ಜ್ಞಾನವಾಪಿ ಮಸೀದಿ 
ದೇಶ

ಜ್ಞಾನವಾಪಿ ಪ್ರಕರಣ: 1993 ರವರೆಗೆ ಮಸೀದಿ ಆವರಣದಲ್ಲಿ ಪೂಜೆ ನಡೆಯುತ್ತಿದ್ದ ಬಗ್ಗೆ ಸಾಕ್ಷ್ಯ ನೀಡಿ; ಕೋರ್ಟ್ ನಿರ್ದೇಶನ

ವಾರಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಡಾ.ಎ.ಕೆ.ವಿಶ್ವೇಶ ಅವರು 1993ರ ವರೆಗೆ ಮಸೀದಿ ಆವರಣದಲ್ಲಿದ್ದ ದೇವತೆಗಳ ಆರಾಧನೆ ನಡೆದಿದೆ ಎಂಬ ಬಗ್ಗೆ ದೃಢೀಕರಿಸಲು ಪುರಾವೆಗಳನ್ನು ಸಲ್ಲಿಸುವಂತೆ  ಅರ್ಜಿ ದಾರರಿಗೆ ಸೂಚಿಸಿದ್ದಾರೆ.

ಲಕ್ನೋ:  ವಾರಣಾಸಿಯ ಜ್ಞಾನವಾಪಿ ಮಸೀದಿಯ ಹೊರಗಿನ ಗೋಡೆಯಲ್ಲಿ ಹಿಂದೂ ದೇವರ ಮೂರ್ತಿಗಳಿದ್ದು, ಅವುಗಳಿಗೆ ಪೂಜೆ ಸಲ್ಲಿಸಲು ಕೋರಿ ಐವರು ಮಹಿಳೆಯರು  ಸಲ್ಲಿಸಿದ್ದ ಅರ್ಜಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದ್ದು, ವಾರಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಡಾ.ಎ.ಕೆ.ವಿಶ್ವೇಶ ಅವರು 1993ರ ವರೆಗೆ ಮಸೀದಿ ಆವರಣದಲ್ಲಿದ್ದ ದೇವತೆಗಳ ಆರಾಧನೆ ನಡೆದಿದೆ ಎಂಬ ಬಗ್ಗೆ ದೃಢೀಕರಿಸಲು ಪುರಾವೆಗಳನ್ನು ಸಲ್ಲಿಸುವಂತೆ  ಅರ್ಜಿ ದಾರರಿಗೆ ಸೂಚಿಸಿದ್ದಾರೆ.

1991 ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯಿಂದ ಅರ್ಜಿದಾರರ ಮೊಕದ್ದಮೆಯನ್ನು ನಿರ್ಬಂಧಿಸಲಾಗಿಲ್ಲ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದು, ಮಸೀದಿ ಆಸ್ತಿಯಲ್ಲಿ  ವಿವಿಧ ದೇವತೆಗಳಿಗೆ ಸಲ್ಲಿಸಿರುವ ಪೂಜೆ ಆಚರಣೆಗಳ ಇತಿಹಾಸ ಹಾಗೂ ಸಾಕ್ಷ್ಯ ನೀಡುವಂತೆ ನಿರ್ದೇಶನ ನೀಡಿದ್ದಾರೆ.

ಆಗಸ್ಟ್ 15, 1947 ರ ನಂತರ 1993 ರ ನಂತರವೂ ಶೃಂಗಾರ ಗೌರಿ, ಗಣೇಶ, ಹನುಮಾನ್  ದೇವರ ದರ್ಶನ ಮತ್ತು ಪೂಜೆಯನ್ನು ಮಾಡಲು ಅವಕಾಶವಿದೆ ಎಂದು ನ್ಯಾಯಾಧೀಶರು ಪ್ರತಿಪಾದಿಸಿದ್ದಾರೆ. ಈಶಾನ್ಯ ಮೂಲೆಯಲ್ಲಿರುವ ಜ್ಞಾನವಾಪಿಯ ಹಿಂಭಾಗದಲ್ಲಿರುವ ಆಸ್ತಿಯೊಳಗೆ ಪ್ರತಿದಿನ ಗೋಚರ ಮತ್ತು ಅಗೋಚರವಾಗಿರುವ ಇತರ ದೇವತೆಗಳಿಗೆ ಮಸೀದಿ ಆವರಣದಲ್ಲಿರುವ ಹಳೆಯ ದೇವಾಲಯದ ಗೋಡೆಗಳಲ್ಲಿ ಹಿಂದೂ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಆದರೆ ವಾರಣಾಸಿ ಜಿಲ್ಲಾಡಳಿತವು ಚೈತ್ರ ಮಾಸದಲ್ಲಿ ನಡೆಯುವ ವಾಸಂತಿಕ ನವರಾತ್ರಿಯ ನಾಲ್ಕನೇ ದಿನವನ್ನು ಹೊರತುಪಡಿಸಿ  ಉಳಿದ ಎಲ್ಲಾ ದಿನಗಳಲ್ಲಿ ವಿವಾದಿತ ಆಸ್ತಿಯೊಳಗೆ ಪ್ರವೇಶವನ್ನು ನಿರ್ಬಂಧಿಸಿತು.  1991ರ ಪೂಜಾ ಸ್ಥಳಗಳ ಕಾಯ್ದೆಯ ಪ್ರಕಾರ ದೇಶದಲ್ಲಿರುವ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆಯ ಸ್ಥಳಗಳು 1947ರ ಆಗಸ್ಟ್ 15ರಂದು ಹೇಗಿತ್ತೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು ಎಂದಿದೆ.

ಈ ಹಂತದಲ್ಲಿ ಅರ್ಜಿದಾರರು ಸಮರ್ಪಕವಾದ ಸಾಕ್ಷ್ಯಗಳನ್ನು ನೀಡಿ ಸಾಬೀತು ಪಡಿಸಬೇಕು ಎಂದು ಕೋರ್ಟ್ ಸೂಚಿಸಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ, ಅವರು 1993 ರವರೆಗೆ ಮಸೀದಿ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ ದೇವತೆಗಳಿಗೆ ನಡೆಸುತ್ತಿದ್ದ ಪೂಜೆ ಮತ್ತು ಆಚರಣೆಗಳ ಬಗ್ಗೆ ನ್ಯಾಯಾಲಯಕ್ಕೆ ಅಗತ್ಯವಿರುವ ಸಾಕ್ಷ್ಯವನ್ನು ಹಾಜರುಪಡಿಸುತ್ತಾರೆ ಎಂದು ಅರ್ಜಿ ದಾರರ ಪರ ವಕೀಲರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT