ಶಬರಿಮಲೆ 
ದೇಶ

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ: 200 ಕೋಟಿ ರೂಪಾಯಿ ಆದಾಯ

ದಿನದಿಂದ ದಿನಕ್ಕೆ ಶಬರಿಮಲೆಗೆ ಬರುತ್ತಿರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಎರಡು ತಿಂಗಳ ವಾರ್ಷಿಕ ತೀರ್ಥಯಾತ್ರೆಯ ಮೊದಲ ಹಂತವು ಡಿಸೆಂಬರ್ 27 ರಂದು ಮಂಡಲ ಪೂಜೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಮೂಲಕ ಶಬರಿಮಲೆಯಲ್ಲಿ ಆದಾಯ ಸಂಗ್ರಹವು 200 ಕೋಟಿ ರೂ.ಗಳನ್ನು ದಾಟಿದೆ.

ಶಬರಿಮಲೆ: ದಿನದಿಂದ ದಿನಕ್ಕೆ ಶಬರಿಮಲೆಗೆ ಬರುತ್ತಿರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಎರಡು ತಿಂಗಳ ವಾರ್ಷಿಕ ತೀರ್ಥಯಾತ್ರೆಯ ಮೊದಲ ಹಂತವು ಡಿಸೆಂಬರ್ 27 ರಂದು ಮಂಡಲ ಪೂಜೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಮೂಲಕ ಶಬರಿಮಲೆಯಲ್ಲಿ ಆದಾಯ ಸಂಗ್ರಹವು 200 ಕೋಟಿ ರೂ.ಗಳನ್ನು ದಾಟಿದೆ.

ಅಯ್ಯಪ್ಪ ದೇಗುಲದ ಉಸ್ತುವಾರಿ ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಡಿಸೆಂಬರ್ 25 ರವರೆಗೆ ಕಳೆದ 39 ದಿನಗಳಲ್ಲಿ ದೇವಸ್ಥಾನಕ್ಕೆ 204.30 ಕೋಟಿ ಆದಾಯ ಬಂದಿದೆ ಎಂದು ಮಂಗಳವಾರ ತಿಳಿಸಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟಿಡಿಬಿ ಅಧ್ಯಕ್ಷ ಪಿಎಸ್ ಪ್ರಶಾಂತ್, ಯಾತ್ರಾರ್ಥಿಗಳು ಕಾಣಿಕೆ ಎಂದು ಅರ್ಪಿಸುವ ನಾಣ್ಯಗಳನ್ನು ಎಣಿಸಿದ ನಂತರ ಆದಾಯದ ಮೊತ್ತವು ಹೆಚ್ಚಾಗುತ್ತದೆ.

ಒಟ್ಟು 204.30 ಕೋಟಿ ರೂ. ಆದಾಯದಲ್ಲಿ 63.89 ಕೋಟಿ ರೂ.ಗಳನ್ನು ಭಕ್ತರು 'ಕಾಣಿಕೆ'ಯಾಗಿ ಅರ್ಪಿಸಿದ್ದಾರೆ ಮತ್ತು 'ಅರವಣ' (ಪ್ರಸಾದ) ಮಾರಾಟದ ಮೂಲಕ 96.32 ಕೋಟಿ ರೂ. ಗಳಿಸಲಾಗಿದೆ ಎಂದು ಅವರು ಹೇಳಿದರು.

ಯಾತ್ರಾರ್ಥಿಗಳಿಗೆ ಮಾರಾಟವಾದ ಮತ್ತೊಂದು ಪ್ರಸಾದವಾದ 'ಅಪ್ಪಂ'ನಿಂದ 12.38 ಕೋಟಿ ರೂ. ಆದಾಯ ಲಭ್ಯವಾಗಿದೆ ಎಂದು ಅವರು ಹೇಳಿದರು.

ಈಗ ನಡೆಯುತ್ತಿರುವ ವಾರ್ಷಿಕ ಯಾತ್ರಾ ಋತುವಿನಲ್ಲಿ ಭಾರಿ ಜನದಟ್ಟಣೆ ಕಂಡುಬಂದಿದ್ದು, ಈ ಋತುವಿನಲ್ಲಿ ಡಿಸೆಂಬರ್ 25 ರವರೆಗೆ ಶಬರಿಮಲೆಗೆ 31,43,163 ಭಕ್ತರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಟಿಡಿಬಿ ತನ್ನ ಮಿತಿಗಳ ಹೊರತಾಗಿಯೂ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಹೇಳಿದ ಪ್ರಶಾಂತ್, ಮಂಡಳಿಯು ತನ್ನ 'ಅನ್ನದಾನ ಮಂಡಲಂ' ಮೂಲಕ ಡಿಸೆಂಬರ್ 25 ರವರೆಗೆ 7,25,049 ಜನರಿಗೆ ಉಚಿತ ಆಹಾರವನ್ನು ನೀಡಿದೆ ಎಂದು ಹೇಳಿದರು.

ಮಂಡಲ ಪೂಜೆಯ ನಂತರ ದೇಗುಲವನ್ನು ಬುಧವಾರ ರಾತ್ರಿ 11 ಗಂಟೆಗೆ ಮುಚ್ಚಲಾಗುವುದು ಮತ್ತು ಡಿಸೆಂಬರ್ 30 ರಂದು ಮಕರವಿಳಕ್ಕು ಆಚರಣೆಗಾಗಿ ಮತ್ತೆ ತೆರೆಯಲಾಗುವುದು. ಶಬರಿಮಲೆ ದೇಗುಲ ಜನವರಿ 15 ರಂದು ಮಕರವಿಳಕ್ಕು ಆಚರಣೆಗೆ ಸಾಕ್ಷಿಯಾಗಲಿದೆ ಎಂದು ಪ್ರಶಾಂತ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT