ದೇಶ

ಉತ್ತರ ಪ್ರದೇಶ: ಶೌಚಾಲಯದ ಆಸನ ಕದ್ದ ಶಂಕೆ, ದಲಿತ ವ್ಯಕ್ತಿಗೆ ಥಳಿತ; ಬಿಜೆಪಿ ನಾಯಕ ಸೇರಿ ಮೂವರ ಬಂಧನ 

Srinivas Rao BV

ಬಹ್ರೈಚ್: ಶೌಚಾಲಯದ ಆಸನವನ್ನು ಕದ್ದ ಶಂಕೆಯಲ್ಲಿ 30 ವರ್ಷದ ದಲಿತ ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ.
 
ಬಿಜೆಪಿ ನಾಯಕನೂ ಸೇರಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದು, ದಿನಗೂಲಿ ಕಾರ್ಮಿಕ ರಾಜೇಶ್ ಕುಮಾರ್ ಸಂತ್ರಸ್ತ ವ್ಯಕ್ತಿ ಎಂದು ತಿಳಿದುಬಂದಿದೆ.
 
ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಪ್ರಾರಂಭಗೊಂಡಿದೆ. ಬಿಜೆಪಿ ನಾಯಕ ರಾಧೇಶ್ಯಾಮ್ ಮಿಶ್ರಾ, ಸರೋಜ್ ಅಲಿಯಾಸ್ ರೇಣು ವಾಜಪೇಯಿ, ರಾಕೇಶ್ ತಿವಾರಿ ವಿರುದ್ಧ ಪ್ರಕರಣ ದಾಖಲಾಗಿದೆ. 

SCROLL FOR NEXT