ಆಗಸ್ಟಾ ಹೆಲಿಕಾಪ್ಟರ್ (ಸಂಗ್ರಹ ಚಿತ್ರ) 
ದೇಶ

ಆಗಸ್ಟಾ ವೆಸ್ಟ್ ಲ್ಯಾಂಡ್ ಗೆ ಸಂಬಂಧಿಸಿದ ಪ್ರಕರಣ: ಸಾಕ್ಷ್ಯ ಇಲ್ಲದ ಕಾರಣ ಮಾಜಿ ಬ್ರಿಗೆಡಿಯರ್ ವಿರುದ್ಧ ಕೇಸ್ ಕೈಬಿಟ್ಟ ಸಿಬಿಐ

ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂಡರಲ್ಲಿ ಸಾಕ್ಷ್ಯ ಇಲ್ಲದ ಕಾರಣ ಸಿಬಿಐ ಮಾಜಿ ಬ್ರಿಗೆಡಿಯರ್ ವಿರುದ್ಧ ಇದ್ದ ಪ್ರಕರಣವನ್ನು ಕೈಬಿಟ್ಟಿದೆ.

ನವದೆಹಲಿ: ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂಡರಲ್ಲಿ ಸಾಕ್ಷ್ಯ ಇಲ್ಲದ ಕಾರಣ ಸಿಬಿಐ ಮಾಜಿ ಬ್ರಿಗೆಡಿಯರ್ ವಿರುದ್ಧ ಇದ್ದ ಪ್ರಕರಣವನ್ನು ಕೈಬಿಟ್ಟಿದೆ.

ಚಾಪರ್ ಹಗರಣದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾದ 7 ವರ್ಷಗಳ ಬಳಿಕ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ಕೈಬಿಡುತ್ತಿರುವುದರ ಬಗ್ಗೆ ವರದಿ ನೀಡಿದ್ದು, 

"ಸಿಬಿಐ ಎಂದಿಗೂ ತನ್ನ ತನಿಖಾ ವಿಧಾನದಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಂಡಿದೆ. ಎಂದಿಗೂ ಸಾಕ್ಷ್ಯ ಇಲ್ಲದೇ ಚಾರ್ಜ್ ಶೀಟ್ ಹಾಕುವುದಿಲ್ಲ" ಎಂದು ಪ್ರಕರಣವನ್ನು ಕೈಬಿಟ್ಟಿರುವ ಸಿಬಿಐ ಹೇಳಿದೆ.

ಬ್ರಿಗೆಡಿಯರ್ ವಿಎಸ್ ಸೈನಿ ವಿರುದ್ಧ ದಾಖಲಾಗಿದ್ದ ಪ್ರಕರಣ ಆಗಸ್ಟಾ ಕೇಸ್ ಗೆ ಸಂಬಂಧಪಟ್ಟಿದ್ದಾಗಿದ್ದು ಇಟಾಲಿಯಿಂದ ಲಭ್ಯವಾಗಿದ್ದ ದಾಖಲೆಗಳನ್ನು ಆಧರಿಸಿ ಸಿಬಿಐ 2014 ರಲ್ಲಿ ಹೊಸ ಪ್ರಕರಣ ದಾಖಲಿಸಿತ್ತು. ಹೊಸ ಕೇಸ್ ನ ಪ್ರಕಾರ ಬ್ರಿಗೆಡಿಯರ್ ವಿಎಸ್ ಸೈನಿ ಆಗಸ್ಟಾಗೆ ಸಹಾಯ ಮಾಡಲು 5 ಮಿಲಿಯನ್ ಯೂರೋಗಳ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿತ್ತು.

ಬ್ರಿಗೇಡಿಯರ್ ಸೈನಿ ಸರ್ಕಾರ ಖರೀದಿಸಬೇಕೆಂದಿದ್ದ  ಸರ್ವೇಕ್ಷಣೆ ಹಾಗೂ ವಿಚಕ್ಷಣ ಹೆಲಿಕಾಫ್ಟರ್ ಹಾರಾಟದ ಪ್ರಯೋಗವನ್ನು ತಪ್ಪಿಸಿದ್ದ ಆರೋಪ ಎದುರಿಸುತ್ತಿದ್ದರು.

ಸೈನಿ ಅವರಷ್ಟೇ ಅಲ್ಲದೇ ಎಫ್ಐಆರ್ ನಲ್ಲಿ ಇನ್ನಿತರ ಸೇನಾ ಅಧಿಕಾರಿಗಳು, ರಕ್ಷಣಾ ಸಚಿವಾಲಯದ ಅಧಿಕಾರಿಗಳು, ಖಾಸಗಿ ಸಂಸ್ಥೆಗಳ ಅಧಿಕಾರಿಗಳ ಹೆಸರೂ ಇತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT