ಜಾರಿ ನಿರ್ದೇಶನಾಲಯದ ನಿರ್ಗಮಿತ ಮುಖ್ಯಸ್ಥ ಸಂಜಯ್ ಮಿಶ್ರಾ 
ದೇಶ

ಸಿಡಿಎಸ್, ಎನ್ಎಸ್ಎ ಸಮವಾಗಿ ಮುಖ್ಯ ತನಿಖಾಧಿಕಾರಿ ಹುದ್ದೆ ರಚನೆಗೆ ಕೇಂದ್ರ ಸರ್ಕಾರ ಒಲವು: ಸಿಬಿಐ, ಇಡಿಗೆ ಮುಖ್ಯಸ್ಥರು

ರಕ್ಷಣಾ ಸಿಬ್ಭಂದಿ ಮುಖ್ಯಸ್ಥರು (CDS) ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಮಾದರಿಯಲ್ಲಿ ಭಾರತದ ಮುಖ್ಯ ತನಿಖಾ ಅಧಿಕಾರಿ (CIO) ಹೊಸ ಹುದ್ದೆಯನ್ನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 

ನವದೆಹಲಿ: ರಕ್ಷಣಾ ಸಿಬ್ಭಂದಿ ಮುಖ್ಯಸ್ಥರು (CDS) ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಮಾದರಿಯಲ್ಲಿ ಭಾರತದ ಮುಖ್ಯ ತನಿಖಾ ಅಧಿಕಾರಿ (CIO) ಹೊಸ ಹುದ್ದೆಯನ್ನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 

ಉನ್ನತ ಮಟ್ಟದಿಂದ ಸಿಕ್ಕಿರುವ ಮಾಹಿತಿ ಪ್ರಕಾರ,ಮೂರು ಸೇವೆಗಳು ಸಿಡಿಎಸ್‌ಗೆ ಮತ್ತು ಎರಡು ಗುಪ್ತಚರ ಸಂಸ್ಥೆಗಳು ಎನ್‌ಎಸ್‌ಎಗೆ ವರದಿ ಮಾಡುವಂತೆ ಕೇಂದ್ರೀಯ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯ (ED) ಮುಖ್ಯಸ್ಥರು ಸಿಐಒಗೆ ವರದಿ ಮಾಡುತ್ತಾರೆ.

ಇಡಿ ಮತ್ತು ಸಿಬಿಐ ತನಿಖೆಯ ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆಯ ಅಗತ್ಯವಿದೆ ಎಂದು ಸರ್ಕಾರ ಭಾವಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಇಡಿ ಮುಖ್ಯವಾಗಿ ಹಣಕಾಸು ವಂಚನೆಗಳ ಮೇಲೆ ಕೇಂದ್ರೀಕರಿಸುತ್ತದೆ, ಇದರಲ್ಲಿ ಮನಿ ಲಾಂಡರಿಂಗ್ ಮತ್ತು ಫೆಮಾ ಉಲ್ಲಂಘನೆಗಳಿಗೆ ಸಂಬಂಧಿಸಿದ ಪ್ರಕರಣಗಳು ಸೇರಿವೆ, ಸಿಬಿಐ ಭ್ರಷ್ಟಾಚಾರ ಮತ್ತು ಇತರ ಆರ್ಥಿಕ ಅಪರಾಧಗಳ ಪ್ರಕರಣಗಳನ್ನು ಸಹ ಪರಿಶೀಲಿಸುತ್ತದೆ.

ಎರಡು ಏಜೆನ್ಸಿಗಳ ಮುಖ್ಯಸ್ಥರಾಗಿರುವ ಸಿಐಒ ಅವರ ನಡುವೆ ಉತ್ತಮ ಹೊಂದಾಣಿಕೆಯನ್ನು ತರುತ್ತದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಹೊಸ ಹುದ್ದೆಯು ಭಾರತ ಸರ್ಕಾರದ ಕಾರ್ಯದರ್ಶಿ ಶ್ರೇಣಿಯಲ್ಲಿರುತ್ತದೆ. ನಿರ್ಗಮಿತ ಇಡಿ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಮೊದಲ ಸಿಐಒ ಆಗಿ ನೇಮಿಸಬಹುದು ಎಂದು ಹೇಳಲಾಗುತ್ತಿದೆ. 

ಇತ್ತೀಚೆಗಷ್ಟೇ ಮಿಶ್ರಾ ಅವರಿಗೆ ಇಡಿ ಮುಖ್ಯಸ್ಥರಾಗಿ ಸೆಪ್ಟೆಂಬರ್ 15ರವರೆಗೆ ಮುಂದುವರಿಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಅವರ ನಿವೃತ್ತಿಯ ನಂತರ ಕೇಂದ್ರ ಸರ್ಕಾರ ಅವರಿಗೆ ನೀಡಿದ ತಲಾ ಒಂದು ವರ್ಷದ ಎರಡು ವಿಸ್ತರಣೆಗಳನ್ನು ಅಕ್ರಮ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿತ್ತು.

ಇಡಿ ಮುಖ್ಯಸ್ಥರಿಗೆ ಮೂರನೇ ಒಂದು ವರ್ಷ ವಿಸ್ತರಣೆ ನೀಡುವ ಕೇಂದ್ರದ ಕ್ರಮದ ವಿರುದ್ಧದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದೆ. ಮಿಶ್ರಾ ಅವರು ಸೆಪ್ಟೆಂಬರ್ 15 ರಂದು ಕಛೇರಿಯಿಂದ ನಿರ್ಗಮಿಸುವ ಮೊದಲು ಸಿಐಒ ಹುದ್ದೆಯನ್ನು ರಚಿಸಬಹುದು ಎಂದು ಮೂಲಗಳು ತಿಳಿಸಿವೆ. ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಮತ್ತು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಅಡಿಯಲ್ಲಿ ಸಿಬಿಐ ಅಡಿಯಲ್ಲಿ ಇಡಿ ಕಾರ್ಯನಿರ್ವಹಿಸುತ್ತದೆ ಮೂಲಗಳು ತಿಳಿಸಿವೆ. 

ಎರಡು ಏಜೆನ್ಸಿಗಳ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಸಿಐಒಗೆ ವರ್ಗಾಯಿಸಲಾಗುವುದು, ಸಿಐಒ ಮುಖ್ಯಸ್ಥರು ಪ್ರಧಾನ ಮಂತ್ರಿಗಳ ಕಚೇರಿಗೆ ವರದಿ ಮಾಡುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT