ದೇಶ

ವಾಹನ ನಿಲುಗಡೆ ವಿಚಾರವಾಗಿ ವಿವಾದ; ಟ್ಯಾಕ್ಸಿ ಚಾಲಕ, ಆತನ ತಂದೆಗೆ ಚಾಕು ಇರಿದಿದ್ದ ಆರೋಪಿಗಳ ಬಂಧನ

Ramyashree GN

ಪಣಜಿ: ಗೋವಾದ ಮಾಪುಸಾ ಪಟ್ಟಣದಲ್ಲಿ ವಾಹನ ನಿಲುಗಡೆ ವಿಚಾರವಾಗಿ ನಡೆದ ವಾದ ವಿವಾದದಲ್ಲಿ ಟ್ಯಾಕ್ಸಿ ಚಾಲಕ ಮತ್ತು ಆತನ ತಂದೆಗೆ ಚಾಕುವಿನಿಂದ ಇರಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಸಮೀರ್ ಪೆಡ್ನೇಕರ್ ಮತ್ತು ಸುರೇಶ್ ಕುಂಬಾರ್ ಎಂಬ ಇಬ್ಬರು ಆರೋಪಿಗಳನ್ನು ಶುಕ್ರವಾರ ಸಂಜೆ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಳವಿ ಸುದ್ದಿಗಾರರಿಗೆ ತಿಳಿಸಿದರು.

ಸಂತ್ರಸ್ತ ಬ್ರಿಜೇಶ್ ಶಿರೋದ್ಕರ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

'ಆರೋಪಿಗಳು ತಮ್ಮ ದ್ವಿಚಕ್ರ ವಾಹನವನ್ನು ತಮ್ಮ ಕ್ಯಾಬ್ ಪಕ್ಕದಲ್ಲಿ ನಿಲ್ಲಿಸಿದ ನಂತರ ವಾಗ್ವಾದ ಉಂಟಾಯಿತು. ಬಳಿಕ ಆರೋಪಿಗಳು ತನಗೆ ಮತ್ತು ತನ್ನ ತಂದೆಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಶಿರೋದ್ಕರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ' ಎಂದು ದಳವಿ ಹೇಳಿದ್ದಾರೆ.

ಈ ಸಂಬಂಧ ಇಬ್ಬರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ.

SCROLL FOR NEXT