ಸಿಸಿಟಿವಿ ದೃಶ್ಯ 
ದೇಶ

ಜಿಮ್‌ ಮಾಡೋ ಬಯಕೆ: ವ್ಯಾಯಾಮ ಮಾಡುವಾಗಲೇ ಕುಸಿದುಬಿದ್ದು ಹೋಟೆಲ್ ಮಾಲೀಕ ಸಾವು, ವಿಡಿಯೋ

ನಟರು ಜಿಮ್ ಮಾಡಿ ತಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳುವಂತೆ ಯುವಕರು ಸಹ ಜಿಮ್ ಮೇಲಿನ ವ್ಯಾಮೋಹ ಜಾಸ್ತಿಯಾಗುತ್ತಿದೆ. ಆದರೆ ಇತ್ತೀಚೆಗೆ ಜಿಮ್ ಮಾಡುವಾಗಲೇ ಕುಸಿದುಬಿದ್ದು ಹಲವು ಪ್ರಾಣಕಳೆದುಕೊಂಡಿರುವ ಘಟನೆಗಳು ವರದಿಯಾಗುತ್ತಿವೆ.

ಇಂದೋರ್‌(ಮಧ್ಯಪ್ರದೇಶ): ನಟರು ಜಿಮ್ ಮಾಡಿ ತಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳುವಂತೆ ಯುವಕರು ಸಹ ಜಿಮ್ ಮೇಲಿನ ವ್ಯಾಮೋಹ ಜಾಸ್ತಿಯಾಗುತ್ತಿದೆ. ಆದರೆ ಇತ್ತೀಚೆಗೆ ಜಿಮ್ ಮಾಡುವಾಗಲೇ ಕುಸಿದುಬಿದ್ದು ಹಲವು ಪ್ರಾಣಕಳೆದುಕೊಂಡಿರುವ ಘಟನೆಗಳು ವರದಿಯಾಗುತ್ತಿವೆ.

ಲಾಸುಡಿಯಾ ಪ್ರದೇಶದ ಗೋಲ್ಡನ್ ಜಿಮ್‌ನಲ್ಲಿ ತಮ್ಮ ದೈನಂದಿನ ವ್ಯಾಯಾಮವನ್ನು ಮಾಡುತ್ತಿದ್ದ ಖ್ಯಾತ ಹೋಟೆಲ್ ಮಾಲೀಕ ಪ್ರದೀಪ್ ರಘುವಂಶಿ ಈ ವೇಳೆ ಏಕಾಏಕಿ ಕುಸಿದುಬಂದಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸಮೀಪದ ಭಂಡಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಇಂದೋರ್‌ನ ಜಿಮ್‌ನ ವೀಡಿಯೊ ವೈರಲ್ ಆಗಿದೆ. ಇದರಲ್ಲಿ ಹೋಟೆಲ್ ನಿರ್ವಾಹಕರೊಬ್ಬರು ಜಿಮ್‌ನಲ್ಲಿ ವ್ಯಾಯಾಮ ಮಾಡುವುದನ್ನು ಕಾಣಬಹುದು. ಈ ವೇಳೆ ತಲೆಸುತ್ತು ಬಂದು ನೆಲದ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ವೈದ್ಯರ ಪ್ರಕಾರ, ಪ್ರದೀಪ್ ಹೃದಯಾಘಾತಕ್ಕೆ ಒಳಗಾಗಿದ್ದರು, ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಮೃತ ಪ್ರದೀಪ್ ರಘುವಂಶಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜವರ್ಗಿಯ ಅವರಿಗೆ ಆಪ್ತರು ಎನ್ನಲಾಗಿದೆ. ಇಂದೋರ್‌ನ ಲಾಸುಡಿಯಾ ಪ್ರದೇಶದ ಗೋಲ್ಡನ್ ಜಿಮ್‌ನಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸ್ಕೀಮ್ ನಂಬರ್ 78ರಲ್ಲಿ ನೆಲೆಸಿರುವ ಇಂದೋರ್‌ನ ಹೆಸರಾಂತ ಹೋಟೆಲ್ ಮಾಲೀಕ ಪ್ರದೀಪ್ ಅವರು ದಿನನಿತ್ಯದಂತೆ ವರ್ಕೌಟ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ವ್ಯಾಯಾಮಕ್ಕೂ ಮುನ್ನ ವೈದ್ಯಕೀಯ ತಪಾಸಣೆ ಅಗತ್ಯ ಎಂದು ಭಂಡಾರಿ ಆಸ್ಪತ್ರೆಯ ಡಾ.ಹರೀಶ್ ಸೋನಿ ಹೇಳಿದ್ದಾರೆ. ವಯಸ್ಸಾದ ವ್ಯಕ್ತಿಯು ವ್ಯಾಯಾಮದ ಮೊದಲು ವೈದ್ಯರ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಜಿಮ್‌ಗೆ ಹೋಗಲು ಪ್ರಾರಂಭಿಸಿದ್ದಾರೆ. ಅಲ್ಲಿ ಫಿಟ್‌ನೆಸ್‌ಗಾಗಿ ವರ್ಕ್ ಔಟ್ ಮಾಡಿದ ನಂತರ ಸಮಸ್ಯೆ ಉಂಟಾಗುತ್ತದೆ. ವೈದ್ಯರ ಸಲಹೆಯಿಲ್ಲದೆ ಯಾವುದೇ ಪ್ರೋಟೀನ್ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ. 

ಪ್ರದೀಪ್ ನಮ್ಮ ಹಳೆಯ ಕ್ಲೈಂಟ್ ಎಂದು ಜಿಮ್ ಟ್ರೈನರ್ ಹೇಳಿದ್ದಾರೆ. ಪ್ರತಿನಿತ್ಯ ಜಿಮ್‌ಗೆ ಬರುತ್ತಿದ್ದರು. ಇಂದು ಹಠಾತ್ ಹೃದಯಾಘಾತದಿಂದ ಕೇವಲ 3 ನಿಮಿಷದಲ್ಲಿ ಎಲ್ಲವೂ ಮುಗಿದು ಹೋಯಿತು. ಜಿಮ್ ಮಾಡುವ ಮೊದಲು ನಮ್ಮ ಸಾಮರ್ಥ್ಯ ಏನೆಂದು ನೋಡಿ ಎಂದರು. ಇತರರನ್ನು ನೋಡಿದ ನಂತರ ಜಿಮ್ ಮಾಡಬೇಡಿ, ಇಲ್ಲದಿದ್ದರೆ ನೀವು ಅಪಘಾತಕ್ಕೆ ಬಲಿಯಾಗಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT