ದೇಶ

ಪದಾತಿ ಸೈನ್ಯ ದಿನ: ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ನಮನ

Sumana Upadhyaya

ನವದೆಹಲಿ: ಇಂದು ಅಕ್ಟೋಬರ್ 27, ಕಾಲಾಳುಪಡೆ ಅಂದರೆ ಪದಾತಿ ಸೈನ್ಯದಳ ದಿನ. ಇದರ ಅಂಗವಾಗಿ ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ದೇಶದ ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ಪ್ರತಿವರ್ಷ ಅಕ್ಟೋಬರ್ 27ನ್ನು ಕಾಲಾಳುಪಡೆ ದಿನ ಎಂದು ಆಚರಿಸಲಾಗುತ್ತದೆ. ಸಿಖ್ ರೆಜಿಮೆಂಟ್‌ನ 1 ನೇ ಬೆಟಾಲಿಯನ್ ನೇತೃತ್ವದ ಭಾರತೀಯ ಸೇನೆಯ ಪದಾತಿ ದಳವು 1947 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ವಾಯುನೆಲೆಗೆ ದಾರಿ ಮಾಡಿಕೊಟ್ಟ ಸಂದರ್ಭವನ್ನು ಸ್ಮರಿಸಲು ಅಕ್ಟೋಬರ್ 27 ರಂದು ಪದಾತಿಸೈನ್ಯದ ದಿನವನ್ನಾಗಿ ಆಚರಿಸಲಾಗುತ್ತದೆ.

SCROLL FOR NEXT