದಲ್ಲಿರುವ ಪ್ರತ್ಯೇಕತವಾದಿ ಹುರಿಯತ್ ಕಾನ್ಫರೆನ್ಸ್ ಕಚೇರಿ ಹೊರಗಡೆ ಜಮಾಯಿಸಿದ್ದ ಸಾಮಾಜಿಕ ಕಾರ್ಯಕರ್ತರ ಗುಂಪು, ಹುರಿಯತ್ ಮುಖಂಡರು ಕಳೆದ 30 ವರ್ಷಗಳಿಂದ ಜನರನ್ನು ವಂಚಿಸುತ್ತಿದ್ದಾರೆ. ಕಾಶ್ಮೀರದಲ್ಲಿನ ಅಮಾಯಕರ ಹತ್ಯೆಗೆ ಅವರೇ ಹೊಣೆಗಾರರು ಎಂದು ಆರೋಪಿಸಿದರು. ಹುರಿಯತ್ ಕಾನ್ಫರೆನ್ಸ್ ಕಚೇರಿ ಮೇಲಿದ್ದ ನಾಮಫಲಕವನ್ನು ಕಿತ್ತೊಗೆದರು.

ಹುರಿಯತ್ ಕಾನ್ಫರೆನ್ಸ್ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಲು ನಿಂತಿರುವ ಪ್ರತ್ಯೇಕತಾವಾದಿ ಪಕ್ಷಗಳ ಒಕ್ಕೂಟವಾಗಿದೆ. ಸ್ವತಂತ್ರ ರಾಜ್ಯವನ್ನು ಬಯಸುತ್ತಾರೆಯೇ ಅಥವಾ ಪಾಕಿಸ್ತಾನದೊಂದಿಗೆ ವಿಲೀನಗೊಳಿಸುತ್ತಾರೆಯೇ ಎಂಬ ಬಗ್ಗೆ ಹುರಿಯತ್ ಮುಖಂಡರ ನಡುವೆ ಭಿನ್ನಾಭಿಪ್ರಾಯವಿದೆ.

ಈ ಭಿನ್ನಾಭಿಪ್ರಾಯದಿಂದಾಗಿ ಅಂತಿಮ ದಿವಂಗತ ಸೈಯದ್ ಆಲಿ ಗಿಲಾನಿ ಮತ್ತು ಮಿವೈಜ್ ಉಮರ್ ಫಾರೂಖ್ ನೇತೃತ್ವದಲ್ಲಿ ಎರಡು ಬಣಗಳಾಗಿ ಹುರಿಯತ್ ಕಾನ್ಫರೆನ್ಸ್ ವಿಭಜನೆಯಾಗಿದೆ.

SCROLL FOR NEXT