ಪುಣೆಯಲ್ಲಿ ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ ನೀಡಿರುವ ಇಬ್ಬರು ವ್ಯಕ್ತಿಗಳು. 
ದೇಶ

ಪುಣೆಯಲ್ಲಿ ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ; ಬೀದರ್ ಮೂಲದ ವ್ಯಕ್ತಿ ಬಂಧನ

ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ ನೀಡಿದ ವ್ಯಕ್ತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪುಣೆಯಲ್ಲಿ ಬೀದರ್ ಮೂಲಕ ವ್ಯಕ್ತಿಯನ್ನು ಬಂಧಿಸಲಾಗಿದೆ.

ಪುಣೆ: ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ ನೀಡಿದ ವ್ಯಕ್ತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪುಣೆಯಲ್ಲಿ ಬೀದರ್ ಮೂಲಕ ವ್ಯಕ್ತಿಯನ್ನು ಬಂಧಿಸಲಾಗಿದೆ.

ಆರೋಪಿಯನ್ನು ಭರತ್ ಉಂಚಾಲೆ ಎಂದು ಗುರುತಿಸಲಾಗಿದ್ದು, ಮೂಲತಃ ಕರ್ನಾಟಕದ ಬೀದರ್‌ನವನು. ವ್ಲಾಗರ್‌ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಕ್ತಿಯ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

ದಕ್ಷಿಣ ಕೊರಿಯಾದ ವ್ಲಾಗರ್ ಕೆಲ್ಲಿ ಎಂಬುವವರು ಪುಣೆಯಲ್ಲಿ ಎಳನೀರು ಸೇವಿಸುತ್ತಾ ಸ್ಥಳೀಯ ಅಂಗಡಿಯೊಂದರಲ್ಲಿ ವ್ಯಾಪಾರಿ ಮತ್ತು ಗ್ರಾಹಕರೊಂದಿಗೆ ಸಂಭಾಷಣೆ ನಡೆಸುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ, ಇಬ್ಬರು ಪುರುಷರು ಆಕೆಯ ಬಳಿ ಬರುತ್ತಾರೆ. ಅವರಲ್ಲಿ ಒಬ್ಬಾತ ಆಕೆಯ ಹೆಗಲ ಮೇಲೆ ಕೈಹಾಕುತ್ತಾನೆ. ಕೆಲ್ಲಿ ದೂರ ಸರಿಯುವ ಪ್ರಯತ್ನದ ನಡುವೆಯೇ ಆತ ಆಕೆಯನ್ನು ಮುಜುಗರಕ್ಕೀಡುಮಾಡುತ್ತಾನೆ.

ಕೆಲ್ಲಿ ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಪಿಂಪ್ರಿ-ಚಿಂಚ್‌ವಾಡ್ ಪ್ರದೇಶಕ್ಕೆ ಬಂದಿದ್ದರು ಮತ್ತು ಕಳೆದ ವಾರವಷ್ಟೇ ಈ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. 

ವಿಡಿಯೋದಲ್ಲಿ, ಕೆಲ್ಲಿ, ಇದು ನನ್ನನ್ನು ಆಶ್ಚರ್ಯಕ್ಕೀಡುಮಾಡಿದೆ. ಆದರೆ, 'ನಾನು ಇಲ್ಲಿಂದ ಆದಷ್ಟು ಬೇಗ ಓಡಿ ಹೋಗಬೇಕು' ಎಂದು ಹೇಳುತ್ತಾ, ಆ ಇಬ್ಬರಿಂದ ದೂರ ಬರುವುದು ಕಾಣಿಸುತ್ತದೆ. 'ಆ ಇಬ್ಬರು ತನ್ನನ್ನು ತಬ್ಬಿಕೊಳ್ಳಲು ಬಯಸಿದ್ದರು. ಅದು ಏಕೆಂದು ನನಗೆ ತಿಳಿದಿಲ್ಲ' ಎಂದು ಕೆಲ್ಲಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ್ಲಿ ಕೊಂಚ ಭಯದಿಂದಲೇ ಆ ಸ್ಥಳದಲ್ಲಿ ಸ್ವಲ್ಪ ದೂರ ಸರಿಯುತ್ತಾರೆ.

ಇದೇ ರೀತಿಯ ಘಟನೆಯಲ್ಲಿ, ಮುಂಬೈನಲ್ಲಿ ದಕ್ಷಿಣ ಕೊರಿಯಾದ ಮತ್ತೊಬ್ಬ ವ್ಲಾಗರ್‌ಗೆ ಕಿರುಕುಳ ನೀಡಿದ ಇಬ್ಬರು ವ್ಯಕ್ತಿಗಳನ್ನು ಕಳೆದ ವರ್ಷ ಬಂಧಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT