ಸಾಂದರ್ಭಿಕ ಚಿತ್ರ 
ದೇಶ

ಒಂದನೇ ವರ್ಷಕ್ಕೆ ಮದುವೆಯಾಗಿದ್ದ ರಾಜಸ್ಥಾನದ ರೇಖಾಳ ಬಾಲ್ಯ ವಿವಾಹ 20 ವರ್ಷಗಳ ನಂತರ ರದ್ದು

ಕೇವಲ ಒಂದು ವರ್ಷದಲ್ಲಿದ್ದಾಗ ಬಾಲ್ಯ ವಿವಾಹದ ಸಂಕೋಲೆಯಲ್ಲಿ ಸಿಲುಕಿ 20 ವರ್ಷಗಳ ನಿರಂತರ ಹೋರಾಟದ ನಂತರ ರಾಜಸ್ಥಾನದ ರೇಖಾಗೆ ಗುರುವಾರ ತನ್ನ ಜನ್ಮದಿನದಂದೇ ಬಾಲ್ಯ ವಿವಾಹದಿಂದ ಮುಕ್ತಿ ಸಿಕ್ಕಿದೆ. 

ಜೈಪುರ: ಕೇವಲ ಒಂದು ವರ್ಷದಲ್ಲಿದ್ದಾಗ ಬಾಲ್ಯ ವಿವಾಹದ ಸಂಕೋಲೆಯಲ್ಲಿ ಸಿಲುಕಿ 20 ವರ್ಷಗಳ ನಿರಂತರ ಹೋರಾಟದ ನಂತರ ರಾಜಸ್ಥಾನದ ರೇಖಾಗೆ ಗುರುವಾರ ತನ್ನ ಜನ್ಮದಿನದಂದೇ ಬಾಲ್ಯ ವಿವಾಹದಿಂದ ಮುಕ್ತಿ ಸಿಕ್ಕಿದೆ. 

ಸಾರಥಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಪುನರ್ವಸತಿ ಮನಶ್ಶಾಸ್ತ್ರಜ್ಞ ಡಾ. ಕೃತಿ ಭಾರ್ತಿ ಅವರ ಬೆಂಬಲದೊಂದಿಗೆ ರೇಖಾ ತನ್ನ ಬಾಲ್ಯ ವಿವಾಹದಿಂದ ಹೊರಬರಲು ಕೌಟುಂಬಿಕ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದ್ದರು.

ತನ್ನ ಬಾಲ್ಯ ವಿವಾಹ ರದ್ದು ಕೋರಿ ರೇಖಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜೋಧ್‌ಪುರ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಪ್ರದೀಪ್ ಕುಮಾರ್ ಮೋದಿ ಅವರು, ರೇಖಾ ಅವರ ಬಾಲ್ಯ ವಿವಾಹವನ್ನು ರದ್ದುಗೊಳಿಸುವ ಐತಿಹಾಸಿಕ ತೀರ್ಪು ನೀಡಿದ್ದಾರೆ. ಈ ಮೂಲಕ ಬಾಲ್ಯವಿವಾಹದ ಅನಿಷ್ಟ ಪದ್ದತಿ ವಿರುದ್ಧ ಬಲವಾದ ಸಂದೇಶ ರವಾನಿಸಿದ್ದಾರೆ.

ಜೋಧ್‌ಪುರದ ನಿವಾಸಿಯಾಗಿರುವ 21 ವರ್ಷದ ರೇಖಾ 2002ರಲ್ಲಿ ಅದೇ ಪಟ್ಟಣದ ಹಳ್ಳಿಯೊಂದರ ಯುವಕನೊಂದಿಗೆ ಬಾಲ್ಯವಿವಾಹದ ಕಪಿಮುಷ್ಠಿಯಲ್ಲಿ ಸಿಲುಕಿದ್ದರು. ವಿವಾಹದ ಸಮಯದಲ್ಲಿ ರೇಖಾಗೆ ಕೇವಲ ಒಂದು ವರ್ಷವಾಗಿತ್ತು. ಆಕೆ ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಅವಳ ಅತ್ತೆಯ ಮನೆಗೆ ಕಳುಹಿಸಲು ಒತ್ತಡ ಹೇರಿದ್ದರು. ಇದರಿಂದ ರೇಖಾ ಅವರ ಎಎನ್‌ಎಂ(ನರ್ಸ್ ಕೋರ್ಸ್) ಮಾಡುವ ಕನಸು ಭಗ್ನಗೊಂಡು ಖಿನ್ನತೆಗೆ ಒಳಗಾಗಿದ್ದರು.

ಏತನ್ಮಧ್ಯೆ, ಪ್ರಸಿದ್ಧ ಕಾರ್ಯಕರ್ತೆ ಮತ್ತು ಬಿಬಿಸಿ 100 ಸ್ಪೂರ್ತಿದಾಯಕ ಮಹಿಳೆಯರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಕೀರ್ತಿ ಅವರ ಬಾಲ್ಯ ವಿವಾಹವನ್ನು ರದ್ದುಗೊಳಿಸುವ ಅಭಿಯಾನದ ಬಗ್ಗೆ ರೇಖಾ ತಿಳಿದುಕೊಂಡರು. ರೇಖಾ ಅವರು ಸಾರಥಿ ಟ್ರಸ್ಟ್‌ನ ಡಾ. ಕೃತಿ ಭಾರ್ತಿ ಅವರ ಸಹಾಯದಿಂದ ಜೋಧ್‌ಪುರ ಕೌಟುಂಬಿಕ ನ್ಯಾಯಾಲಯದಲ್ಲಿ ತಮ್ಮ ಬಾಲ್ಯ ವಿವಾಹವನ್ನು ರದ್ದುಗೊಳಿಸುವಂತೆ ಮೊಕದ್ದಮೆ ಹೂಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?