ದೇಶ

ರಾಜಸ್ಥಾನದಲ್ಲಿ ಬಿಜೆಪಿ ಏಕೆ ಗೆದ್ದಿದೆ! ವಸುಂಧರಾ ರಾಜೇ ವಿವರಿಸಿದ್ದು ಹೀಗೆ..

Nagaraja AB

ರಾಜಸ್ಥಾನ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದು, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ನಾಯಕಿ ವಸುಂಧರಾ ರಾಜೇ ಸಿಂಧಿಯಾ ಅವರು ಝಲ್ರಾಪಟನ್‌ನಿಂದ ಗೆಲುವು ಸಾಧಿಸಿದ್ದಾರೆ.

ಗೆಲುವಿನ ನಂತರ ಮಾತನಾಡಿದ ಅವರು, "ಈ ಗೆಲುವು ಪ್ರಧಾನಿ ಮೋದಿ ನೀಡಿದ 'ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್' ಮಂತ್ರವಾಗಿದೆ. ಇದು ಪ್ರಧಾನಿ ನೀಡಿದ ಭರವಸೆಯ ಗೆಲುವು. ಇದು ತಂತ್ರದ ಗೆಲುವು ಕೂಡ ಆಗಿದೆ. ಅಮಿತ್ ಶಾ ನೀಡಿದ ಕಾರ್ಯತಂತ್ರ ಮತ್ತು ನಡ್ಡಾಜಿ ಅವರ ಸಮರ್ಥ ನಾಯಕತ್ವದ ಗೆಲುವು, ಎಲ್ಲಕ್ಕಿಂತ ಮುಖ್ಯವಾಗಿ, ಇದು ನಮ್ಮ ಪಕ್ಷದ ಕಾರ್ಯಕರ್ತರ ಜಯ ಎಂದರು. 

ವಸುಂಧರಾ ರಾಜೇ ಅವರ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಝಲ್ರಾಪಟನ್‌ ಕ್ಷೇತ್ರದಿಂದ  ಸಮೀಪದ ಕಾಂಗ್ರೆಸ್‌ ಅಭ್ಯರ್ಥಿ ರಾಮ್ ಲಾಲ್ ಚೌಹಾಣ್ ಅವರಿಗಿಂತ 51,000 ಕ್ಕೂ ಹೆಚ್ಚು ಮತಗಳಿಂದ ವಸುಂಧರಾ ರಾಜೇ ಗೆಲುವು ಸಾಧಿಸಿದ್ದಾರೆ. 
 

SCROLL FOR NEXT