ಜಾರಿ ನಿರ್ದೇಶನಾಲಯದ ಚಿಹ್ನೆ 
ದೇಶ

ದೆಹಲಿ ಅಬಕಾರಿ ಹಗರಣ: ಮಾಧ್ಯಮ ಸಂಸ್ಥೆ ಮಾಲಿಕ, ಗೋವಾ ಚುನಾವಣೆಯ ಆಪ್ ಪ್ರಚಾರ ಉಸ್ತುವಾರಿ ರಾಜೇಶ್ ಜೋಷಿ ಬಂಧನ

ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತಕ್ಕೀಡಾಗುವವರ ಸರದಿ ಮುಂದುವರಿಯುತ್ತಿದೆ. ಜಾರಿ ನಿರ್ದೇಶನಾಲಯವು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಚಾರಿಯಟ್ ಮೀಡಿಯಾದ ಮಾಲಿಕ ರಾಜೇಶ್ ಜೋಶಿ ಅವರನ್ನು ಬಂಧಿಸಿದೆ.

ನವದೆಹಲಿ: ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತಕ್ಕೀಡಾಗುವವರ ಸರದಿ ಮುಂದುವರಿಯುತ್ತಿದೆ. ಜಾರಿ ನಿರ್ದೇಶನಾಲಯವು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಚಾರಿಯಟ್ ಮೀಡಿಯಾದ ಮಾಲಿಕ ರಾಜೇಶ್ ಜೋಶಿ ಅವರನ್ನು ಬಂಧಿಸಿದೆ.

ಜೋಶಿ ಅವರು ಕಿಕ್‌ಬ್ಯಾಕ್ ಹಣದ ಫಲಾನುಭವಿಯಾಗಿದ್ದು, ಇದು 'ಮದ್ಯ ಲಾಬಿ'ಗಳಿಗೆ ಒಲವು ತೋರಿದ್ದರಿಂದ ಅವ್ಯವಹಾರ ನಡೆಯಿತು. ಮಧ್ಯವರ್ತಿಗಳು, ಸರ್ಕಾರ ಮತ್ತು ರಾಜಕಾರಣಿಗಳ ನಡುವೆ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದೆ. 

ಇಡಿ ಪ್ರಕಾರ, ಅವರು ಗೋವಾದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಪ್ ಪರವಾಗಿ ಕಿಕ್‌ಬ್ಯಾಕ್‌ನಿಂದ ಪಡೆದ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಎರಡನೇ ಚಾರ್ಜ್‌ಶೀಟ್‌ನಲ್ಲಿ, ಪ್ರಧಾನ ಆರೋಪಿ ವಿಜಯ್ ನಾಯರ್ ಸೌತ್ ಗ್ರೂಪ್‌ನಿಂದ 100 ಕೋಟಿ ರೂಪಾಯಿಗಳ ಕಿಕ್‌ಬ್ಯಾಕ್ ನ್ನು ಆಪ್ ನಾಯಕರ ಪರವಾಗಿ ಪಡೆದಿದ್ದಾರೆ.

2022 ರಲ್ಲಿ ಎಎಪಿಯ ಗೋವಾ ಚುನಾವಣಾ ಪ್ರಚಾರದಲ್ಲಿ 100 ಕೋಟಿ ರೂಪಾಯಿಯ ಭಾಗವನ್ನು ಬಳಸಲಾಗಿದೆ ಎಂದು ಆರೋಪಪಟ್ಟಿ ಹೇಳಿಕೊಂಡಿದೆ. "ಸಮೀಕ್ಷಾ ತಂಡಗಳ ಭಾಗವಾಗಿದ್ದ ಸ್ವಯಂಸೇವಕರಿಗೆ 70 ಲಕ್ಷ ರೂಪಾಯಿಗಳ ನಗದು ಪಾವತಿಗಳನ್ನು ಮಾಡಲಾಗಿದೆ" ಎಂದು ಅದು ಆರೋಪಿಸಿದೆ.

ಇಡಿ ಮೂಲಗಳ ಪ್ರಕಾರ, ರಾಜೇಶ್ ಜೋಶಿ ಮತ್ತು ಅವರ ಸಂಸ್ಥೆಯು ಗೋವಾ ಚುನಾವಣೆಗೆ ಕಿಕ್‌ಬ್ಯಾಕ್ ಹಣವನ್ನು ಬಳಸಿಕೊಂಡಿದೆ. ಇಂದು ಪಿಎಂಎಲ್‌ಎ ನ್ಯಾಯಾಲಯ ಮತ್ತು ಏಜೆನ್ಸಿ ಆತನನ್ನು ಕಸ್ಟಡಿಯಲ್ ರಿಮಾಂಡ್ ಕೋರಲಿದೆ.

ಈ ವಾರದ ಆರಂಭದಲ್ಲಿ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಇಡಿ ಪಂಜಾಬ್ ಮೂಲದ ಉದ್ಯಮಿ ಗೌತಮ್ ಮಲ್ಹೋತ್ರಾ ಅವರನ್ನು ಬಂಧಿಸಿತ್ತು. ಎಸ್‌ಎಡಿ ಮಾಜಿ ಶಾಸಕ ದೀಪಕ್ ಮಲ್ಹೋತ್ರಾ ಅವರ ಪುತ್ರ, ಎಫ್ & ಬಿ ಉದ್ಯಮಿಗಳ ಆಪ್ತ ಸಹಾಯಕ ಮತ್ತು ಅಬಕಾರಿ ಪ್ರಕರಣದ ಆರೋಪಿ ದಿನೇಶ್ ಅರೋರಾ ಅವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿತ್ತು. ಓಯಸಿಸ್ ಗ್ರೂಪ್‌ನೊಂದಿಗೆ ಸಂಬಂಧ ಹೊಂದಿರುವ ಅವರನ್ನು ಫೆಬ್ರವರಿ 15 ರವರೆಗೆ ವಿಚಾರಣೆಗಾಗಿ ಇಡಿ ಕಸ್ಟಡಿಗೆ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT