ಚಾಂಗ್ಲಾಂಗ್ ಜಿಲ್ಲೆಗೆ ಧಾನಮಂತ್ರಿ ಶ್ರೇಷ್ಠತೆ ಪ್ರಶಸ್ತಿ 
ದೇಶ

'ಹೆಮ್ಮೆಯ ಕ್ಷಣ': ಚಾಂಗ್ಲಾಂಗ್ ಜಿಲ್ಲೆಗೆ ಸಾರ್ವಜನಿಕ ಆಡಳಿತದಲ್ಲಿ ಪ್ರಧಾನಮಂತ್ರಿ ಶ್ರೇಷ್ಠತೆ ಪ್ರಶಸ್ತಿ

ಭಾರತದ ಪೂರ್ವ ಅರುಣಾಚಲ ಪ್ರದೇಶದ ಚಾಂಗ್‌ಲಾಂಗ್ ಜಿಲ್ಲೆ ತನ್ನ ಉಪಕ್ರಮ, ಹೊಸ ಯುಗದ ಕಲಿಕೆ ಕೇಂದ್ರ(ಎನ್‌ಎಎಲ್‌ಸಿ)ಕ್ಕಾಗಿ "ನಾವೀನ್ಯತೆ" ವಿಭಾಗದಲ್ಲಿ ಶುಕ್ರವಾರ ಸಾರ್ವಜನಿಕ ಆಡಳಿತದಲ್ಲಿ  ಪ್ರಧಾನಮಂತ್ರಿ ಶ್ರೇಷ್ಠತೆ...

ಗುವಾಹಟಿ: ಭಾರತದ ಪೂರ್ವ ಅರುಣಾಚಲ ಪ್ರದೇಶದ ಚಾಂಗ್‌ಲಾಂಗ್ ಜಿಲ್ಲೆ ತನ್ನ ಉಪಕ್ರಮ, ಹೊಸ ಯುಗದ ಕಲಿಕೆ ಕೇಂದ್ರ(ಎನ್‌ಎಎಲ್‌ಸಿ)ಕ್ಕಾಗಿ "ನಾವೀನ್ಯತೆ" ವಿಭಾಗದಲ್ಲಿ ಶುಕ್ರವಾರ ಸಾರ್ವಜನಿಕ ಆಡಳಿತದಲ್ಲಿ  ಪ್ರಧಾನಮಂತ್ರಿ ಶ್ರೇಷ್ಠತೆ ಪ್ರಶಸ್ತಿಯನ್ನು ಸ್ವೀಕರಿಸಿದೆ.

ಎನ್‌ಎಎಲ್‌ಸಿ ಎಲ್ಲಾ ವಯೋಮಾನದ ಜನ ತಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನು ಕಲಿಯಲು ಮತ್ತು ಸುಧಾರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದನ್ನು ಮಿಯಾವೊ ಉಪವಿಭಾಗದಲ್ಲಿ ಸ್ಥಾಪಿಸಲಾಗಿದ್ದು, ಅತ್ಯಾಧುನಿಕ, ಫ್ಯೂಚರಿಸ್ಟಿಕ್, ವಿರಾಮ ಕಲಿಕೆಯ ಸ್ಥಳ ಮತ್ತು ಲೈಬ್ರರಿಯಾಗಿದೆ. ಶೂನ್ಯ ಸದಸ್ಯತ್ವ ಶುಲ್ಕದಲ್ಲಿ ಯಾರು ಬೇಕಾದರೂ ಈ ಸೌಲಭ್ಯಗಳನ್ನು ಪಡೆಯಬಹುದು.

ಚಾಂಗ್ಲಾಂಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸನ್ನಿ ಕೆ ಸಿಂಗ್ ಅವರ ಮೆದುಳಿನ ಕೂಸು ಇದಾಗಿದ್ದು, ಈ ಉಪಕ್ರಮದ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಮೊದಲು ವರದಿ ಮಾಡಿತ್ತು. ಈಗ ತಮ್ಮ ತಂಡದ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದು ಸನ್ನಿ ಸಿಂಗ್ ಹೇಳಿದ್ದಾರೆ.

"ಎನ್‌ಎಎಲ್‌ಸಿಯು ಟೀಮ್‌ವರ್ಕ್‌ನ ಪ್ರತಿಫಲವಾಗಿದೆ. ಕೇವಲ ಸರ್ಕಾರಿ ಅಧಿಕಾರಿಗಳು, ಎನ್‌ಜಿಒ ಮತ್ತು ಸಮುದಾಯದ ಸದಸ್ಯರು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ" ಎಂದು ಸಿಂಗ್ ತಿಳಿಸಿದ್ದಾರೆ.

2021 ರಲ್ಲಿ, ಅವರು ಸಾರ್ವಜನಿಕ ಸೇವೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ರಾಜ್ಯ ಪ್ರಶಸ್ತಿ (ಚಿನ್ನದ ಪದಕ) ಪಡೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT