ಅಖು ಚಿಂಗಾಂಗ್‌ಬಾಮ್ 
ದೇಶ

ಮಣಿಪುರ: ತಾಯಿ ಮತ್ತು ಪತ್ನಿಗೆ ಬಂದೂಕು ತೋರಿಸಿ ಗಾಯಕನನ್ನು ಅಪಹರಿಸಿದ ದುಷ್ಕರ್ಮಿಗಳು!

ಮಣಿಪುರದ ಗಾಯಕ ಮತ್ತು ಸಾಹಿತಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಮಾಹಿತಿಯ ಪ್ರಕಾರ, ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗಾಯಕನ ಹೆಂಡತಿ ಮತ್ತು ತಾಯಿಗೆ ಬಂದೂಕು ತೋರಿಸಿ ನಂತರ ಗಾಯಕನನ್ನು ಅಪಹರಿಸಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ಮಣಿಪುರದ ಗಾಯಕ ಮತ್ತು ಸಾಹಿತಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಮಾಹಿತಿಯ ಪ್ರಕಾರ, ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗಾಯಕನ ಹೆಂಡತಿ ಮತ್ತು ತಾಯಿಗೆ ಬಂದೂಕು ತೋರಿಸಿ ನಂತರ ಗಾಯಕನನ್ನು ಅಪಹರಿಸಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ.

ಪೊಲೀಸರ ಪ್ರಕಾರ, ಘಟನೆ ಇಂದು ನಡೆದಿದ್ದು ಬಂದೂಕುದಾರಿಗಳು ಮಣಿಪುರದ ಗಾಯಕ ಅಖು ಚಿಂಗಾಂಗ್‌ಬಾಮ್ ಅವರನ್ನು ಅಪಹರಿಸಿದ್ದಾರೆ. ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿರುವ ಗಾಯಕ ಅಖು ಚಿಂಗಾಂಗ್ಬಾಮ್ ಇಂಫಾಲ್ ಪೂರ್ವದ ಖುರೈ ನಿವಾಸಿ. 

ಚಿಂಗಾಂಗ್ಬಾಮ್ ಗೀತರಚನೆಕಾರ-ಗಾಯಕ ಮತ್ತು ಸ್ಥಳೀಯ ರಾಕ್ ಬ್ಯಾಂಡ್ ಇಂಫಾಲ್ ಟಾಕೀಸ್ ಸಂಸ್ಥಾಪಕ. ಮೇ 3ರಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜಾತಿ ಹಿಂಸಾಚಾರ ನಡೆಯುತ್ತಿದೆ.

ಹಿಂಸಾಚಾರ ಹೇಗೆ ಪ್ರಾರಂಭವಾಯಿತು?
ಮೇ 3 ರಂದು ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಮಣಿಪುರ (ATSUM) 'ಬುಡಕಟ್ಟು ಏಕತಾ ಮಾರ್ಚ್' ನಡೆಸಿತ್ತು. ಈ ರ್ಯಾಲಿಯನ್ನು ಚುರಾಚಂದ್‌ಪುರದ ತೊರ್ಬಾಂಗ್ ಪ್ರದೇಶದಲ್ಲಿ ನಡೆಸಲಾಯಿತು. ಮೈತೇಯಿ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯ ವಿರುದ್ಧ ರ್ಯಾಲಿ ನಡೆಸಲಾಯಿತು. ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಈ ರ್ಯಾಲಿಯಲ್ಲಿ ಆದಿವಾಸಿಗಳು ಮತ್ತು ಆದಿವಾಸಿಗಳಲ್ಲದವರ ನಡುವಿನ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ 10 ವರ್ಷದಲ್ಲಿ 50 ಸಾವಿರ ಶೌಚಾಲಯ ಕಟ್ಟಲಿಲ್ಲ, ನಾವು 50 ಸಾವಿರ ರೈಲು ಕೋಚ್ ನಿರ್ಮಿಸಿದೆವು: ಪ್ರಧಾನಿ ಮೋದಿ

'ತಂದೆಯ ಮುಖವನ್ನೇ ನೋಡಿಲ್ಲ': ʻಬಿಗ್‌ ಬಾಸ್‌ʼ ವೇದಿಕೆಯಲ್ಲಿ ಅಪ್ಪ-ಅಮ್ಮನ ಡಿವೋರ್ಸ್‌ ನೋವು ಹಂಚಿಕೊಂಡ ʻಪ್ರೇಮಕಾವ್ಯʼ ನಟಿ ವೈಷ್ಣವಿ!

'ಶೀಘ್ರದಲ್ಲೇ ಶುಗರ್ ಡ್ಯಾಡಿಯನ್ನು ಕೊಲ್ಲುತ್ತೇನೆ': ಪತ್ನಿ ಕೊಂದು ತಲೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಪಾಪಿ, ಪೊಲೀಸರ ಮುಂದೆಯೇ ಬೆದರಿಕೆ!

ತಮಿಳುನಾಡು ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ: ಸಿಎಂ ಜೋಸೆಫ್ ವಿಜಯ್ ಆರೋಪಕ್ಕೆ DMK ಆಕ್ರೋಶ, ಸದನದಿಂದ ಶಾಸಕರು ಹೊರಕ್ಕೆ..!

ಇಂಡೋನೇಷ್ಯಾದಲ್ಲಿ ಮತ್ತೆ ಸ್ಫೋಟಿಸಿದ Anak Krakatau ಜ್ವಾಲಾಮುಖಿ; ಲಾವಾ ಕಾರಂಜಿ, 15 ಕಿ.ಮೀ ಎತ್ತರಕ್ಕೆ ಬೂದಿ, ವಿಮಾನ ಸಂಚಾರ ಬಂದ್! Video