ಸಾಂದರ್ಭಿಕ ಚಿತ್ರ 
ದೇಶ

ಕೋವಿಡ್ ರೂಪಾಂತರ JN.1: ಭಯಪಡಬೇಡಿ ಎಂದ ಅಧಿಕಾರಿಗಳು!

ಗೋವಾದಲ್ಲಿ 34 ಸೇರಿದಂತೆ ದೇಶಾದ್ಯಂತ ಸೋಮವಾರ ಕೋವಿಡ್ ರೂಪಾಂತರ JN.1ನ 63 ಹೊಸ ಪ್ರಕರಣಗಳು ವರದಿಯಾಗಿವೆ ಆದಾಗ್ಯೂ, ಇದು ಯಾವುದೇ ತೀವ್ರತೆ ಅಥವಾ ಆಸ್ಪತ್ರೆಗೆ ದಾಖಲಾಗುವಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.  

ನವದೆಹಲಿ: ಗೋವಾದಲ್ಲಿ 34 ಸೇರಿದಂತೆ ದೇಶಾದ್ಯಂತ ಸೋಮವಾರ ಕೋವಿಡ್ ರೂಪಾಂತರ JN.1ನ 63 ಹೊಸ ಪ್ರಕರಣಗಳು ವರದಿಯಾಗಿವೆ ಆದಾಗ್ಯೂ, ಇದು ಯಾವುದೇ ತೀವ್ರತೆ ಅಥವಾ ಆಸ್ಪತ್ರೆಗೆ ದಾಖಲಾಗುವಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.  

ಕೋವಿಡ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಇಂಡಿಯಾ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಮುಖ್ಯಸ್ಥ ಡಾ ಎನ್ ಕೆ ಅರೋರಾ,  ಹೊಸ ಉಪ ರೂಪಾಂತರ ಭಾರತದಲ್ಲಿ ಪ್ರಾಯೋಗಿಕವಾಗಿ ಹೇಗೆ ವರ್ತಿಸುತ್ತಿದೆ ಎಂಬುದರ ಕುರಿತು ಕೆಲವೇ ವಾರಗಳಲ್ಲಿ ಹೇಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಹೊಸ ವೈರಸ್ ಭಾರತದಲ್ಲಿ ಹೇಗೆ ವಿಸ್ತರಿಸುತ್ತದೆ ಎಂಬುದನ್ನು ನಾವು ಕಾದು ನೋಡಬೇಕು. ಜಾಗರೂಕರಾಗಿರುವುದು ಒಳ್ಳೆಯದು, ಆದರೆ ನಾವು ಗಾಬರಿಯಾಗಬಾರದು. ವೈರಸ್ ಸೌಮ್ಯವಾಗಿದೆ ಮತ್ತು ಇದು ಆಸ್ಪತ್ರೆಗೆ ಕಾರಣವಾಗುವುದಿಲ್ಲ, ಪ್ರತಿಯೊಂದು ವೈರಸ್ ವಿಭಿನ್ನವಾಗಿ ವರ್ತಿಸುತ್ತದೆ ಎಂದು ಒತ್ತಿ ಹೇಳಿದ ಅವರು, ಹೊಸ ತಳಿಯು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು ಎಂದಿದ್ದಾರೆ.

ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಹ, ತಕ್ಷಣದ ಆತಂಕಕ್ಕೆ ಯಾವುದೇ ಕಾರಣವಿಲ್ಲ, ಸೋಂಕಿತರಲ್ಲಿ ಶೇಕಡಾ 92 ರಷ್ಟು ಜನರು ಮನೆ ಆಧಾರಿತ ಚಿಕಿತ್ಸೆಯನ್ನು ಆರಿಸಿಕೊಳ್ಳುತ್ತಿದ್ದಾರೆ, ಇದು ಸೌಮ್ಯವಾದ ಅನಾರೋಗ್ಯವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 Omicron ನ BA.4 ಮತ್ತು BA.5 ಜಾಗತಿಕವಾಗಿ ವಿನಾಶವನ್ನುಂಟುಮಾಡಿದರೆ, ಅದು ಭಾರತದಲ್ಲಿ ಹೆಚ್ಚು ಪರಿಣಾಮ ಬೀರಲಿಲ್ಲ. ಡೆಲ್ಟಾ ರೂಪಾಂತರವನ್ನು ಹೊರತುಪಡಿಸಿ, ಬೇರೆ ಯಾವುದೇ ರೂಪಾಂತರಗಳು ಭಾರತದಲ್ಲಿ ಅಷ್ಟು ಹಾನಿ ಮತ್ತು ಸಾವುಗಳನ್ನು ಉಂಟುಮಾಡಿಲ್ಲ  "ಓಮಿಕ್ರಾನ್ 55 ಉಪವಿಭಾಗಗಳನ್ನು ಹೊಂದಿದೆ. ಆದರೆ ಇದು ಡೆಲ್ಟಾ ಮಾಡಿದಷ್ಟು ಗಂಭೀರವಾಗಿ ಭಾರತಕ್ಕೆ ಬೆದರಿಕೆ ಹಾಕಲಿಲ್ಲ ಎಂದು ಅರೋರಾ ಹೇಳಿದರು.

ಆದಾಗ್ಯೂ, 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಸಹ-ಅಸ್ವಸ್ಥರಾಗಿರುವ ಹೆಚ್ಚಿನ ಅಪಾಯದ ಜನರು ಜಾಗರೂಕರಾಗಿರಬೇಕು ಮತ್ತು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಸಾಮಾನ್ಯ ಶೀತವನ್ನು ಹೊಂದಿದ್ದರೆ, ಪರೀಕ್ಷೆಗೆ ಒಳಗಾಗಬೇಕು. ಯಾವುದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರೆ, ತಕ್ಷಣ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಸಹ-ಅಸ್ವಸ್ಥವಾಗಿರುವ ಮತ್ತು ಮುನ್ನೆಚ್ಚರಿಕೆ ಅಥವಾ ಮೂರನೇ ಡೋಸ್ ತೆಗೆದುಕೊಳ್ಳದ ಜನರು ಮಾತ್ರ ಲಸಿಕೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli

SCROLL FOR NEXT