ಗೌತಮ್ ಅದಾನಿ 
ದೇಶ

ಅದಾನಿ ಹಾಗೂ ಸಮೂಹದ ಬಗ್ಗೆ 'ಕೈಗೊಂಬೆಗಳಿಂದ' ತಪ್ಪು ಮಾಹಿತಿ ಸೃಷ್ಟಿ, ತಟಸ್ಥವಲ್ಲದ ಮಾಹಿತಿ ಸೇರ್ಪಡೆ: ವಿಕಿಪಿಡಿಯಾ

ಒಂದು ದಶಕಕ್ಕೂ ಹೆಚ್ಚಿನ ಸಮಯ, ಅದಾನಿ ಕೈಗೊಂಬೆಗಳು-ಕೆಲವರು ಸಂಸ್ಥೆಯ ಉದ್ಯೋಗಿಗಳು ಅದಾನಿ ಹಾಗೂ ಅದಾನಿ ಕುಟುಂಬ, ಅವರ ಪ್ರತಿಯೊಂದು ಉದ್ಯಮದ ಬಗ್ಗೆ ವಿಕಿಪಿಡಿಯಾದಲ್ಲಿ ತಟಸ್ಥವಲ್ಲದ ಮಾಹಿತಿಯನ್ನು ಸೇರಿಸಿ ಹಾಗೂ ಮಾಹಿತಿಯಿಂದ ಎಚ್ಚರಿಕೆಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದ್ದಾರೆ ಎಂದು ವಿಕಿಪಿಡಿಯಾ ಹೇಳಿದೆ. 

ನವದೆಹಲಿ: ಒಂದು ದಶಕಕ್ಕೂ ಹೆಚ್ಚಿನ ಸಮಯ, ಅದಾನಿ ಕೈಗೊಂಬೆಗಳು-ಕೆಲವರು ಸಂಸ್ಥೆಯ ಉದ್ಯೋಗಿಗಳು ಅದಾನಿ ಹಾಗೂ ಅದಾನಿ ಕುಟುಂಬ, ಅವರ ಪ್ರತಿಯೊಂದು ಉದ್ಯಮದ ಬಗ್ಗೆ ವಿಕಿಪಿಡಿಯಾದಲ್ಲಿ ತಟಸ್ಥವಲ್ಲದ ಮಾಹಿತಿಯನ್ನು ಸೇರಿಸಿ ಹಾಗೂ ಮಾಹಿತಿಯಿಂದ ಎಚ್ಚರಿಕೆಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದ್ದಾರೆ ಎಂದು ವಿಕಿಪಿಡಿಯಾ ಹೇಳಿದೆ. 

ಒಂದು ತಿಂಗಳ ಅವಧಿಯಲ್ಲಿ ಅದಾನಿ ಸಮೂಹ 70 ಬಿಲಿಯನ್ ಡಾಲರ್ ನಷ್ಟು ಸಂಪತ್ತನ್ನು ಕಳೆದುಕೊಂಡಿದ್ದು, ಜಾಗತಿಕ ಮಟ್ಟದ ಬಿಲಿಯನೇರ್ ಗಳ ಪಟ್ಟಿಯಲ್ಲಿ 25 ನೇ ಸ್ಥಾನಕ್ಕೆ ಇಳಿದಿದ್ದಾರೆ.

ಅಮೇರಿಕಾದ ಶಾರ್ಟ್ ಸೆಲ್ಲರ್ ಹಿಂಡನ್ಬರ್ಗ್ ಸಂಶೋಧನೆ ಸಂಸ್ಥೆ ಅದಾನಿ ಸಮೂಹದ ವಿರುದ್ಧ ವಂಚನೆ, ಸ್ಟಾಕ್ ಬೆಲೆ ತಿರುಚುವುದು, ಅಕ್ರಮ ಹಣ ವರ್ಗಾವಣೆ ವಿಷಯದಲ್ಲಿ ಗಂಭೀರ ಆರೋಪ ಮಾಡಿತ್ತು.
 
ಫೆ.20 ರಂದು ತಪ್ಪು ಮಾಹಿತಿಯ ವರದಿಯಲ್ಲಿ ವಿಕಿಪಿಡಿಯಾ, ಹಿಂಡನ್ ಬರ್ಗ್ ಆರೋಪಿಸಿದಂತೆ ವಂಚಕನೆಂದು ಉಲ್ಲೇಖಿಸಲಾಗಿರುವ ವ್ಯಕ್ತಿಯ ಬಗ್ಗೆ ಬರೆದಿದ್ದು, ಅದಾನಿ ಹಗೂ ಆತನ ಉದ್ಯೋಗಿಗಳಿಂದ ವಿಕಿಪಿಡಿಯಾ ಓದುಗರನ್ನು ವಿಕಿಪೀಡಿಯಾ ಲೇಖನಗಳ ತಟಸ್ಥವಲ್ಲದ ಸಾರ್ವಜನಿಕ ಸಂಪರ್ಕ ಆವೃತ್ತಿಗಳ ಮೂಲಕ ವಂಚಿಸಲು ಯತ್ನಿಸಿದ್ದರೇ? ಎಂಬ ಪ್ರಶ್ನೆಗೆ ಬಹುತೇಕ ಅವರು ಮಾಡಿದ್ದರು ಎಂದು ಉತ್ತರಿಸಿದೆ.

ಅದಾನಿ ಕುಟುಂಬ, ಕುಟುಂಬ ಉದ್ಯಮಕ್ಕೆ ಸಂಬಂಧಿಸಿದ 9 ಆರ್ಟಿಕಲ್ ಗಳನ್ನು ಸೃಷ್ಟಿಸಿದ ಅಥವಾ ಪರಿಷ್ಕರಿಸಿದ 40 ಕ್ಕೂ ಹೆಚ್ಚು ಅಘೋಷಿತ, ಹಣಪಡೆದು ಎಡಿಟ್ ಮಾಡುವ ವ್ಯಕ್ತಿಗಳನ್ನು ನಿಷೇಧಿಸಲಾಗಿದೆ ಅಥವಾ ನಿರ್ಬಂಧಿಸಲಾಗಿದೆ. ಈ ಪೈಕಿ ಹಲವರು ಹಲವು ಲೇಖನಗಳನ್ನು ಎಡಿಟ್ ಮಾಡಿದ್ದರು ಹಾಗೂ ತಟಸ್ಥವಲ್ಲದ ಅಂಶಗಳನ್ನು ಸೇರಿಸಿದ್ದರು ಎಂದು ವಿಕೀಪಿಡಿಯಾ ಹೇಳಿದೆ.
 
ವಿಕಿಪಿಡಿಯಾದಲ್ಲಿ ಯಾವುದೇ ಪೇಜ್ ಹಾಗೂ ಲೇಖನಗಳನ್ನು ಆಕ್ಷಣವೇ ಎಡಿಟ್ ಮಾಡಬಹುದಾಗಿದೆ ಅಥವಾ ಬದಲಾವಣೆ ಮಾಡಲು ಅವಕಾಶವಿದೆ. ಆದರೆ ತಟಸ್ಥ ಮಾಹಿತಿಯನ್ನೊಳಗೊಂಡಿರಬೇಕೆಂಬ ನಿಯಮದಡಿಯಲ್ಲಿ ವಿಕಿಪಿಡಿಯಾ ಕಾರ್ಯನಿರ್ವಹಿಸುತ್ತದೆ.

ಈ ರೀತಿ ಲೇಖನಗಳನ್ನು ಎಡಿಟ್ ಮಾಡುವವರು ಅದಾನಿ ಸಂಸ್ಥೆಯ ನೌಕರರೇ ಆಗಿದ್ದು, ಈ ಪೈಕಿ ಅದಾನಿ ಪತ್ನಿ ಪ್ರೀತಿ, ಪುತ್ರ ಕರಣ್, ಸೋದರಳಿಯ ಪ್ರಣವ್ ಹಾಗೂ ಸಮೂಹ ಸಂಸ್ಥೆಗಳ ವಿರುದ್ಧವೂ ವಿಕಿಪಿಡಿಯಾ ಆರೋಪ ಮಾಡಿದೆ. ವಿಕಿಪಿಡಿಯಾ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಸಮೂಹದ ವಕ್ತಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT