ಚಂದ್ರ ಗ್ರಹ 
ದೇಶ

ಚಂದ್ರಯಾನ-3: ವಿಕ್ರಮ್ ಲ್ಯಾಂಡರ್‌ ಸೆರೆ ಹಿಡಿದ ಚಂದ್ರನ ಮೇಲ್ಮೈ ವಿಡಿಯೋ ಹಂಚಿಕೊಂಡ ಇಸ್ರೋ!

ಇಸ್ರೋ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಕ್ರಮ್ ಲ್ಯಾಂಡರ್‌ ಸೆರೆ ಹಿಡಿದಿರುವ ಚಂದ್ರನ ಮೇಲ್ಮೈಯ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ. 

ನವದೆಹಲಿ: ಇಸ್ರೋ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಕ್ರಮ್ ಲ್ಯಾಂಡರ್‌ ಸೆರೆ ಹಿಡಿದಿರುವ ಚಂದ್ರನ ಮೇಲ್ಮೈಯ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ. 

ವಿಕ್ರಮ್ ಲ್ಯಾಂಡರ್‌ನಲ್ಲಿ ಅಳವಡಿಸಿರುವ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ(LPDC) ಈ ವೀಡಿಯೊವನ್ನು ಸೆರೆಹಿಡಿದಿದೆ. ವಿಕ್ರಮ್ ಲ್ಯಾಂಡರ್‌ನ ಕೆಳಭಾಗದಲ್ಲಿ LPDC ಅಳವಡಿಸಲಾಗಿದೆ. ವಿಕ್ರಮ್ ತನಗಾಗಿ ಸರಿಯಾದ ಮತ್ತು ಸಮತಟ್ಟಾದ ಲ್ಯಾಂಡಿಂಗ್ ಸ್ಥಳವನ್ನು ಕಂಡುಕೊಳ್ಳಲು ಇದನ್ನು ಸ್ಥಾಪಿಸಲಾಗಿದೆ. ಈ ಕ್ಯಾಮೆರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಯಾವುದೇ ಉಬ್ಬು ಪ್ರದೇಶಕ್ಕೆ ಇಳಿಯುತ್ತಿಲ್ಲ ಎಂಬುದನ್ನು ನೋಡಬಹುದು.

ಲ್ಯಾಂಡಿಂಗ್‌ಗೂ ಮೊದಲು ಈ ಕ್ಯಾಮೆರಾವನ್ನು ಮತ್ತೆ ಆನ್ ಮಾಡಬಹುದು. ಏಕೆಂದರೆ ಈಗ ಬಂದಿರುವ ಚಿತ್ರವನ್ನು ನೋಡಿದರೆ ಈ ಕ್ಯಾಮೆರಾವನ್ನು ಪ್ರಯೋಗಕ್ಕಾಗಿ ಆನ್ ಮಾಡಲಾಗಿದೆ ಎಂದು ತೋರುತ್ತದೆ. ಇದರಿಂದ ಅದು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಚಿತ್ರಗಳು ಅಥವಾ ವೀಡಿಯೊಗಳಿಂದ ತಿಳಿಯಬಹುದು. ಈ ಸಂವೇದಕವನ್ನು ಚಂದ್ರಯಾನ-2 ರಲ್ಲೂ ಬಳಸಲಾಗಿತ್ತು.

LPDC ಯ ಕೆಲಸವೆಂದರೆ ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳವನ್ನು ಕಂಡುಹಿಡಿಯುವುದು. ಲ್ಯಾಂಡರ್ ಅಪಾಯ ಪತ್ತೆ ಮತ್ತು ತಪ್ಪಿಸುವ ಕ್ಯಾಮರಾ (LHDAC), ಲೇಸರ್ ಆಲ್ಟಿಮೀಟರ್ (LASA), ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) ಮತ್ತು ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಈ ಪೇಲೋಡ್‌ನೊಂದಿಗೆ ಒಟ್ಟಿಗೆ ಕೆಲಸ ಮಾಡುತ್ತದೆ. ಇದರಿಂದ ಲ್ಯಾಂಡರ್ ಅನ್ನು ಸುರಕ್ಷಿತ ಮೇಲ್ಮೈಯಲ್ಲಿ ಇಳಿಸಬಹುದು.

ಯಾವಾಗ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತದೆಯೋ ಆ ಸಮಯದಲ್ಲಿ ಅದರ ವೇಗ ಸೆಕೆಂಡಿಗೆ 2 ಮೀಟರ್ ಆಗಿರುತ್ತದೆ. ಆದರೆ ಸಮತಲ ವೇಗವು ಸೆಕೆಂಡಿಗೆ 0.5 ಮೀಟರ್ ಆಗಿರುತ್ತದೆ. ವಿಕ್ರಮ್ ಲ್ಯಾಂಡರ್ 12 ಡಿಗ್ರಿ ಇಳಿಜಾರಿನಲ್ಲಿ ಇಳಿಯಬಹುದು. ಈ ಎಲ್ಲಾ ಉಪಕರಣಗಳು ಈ ವೇಗ, ದಿಕ್ಕು ಮತ್ತು ಸಮತಟ್ಟಾದ ನೆಲವನ್ನು ಕಂಡುಹಿಡಿಯಲು ವಿಕ್ರಮ್ ಲ್ಯಾಂಡರ್‌ಗೆ ಸಹಾಯ ಮಾಡುತ್ತವೆ. ಈ ಎಲ್ಲಾ ಉಪಕರಣಗಳನ್ನು ಲ್ಯಾಂಡಿಂಗ್ ಮೊದಲು ಸುಮಾರು 500 ಮೀಟರ್ ಇರುವಾಗಲೇ ಸಕ್ರಿಯಗೊಳಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT