ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 
ದೇಶ

ಮಾಜಿ ಸಿಎಂ ಜಯಲಲಿತಾ ಸೀರೆ ಎಳೆದ ಘಟನೆ ನೆನಪಿಸಿದ ನಿರ್ಮಲಾ ಸೀತಾರಾಮನ್, ಡಿಎಂಕೆ ವಿರುದ್ಧ ವಾಗ್ದಾಳಿ

ಲೋಕಸಭೆಯಲ್ಲಿ ಗುರುವಾರ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರ ಸುರಕ್ಷತೆಯ ವಿಷಯದ ಬಗ್ಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು. 

ನವದೆಹಲಿ: ಲೋಕಸಭೆಯಲ್ಲಿ ಗುರುವಾರ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರ ಸುರಕ್ಷತೆಯ ವಿಷಯದ ಬಗ್ಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು. 

ಸೀತಾರಾಮನ್  ತಮ್ಮ ಭಾಷಣದಲ್ಲಿ1989ರಲ್ಲಿ ವಿಧಾನಸಭೆಯಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ ಎಳೆದ ಘಟನೆಯನ್ನು ನೆನಪಿಸಿಕೊಂಡು ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದರು. ಮಣಿಪುರದಲ್ಲಿನ ಮಹಿಳೆಯರ ವಿರುದ್ಧದ ಲೈಂಗಿಕ ಹಿಂಸಾಚಾರ ಕುರಿತ ಡಿಎಂಕೆ ಸಂಸದೆ ಕನ್ನಿಮೋಳಿ ಅವರ ಟೀಕೆಗೆ ಕೌಂಟರ್ ನೀಡಿದ ನಿರ್ಮಲಾ ಸೀತಾರಾಮನ್, ನೀವು ದ್ರೌಪದಿಯ ಬಗ್ಗೆ ಕೌರವ ಸಭೆ ಮಾತನಾಡುತ್ತೀರಿ. ಜಯಲಲಿತಾ ಅವರನ್ನು ಮರೆತಿದ್ದೀರಾ? ಮಣಿಪುರ ರಾಜಸ್ಥಾನ ಅಥವಾ ದೆಹಲಿಯಲ್ಲಿ ಮಹಿಳೆಯರು ತೊಂದರೆ ಎದುರಿಸುತ್ತಿದ್ದಾರೆ ಎಂಬುದನ್ನು ನಾನು ಒಪ್ಪುತ್ತೇನೆ, ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕು, ಆದರೆ ಅದರಲ್ಲಿ ಯಾವುದೇ ರಾಜಕೀಯ ಬೇಡ ಎಂದು ಸಚಿವರು ಹೇಳಿದರು.

ಮಾರ್ಚ್ 25, 1989 ರಂದು ತಮಿಳುನಾಡು ಅಸೆಂಬ್ಲಿಯಲ್ಲಿ ಜಯಲಲಿತಾ ಅವರ ಸೀರೆಯನ್ನು ಎಳೆಯುವ ಸಂದರ್ಭದಲ್ಲಿ ಟಿಎನ್ ಅಸೆಂಬ್ಲಿಯಲ್ಲಿ ಸಂಭವಿಸಿದ ಘಟನೆಯನ್ನು ಸೀತಾರಾಮನ್  ನೆನಪಿಸಿಕೊಂಡರು. “ಅವರು ವಿರೋಧ ಪಕ್ಷದ ನಾಯಕಿಯಾಗಿದ್ದರು. ಡಿಎಂಕೆ ಸದಸ್ಯರು ಅವಳನ್ನು ನೋಡಿ ನಕ್ಕರು. “ಜಯಲಲಿತಾ ಅವರ ಸೀರೆಯನ್ನು ಎಳೆಯಲಾಯಿತು. ಅಲ್ಲಿ ಕುಳಿತಿದ್ದ ಡಿಎಂಕೆ ಸದಸ್ಯರು ಆಕೆಯನ್ನು ನೋಡಿ ನಕ್ಕರು. ಜಯಲಲಿತಾ ಅವರನ್ನು ಡಿಎಂಕೆ ಮರೆತಿದೆಯೇ? ನೀವು ಅವಳ ಸೀರೆ ಎಳೆದಿದ್ದೀರಿ, ನೀವು ಅವಳನ್ನು ಕೀಳಾಗಿಸಿದ್ದೀರಿ. ಅಂದು ಜಯಲಲಿತಾ ಸಿಎಂ ಆಗದ ಹೊರತು ಸದನಕ್ಕೆ ಬರುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಿದರು. ಎರಡು ವರ್ಷಗಳ ನಂತರ ಅವರು ಮುಖ್ಯಮಂತ್ರಿಯಾಗಿ ಮರಳಿದರು ಎಂದು ಸೀತಾರಾಮನ್ ಹೇಳಿದರು.

ಹೊಸ ಸಂಸತ್ ಭವನದಲ್ಲಿ ಸೆಂಗೋಲ್ ಅಳವಡಿಕೆಯ ಕುರಿತು ಕನಿಮೊಳಿ ಮಾಡಿದ ಟೀಕೆಯ ವಿರುದ್ಧವೂ ನಿರ್ಮಲಾ ಸೀತಾರಾಮನ್ ಹರಿಹಾಯ್ದರು. “ಸೆಂಗೊಲ್ ಅನ್ನು ಮಾಜಿ ಪ್ರಧಾನಿಯ ವಾಕಿಂಗ್ ಸ್ಟಿಕ್ ಆಗಿ ಬಳಸಿದಾಗ ಮತ್ತು ಖಾಸಗಿ ವಸ್ತುಸಂಗ್ರಹಾಲಯದಲ್ಲಿ ಇರಿಸಿದಾಗ ತಮಿಳು ಹೆಮ್ಮೆಗೆ ಧಕ್ಕೆಯಾಗಲಿಲ್ಲವೇ? ನರೇಂದ್ರ ಮೋದಿಯವರು ಅದರ ವೈಭವವನ್ನು ಪುನಃಸ್ಥಾಪಿಸಿದರು ಎಂದು ಅವರು ಹೇಳಿದರು.

ಕೇಂದ್ರವು ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂಬ ಡಿಎಂಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಧಾನಿ ಅವರು ಶಿಲ್ಪಾದಿಕಾರಂ ಸ್ಫೂರ್ತಿಯನ್ನು ಪಡೆದು ಅದನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ನಾವು ತಮಿಳರು, ದ್ರಾವಿಡರಲ್ಲ ನಮ್ಮ ತಾಯ್ನಾಡು ತಮಿಳಕಂ, ದ್ರಾವಿಡಂ ಅಲ್ಲ ಎಂದು ಮಾಪೋಸಿ 1951ರಲ್ಲಿ ಬರೆದಿದ್ದರು. ಅವರು ಭಾರತದ ಏಕತೆಯ ಬಗ್ಗೆ ಮಾತನಾಡುತ್ತಾರೆ, ಆದರೆ ಕನಿಮೊಳಿ ಮಾತನಾಡುವ ಭಾಷೆಯು ಪ್ರತ್ಯೇಕತಾವಾದಿ ಭಾಷೆ ಮೇಲೆ ಪ್ರಭಾವ ಬೀರುತ್ತದೆ, ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT