ಸಾಂದರ್ಭಿಕ ಚಿತ್ರ 
ದೇಶ

ದೀಪಾವಳಿ ಹಬ್ಬದ ಸಮಯ, ಭಾರತದಲ್ಲಿ ಓಮಿಕ್ರಾನ್ ಹೊಸ ಉಪ ರೂಪಾಂತರಿ ಬಿಎಫ್.7 ಪತ್ತೆ, ನಾಗರಿಕರಿಗೆ ಎಚ್ಚರಿಕೆ

ಇನ್ನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಬರುತ್ತದೆ. ಈ ಹೊತ್ತಿನಲ್ಲಿ ದೇಶದಲ್ಲಿ ಸೋಂಕು ಹರಡುವ ಓಮಿಕ್ರಾನ್ ರೂಪಾಂತರ BF..7 ಪತ್ತೆಯಾಗಿದೆ. ಇದೇ ರೂಪಾಂತರಿ ವೈರಸ್ ಇತ್ತೀಚೆಗೆ ಚೀನಾ, ಅಮೆರಿಕ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಬರುತ್ತದೆ. ಈ ಹೊತ್ತಿನಲ್ಲಿ ದೇಶದಲ್ಲಿ ಸೋಂಕು ಹರಡುವ ಓಮಿಕ್ರಾನ್ ರೂಪಾಂತರ BF..7 ಪತ್ತೆಯಾಗಿದೆ. ಇದೇ ರೂಪಾಂತರಿ ವೈರಸ್ ಇತ್ತೀಚೆಗೆ ಚೀನಾ, ಅಮೆರಿಕ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

'ಓಮಿಕ್ರಾನ್ ಸ್ಪಾನ್' ಎಂದು ಕರೆಯಲ್ಪಡುವ BF.7 ನ ಮೊದಲ ಪ್ರಕರಣವನ್ನು ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರವು ಪತ್ತೆಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೂಪಾಂತರ, BA.5.2.1.7 ಅಥವಾ ಸಂಕ್ಷಿಪ್ತವಾಗಿ BF.7, Omicron ಉಪ ರೂಪಾಂತರಿ BA.5 ನ ಉಪ ಉತ್ಪನ್ನ ಆಗಿದೆ, ಇದು ಪ್ರಸ್ತುತ ಅಮೆರಿಕ ಮತ್ತು ಇತರ ದೇಶಗಳಲ್ಲಿ ಪ್ರಬಲವಾದ SARS-CoV-2ನ ರೂಪಾಂತರವಾಗಿದೆ.

ಈ ರೂಪಾಂತರವು ಹೆಚ್ಚು ವೈರಸ್ ಆಗಿ ಹೊರಹೊಮ್ಮುತ್ತದೆಯೇ ಮತ್ತು ಭಾರತದಲ್ಲಿ ಹೊಸ ಉಲ್ಬಣಕ್ಕೆ ಕಾರಣವಾಗಬಹುದೇ ಎಂದು ಪತ್ತೆಹಚ್ಚಲು ನಾವು ಪರಿಸ್ಥಿತಿ ನೋಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. 

ವಾಯುವ್ಯ ಚೀನಾದ ಒಳ ಮಂಗೋಲಿಯಾ ಸ್ವಾಯತ್ತ ಪ್ರದೇಶದಲ್ಲಿ ಮೊದಲು ಗುರುತಿಸಲ್ಪಟ್ಟ ಒಂದು ವಾರದ ನಂತರ ಚೀನಾದ ಮೂಲಕ ವ್ಯಾಪಿಸಿದ ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ. ಹೆಚ್ಚಿನ ಪ್ರಸರಣವನ್ನು ತೋರಿಸಿದೆ.

ಅಕ್ಟೋಬರ್ 4 ರಂದು ಹೊಸ ರೂಪಾಂತರ ಪತ್ತೆಯಾದ ನಂತರ, ಚೀನಾ ಹೊಸ ಲಾಕ್‌ಡೌನ್‌ ಮತ್ತು ಪ್ರಯಾಣ ನಿರ್ಬಂಧಗಳನ್ನು ಘೋಷಿಸಿತು. ದೇಶದಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯನ್ನು ಸಹ ಅವರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತವು ಸತತವಾಗಿ 2,000 ಕೋವಿಡ್ ಪ್ರಕರಣಗಳನ್ನು ವರದಿ ಮಾಡುತ್ತಿದೆ ಎಂದು ಕೇರಳದ ಕೋವಿಡ್ ಡೇಟಾ ವಿಶ್ಲೇಷಕ ಎನ್‌ಸಿ ಕೃಷ್ಣಪ್ರಸಾದ್ ಹೇಳಿದ್ದಾರೆ, ಕೇರಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಂತಹ ಕೆಲವು ರಾಜ್ಯಗಳು ಕಳೆದ ಕೆಲವು ವಾರಗಳಲ್ಲಿ ಪ್ರಕರಣಗಳಲ್ಲಿ ಹೆಚ್ಚಳವನ್ನು ತೋರಿಸಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ಹೊಸ ರೂಪಾಂತರದ ಬಗ್ಗೆ ಎಚ್ಚರಿಕೆ ನೀಡಿದೆ.

ನ್ಯಾಷನಲ್ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ​​(IMA) ಕೋವಿಡ್-19 ಕಾರ್ಯಪಡೆಯ ಸಹ-ಅಧ್ಯಕ್ಷ ರಾಜೀವ್ ಜಯದೇವನ್ ಪ್ರಕಾರ, “BF.7 ಎಂಬುದು BA.5 ರ ವಂಶವೈರಸ್ ಗೆ  ನೀಡಿದ ಹೆಸರು, ಇದು ಪ್ರಮುಖ ಉಪ-ವಂಶ ಅಥವಾ ಓಮಿಕ್ರಾನ್ ನ ವಂಶೂರೂಪಾಂತರಿ ವೈರಸ್ ಆಗಿದೆ. 

ದೀಪಾವಳಿ ಹಬ್ಬದ ಸೀಸನ್ ಸಮೀಪಿಸುತ್ತಿರುವುದರಿಂದ ಜನರು ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT