ಗೌತಮ್ ಅದಾನಿ 
ದೇಶ

ಅದಾನಿ ಹಾಗೂ ಸಮೂಹದ ಬಗ್ಗೆ 'ಕೈಗೊಂಬೆಗಳಿಂದ' ತಪ್ಪು ಮಾಹಿತಿ ಸೃಷ್ಟಿ, ತಟಸ್ಥವಲ್ಲದ ಮಾಹಿತಿ ಸೇರ್ಪಡೆ: ವಿಕಿಪಿಡಿಯಾ

ಒಂದು ದಶಕಕ್ಕೂ ಹೆಚ್ಚಿನ ಸಮಯ, ಅದಾನಿ ಕೈಗೊಂಬೆಗಳು-ಕೆಲವರು ಸಂಸ್ಥೆಯ ಉದ್ಯೋಗಿಗಳು ಅದಾನಿ ಹಾಗೂ ಅದಾನಿ ಕುಟುಂಬ, ಅವರ ಪ್ರತಿಯೊಂದು ಉದ್ಯಮದ ಬಗ್ಗೆ ವಿಕಿಪಿಡಿಯಾದಲ್ಲಿ ತಟಸ್ಥವಲ್ಲದ ಮಾಹಿತಿಯನ್ನು ಸೇರಿಸಿ ಹಾಗೂ ಮಾಹಿತಿಯಿಂದ ಎಚ್ಚರಿಕೆಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದ್ದಾರೆ ಎಂದು ವಿಕಿಪಿಡಿಯಾ ಹೇಳಿದೆ. 

ನವದೆಹಲಿ: ಒಂದು ದಶಕಕ್ಕೂ ಹೆಚ್ಚಿನ ಸಮಯ, ಅದಾನಿ ಕೈಗೊಂಬೆಗಳು-ಕೆಲವರು ಸಂಸ್ಥೆಯ ಉದ್ಯೋಗಿಗಳು ಅದಾನಿ ಹಾಗೂ ಅದಾನಿ ಕುಟುಂಬ, ಅವರ ಪ್ರತಿಯೊಂದು ಉದ್ಯಮದ ಬಗ್ಗೆ ವಿಕಿಪಿಡಿಯಾದಲ್ಲಿ ತಟಸ್ಥವಲ್ಲದ ಮಾಹಿತಿಯನ್ನು ಸೇರಿಸಿ ಹಾಗೂ ಮಾಹಿತಿಯಿಂದ ಎಚ್ಚರಿಕೆಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದ್ದಾರೆ ಎಂದು ವಿಕಿಪಿಡಿಯಾ ಹೇಳಿದೆ. 

ಒಂದು ತಿಂಗಳ ಅವಧಿಯಲ್ಲಿ ಅದಾನಿ ಸಮೂಹ 70 ಬಿಲಿಯನ್ ಡಾಲರ್ ನಷ್ಟು ಸಂಪತ್ತನ್ನು ಕಳೆದುಕೊಂಡಿದ್ದು, ಜಾಗತಿಕ ಮಟ್ಟದ ಬಿಲಿಯನೇರ್ ಗಳ ಪಟ್ಟಿಯಲ್ಲಿ 25 ನೇ ಸ್ಥಾನಕ್ಕೆ ಇಳಿದಿದ್ದಾರೆ.

ಅಮೇರಿಕಾದ ಶಾರ್ಟ್ ಸೆಲ್ಲರ್ ಹಿಂಡನ್ಬರ್ಗ್ ಸಂಶೋಧನೆ ಸಂಸ್ಥೆ ಅದಾನಿ ಸಮೂಹದ ವಿರುದ್ಧ ವಂಚನೆ, ಸ್ಟಾಕ್ ಬೆಲೆ ತಿರುಚುವುದು, ಅಕ್ರಮ ಹಣ ವರ್ಗಾವಣೆ ವಿಷಯದಲ್ಲಿ ಗಂಭೀರ ಆರೋಪ ಮಾಡಿತ್ತು.
 
ಫೆ.20 ರಂದು ತಪ್ಪು ಮಾಹಿತಿಯ ವರದಿಯಲ್ಲಿ ವಿಕಿಪಿಡಿಯಾ, ಹಿಂಡನ್ ಬರ್ಗ್ ಆರೋಪಿಸಿದಂತೆ ವಂಚಕನೆಂದು ಉಲ್ಲೇಖಿಸಲಾಗಿರುವ ವ್ಯಕ್ತಿಯ ಬಗ್ಗೆ ಬರೆದಿದ್ದು, ಅದಾನಿ ಹಗೂ ಆತನ ಉದ್ಯೋಗಿಗಳಿಂದ ವಿಕಿಪಿಡಿಯಾ ಓದುಗರನ್ನು ವಿಕಿಪೀಡಿಯಾ ಲೇಖನಗಳ ತಟಸ್ಥವಲ್ಲದ ಸಾರ್ವಜನಿಕ ಸಂಪರ್ಕ ಆವೃತ್ತಿಗಳ ಮೂಲಕ ವಂಚಿಸಲು ಯತ್ನಿಸಿದ್ದರೇ? ಎಂಬ ಪ್ರಶ್ನೆಗೆ ಬಹುತೇಕ ಅವರು ಮಾಡಿದ್ದರು ಎಂದು ಉತ್ತರಿಸಿದೆ.

ಅದಾನಿ ಕುಟುಂಬ, ಕುಟುಂಬ ಉದ್ಯಮಕ್ಕೆ ಸಂಬಂಧಿಸಿದ 9 ಆರ್ಟಿಕಲ್ ಗಳನ್ನು ಸೃಷ್ಟಿಸಿದ ಅಥವಾ ಪರಿಷ್ಕರಿಸಿದ 40 ಕ್ಕೂ ಹೆಚ್ಚು ಅಘೋಷಿತ, ಹಣಪಡೆದು ಎಡಿಟ್ ಮಾಡುವ ವ್ಯಕ್ತಿಗಳನ್ನು ನಿಷೇಧಿಸಲಾಗಿದೆ ಅಥವಾ ನಿರ್ಬಂಧಿಸಲಾಗಿದೆ. ಈ ಪೈಕಿ ಹಲವರು ಹಲವು ಲೇಖನಗಳನ್ನು ಎಡಿಟ್ ಮಾಡಿದ್ದರು ಹಾಗೂ ತಟಸ್ಥವಲ್ಲದ ಅಂಶಗಳನ್ನು ಸೇರಿಸಿದ್ದರು ಎಂದು ವಿಕೀಪಿಡಿಯಾ ಹೇಳಿದೆ.
 
ವಿಕಿಪಿಡಿಯಾದಲ್ಲಿ ಯಾವುದೇ ಪೇಜ್ ಹಾಗೂ ಲೇಖನಗಳನ್ನು ಆಕ್ಷಣವೇ ಎಡಿಟ್ ಮಾಡಬಹುದಾಗಿದೆ ಅಥವಾ ಬದಲಾವಣೆ ಮಾಡಲು ಅವಕಾಶವಿದೆ. ಆದರೆ ತಟಸ್ಥ ಮಾಹಿತಿಯನ್ನೊಳಗೊಂಡಿರಬೇಕೆಂಬ ನಿಯಮದಡಿಯಲ್ಲಿ ವಿಕಿಪಿಡಿಯಾ ಕಾರ್ಯನಿರ್ವಹಿಸುತ್ತದೆ.

ಈ ರೀತಿ ಲೇಖನಗಳನ್ನು ಎಡಿಟ್ ಮಾಡುವವರು ಅದಾನಿ ಸಂಸ್ಥೆಯ ನೌಕರರೇ ಆಗಿದ್ದು, ಈ ಪೈಕಿ ಅದಾನಿ ಪತ್ನಿ ಪ್ರೀತಿ, ಪುತ್ರ ಕರಣ್, ಸೋದರಳಿಯ ಪ್ರಣವ್ ಹಾಗೂ ಸಮೂಹ ಸಂಸ್ಥೆಗಳ ವಿರುದ್ಧವೂ ವಿಕಿಪಿಡಿಯಾ ಆರೋಪ ಮಾಡಿದೆ. ವಿಕಿಪಿಡಿಯಾ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಸಮೂಹದ ವಕ್ತಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT