ಸಂಗ್ರಹ ಚಿತ್ರ 
ದೇಶ

ಕಾಶ್ಮೀರ: ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ವ್ಯಕ್ತಿ ಮನಸ್ಸು ಬದಲಿಸಿ ಕಣ್ಮುಂದೆ ಬಂದ ಮಗಳ ಕತ್ತು ಸೀಳಿ ಕೊಲೆ!

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ 8 ವರ್ಷದ ಮಗುವಿನ ಭೀಕರ ಹತ್ಯೆ ನಡೆದ ಐದು ದಿನಗಳ ನಂತರ ಪೊಲೀಸರು ತನಿಖೆಯಲ್ಲಿ ಮಹತ್ವದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ 8 ವರ್ಷದ ಮಗುವಿನ ಭೀಕರ ಹತ್ಯೆ ನಡೆದ ಐದು ದಿನಗಳ ನಂತರ ಪೊಲೀಸರು ತನಿಖೆಯಲ್ಲಿ ಮಹತ್ವದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. 

ಆರೋಪಿ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದನು. ಆ ವೇಳೆಗೆ ಆತನ ಮಗಳು ಅಲ್ಲಿಗೆ ಬಂದಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಕುಪಿತಗೊಂಡ ಆರೋಪಿ ತನ್ನ ಮಗಳನ್ನು ಕೊಂದಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆರೋಪಿಯನ್ನು ಮೊಹಮ್ಮದ್ ಇಕ್ಬಾಲ್ ಖಟ್ನಾ ಎಂದು ಗುರುತಿಸಲಾಗಿದ್ದು ಪೊಲೀಸರು ಬಂಧಿಸಿದ್ದಾರೆ.

ವೃತ್ತಿಯಲ್ಲಿ ಚಾಲಕನಾಗಿರುವ ಆರೋಪಿ ಇಕ್ಬಾಲ್ ಖಟ್ನಾ ವಿಚಾರಣೆ ವೇಳೆ ತನ್ನ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದನ್ನು ನೋಡಿದ ಕಾರಣಕ್ಕೆ ತಾನು ಹೀಗೆ ಮಾಡಿದೆ ಎಂದು ಖತ್ನಾ ಹೇಳಿದ್ದಾರೆ.

ಕಳೆದ ಬುಧವಾರ ಪತ್ನಿ ಜೊತೆ ಜಗಳವಾಡಿ ಮನೆಯಿಂದ ಹೊರಬಂದಿದ್ದ ತಂದೆಯನ್ನು ಎಂಟು ವರ್ಷದ ಬಾಲಕಿ ಹೊರಹೋಗಲು ಬಿಡಲಿಲ್ಲ. ತಂದೆ ಜೊತೆ ಕಾರಿನಲ್ಲಿ ಹೋಗಿದ್ದಾಳೆ. ಈ ವೇಳೆ ಆರೋಪಿ ಇಕ್ಬಾಲ್ 45 ನಿಮಿಷಗಳ ಕಾಲ ಬಾಲಕಿಯನ್ನು ಬಿಟ್ಟು ಹೋಗುವಂತೆ ಮನವೊಲಿಸಲು ಯತ್ನಿಸಿದ್ದಾನೆ. ಆ ಹುಡುಗಿಗೆ ಮಿಠಾಯಿ ಮತ್ತು ಮಿಠಾಯಿ ಕೊಳ್ಳಲು ಹಣವನ್ನೂ ಕೊಟ್ಟಿದ್ದಾನೆ. ಆದರೂ ಬಾಲಕಿ ಕಾರಿನಿಂದ ಇಳಿಯಲು ಒಪ್ಪಲಿಲ್ಲ.

ಕಾರಿನಲ್ಲಿ ಬಾಲಕಿಯೂ ಇದ್ದುದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿದ್ದಾನೆ. ಕೋಪದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದು, ಬಾಲಕಿ ಸಾವನ್ನಪ್ಪಿದ್ದಾಳೆ. ಇದಾದ ಬಳಿಕ ಬಾಲಕಿಯ ಕತ್ತು ಸೀಳಿ ಶವವನ್ನು ವಿಲೇವಾರಿ ಮಾಡಿದ್ದಾನೆ. ಕೆಲವು ಗಂಟೆಗಳ ನಂತರ, ಇಕ್ಬಾಲ್ ತನ್ನ ಮನೆಗೆ ಹಿಂದಿರುಗಿದನು ಎಂದು ಕುಪ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಯೋಗುಲ್ ಮನ್ಹಾಸ್ ಹೇಳಿದ್ದಾರೆ.

ಕುಟುಂಬಸ್ಥರು ಬಾಲಕಿಯ ಬಗ್ಗೆ ವಿಚಾರಿಸಿದಾಗ ಆಕೆ ನನ್ನೊಂದಿಗಿಲ್ಲ ಎಂದಿದ್ದಾನೆ. ತನಿಖೆ ವೇಳೆ ಕನಿಷ್ಠ ನಾಲ್ಕು ಜನರು ಹುಡುಗಿ ಇಕ್ಬಾಲ್ ಜೊತೆ ಹೋಗುವುದನ್ನು ನೋಡಿದ್ದಾರೆ. ಬಾಲಕಿಯನ್ನು ಕೊಂದ ನಂತರ ಆರೋಪಿ ತನ್ನನ್ನು ಕೊಲ್ಲುವ ಉದ್ದೇಶವನ್ನು ತೊರೆದಿದ್ದಾನೆ ಎಂದು ಮನ್ಹಾಸ್ ಹೇಳಿದ್ದಾರೆ.

ಇದಾದ ಬಳಿಕ ಇಕ್ಬಾಲ್ ಮೊದಲು ಪೊಲೀಸ್ ಠಾಣೆಗೆ ಹೋಗಿ ಬಾಲಕಿ ನಾಪತ್ತೆ ಬಗ್ಗೆ ದೂರು ದಾಖಲಿಸಿದ್ದಾನೆ. ಆದರೆ ಆತ ಠಾಣೆಯಿಂದ ವಾಪಸು ಮನೆಗೆ ಬರುವಷ್ಟರಲ್ಲಿ ಬಾಲಕಿಯ ಕುಟುಂಬಸ್ಥರಿಗೆ ಆಕೆಯ ಶವ ಪತ್ತೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT