ಸಾಂದರ್ಭಿಕ ಚಿತ್ರ 
ದೇಶ

ಗುಜರಾತ್‌ನಲ್ಲಿ ಪಕ್ಷದೊಳಗೆ ತೀವ್ರಗೊಂಡ ಪೈಪೋಟಿ; ಪಕ್ಷದ ಸದಸ್ಯರಿಂದಲೇ ಬಿಜೆಪಿ ನಾಯಕನ ಹತ್ಯೆ ಆರೋಪ!

ಇತ್ತೀಚೆಗಷ್ಟೇ ಪಾಟಿದಾರ್ ನಾಯಕ ಮತ್ತು ಪಕ್ಷದ ಶಾಸಕ ಹಾರ್ದಿಕ್ ಪಟೇಲ್ ಅವರನ್ನು ಬೆಂಬಲಿಸಿದ ವಿರಂಗಾಮ್‌ನ 45 ವರ್ಷದ ಬಿಜೆಪಿ ಮುಖಂಡ ಹರ್ಷದ್ ಗಮೋಟ್ ಅವರನ್ನು ರಾಜಕೀಯ ದ್ವೇಷದ ಕಾರಣ ಮತ್ತೋರ್ವ ಬಿಜೆಪಿ ಸದಸ್ಯರೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಹಮದಾಬಾದ್: ಇತ್ತೀಚೆಗಷ್ಟೇ ಪಾಟಿದಾರ್ ನಾಯಕ ಮತ್ತು ಪಕ್ಷದ ಶಾಸಕ ಹಾರ್ದಿಕ್ ಪಟೇಲ್ ಅವರನ್ನು ಬೆಂಬಲಿಸಿದ ವಿರಂಗಾಮ್‌ನ 45 ವರ್ಷದ ಬಿಜೆಪಿ ಮುಖಂಡ ಹರ್ಷದ್ ಗಮೋಟ್ ಅವರನ್ನು ರಾಜಕೀಯ ದ್ವೇಷದ ಕಾರಣ ಮತ್ತೋರ್ವ ಬಿಜೆಪಿ ಸದಸ್ಯರೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಬಿಜೆಪಿ ಕಾರ್ಯಕರ್ತ ಭರತ್ ಕಥಿ ಸೇರಿದಂತೆ ಏಳು ಮಂದಿಯನ್ನು ಬುಧವಾರ ಬಂಧಿಸಲಾಗಿದೆ.

ಒಂದು ವರ್ಷದ ಹಿಂದೆ ಗಮೋಟ್ ಅವರ ಪತ್ನಿ ಸೋನಾಲ್ ಅವರು ಪುರಸಭೆಯ ಕೌನ್ಸಿಲರ್ ಸ್ಥಾನಕ್ಕೆ ಅಭ್ಯರ್ಥಿಯಾದ ಬಳಿಕ ಗಮೋಟ್ ಮತ್ತು ಕಥಿ ನಡುವೆ ಭಿನ್ನಮತ ಆರಂಭವಾಯಿತು.

'ಮಂಗಳವಾರ ಸಂಜೆ, ಹರ್ಷದ್‌ಕುಮಾರ್ ಗಮೋಟ್ ಅವರ ಬ್ಯುಸಿನೆಸ್ ಮತ್ತು ರಾಜಕೀಯ ಪ್ರತಿಸ್ಫರ್ಧಿಯಾದ ಭರತ್ ಕಥಿ ಮತ್ತು ಅವರ ಆರು ಸಹಚರರು ಹಲವು ಬಾರಿ ಇರಿದಿದ್ದಾರೆ. ಗಾಯಾಳು ಗಮೋಟ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಅವರು ಮೃತಪಟ್ಟರು' ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಡಿಎಸ್ ಚೌಹಾಣ್ ತಿಳಿಸಿದ್ದಾರೆ.

ಆದಾಗ್ಯೂ, ದೂರಿನಲ್ಲಿ ರಾಜಕೀಯ ಪೈಪೋಟಿಯ ನೇರ ಉಲ್ಲೇಖವಿಲ್ಲದಿದ್ದರೂ, ಭರತ್ ಕಥಿ ಅವರಿಗೆ ಈ ಪ್ರದೇಶ ಭದ್ರಕೋಟೆ ಎನಿಸಿತ್ತು. ಆದರೆ, ಸೋನಾಲ್ ಅವರು ಪುರಸಭೆಯ ಕೌನ್ಸಿಲರ್ ಆಗಿ ಆಯ್ಕೆಯಾದ ಬಳಿಕ, ಹರ್ಷದ್ ಅವರು ಸರ್ಕಾರದ ನೀತಿಗಳು ಮತ್ತು ಇತರ ವ್ಯವಹಾರಗಳ ಮೇಲೆ ಪ್ರಭಾವ ಬೀರಲು ಮುಂದಾಗಿದ್ದರು. ಈವೇಳೆ ಭರತ್ ಕಥಿ ಅವರ ಪ್ರಾಬಲ್ಯ ಕ್ಷಿಣಿಸಲು ಪ್ರಾರಂಭಿಸಿತು. ಇದುವೇ ಅಪರಾಧವನ್ನು ಪ್ರಚೋದಿಸಿರಬಹುದು ಎಂದು ಚೌಹಾಣ್ ಹೇಳಿದರು.

ಕಥಿ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯರಾಗಿದ್ದರೂ ಕೂಡ, ಪಕ್ಷ ಅವರಿಗೆ ಯಾವುದೇ ಕೆಲಸ ಅಥವಾ ಹುದ್ದೆಯನ್ನು ನೀಡಿರಲಿಲ್ಲ ಎಂದು ವಿರಾಂಗಮ್ ಬಿಜೆಪಿ ನಗರ ಅಧ್ಯಕ್ಷ ನರೇಶ್ ಶಾ ಹೇಳಿದರು.

'ಕಾರ್ಪೊರೇಷನ್ ಚುನಾವಣೆಯಲ್ಲಿ, ಕಥಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹರ್ಷದ್ ಗಮೋಟ್ ಮತ್ತು ಅವರ ಪತ್ನಿ ಸೋನಾಲ್ ವಿರುದ್ಧ ಕೆಲವು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಆದರೆ, ಅವರ ನಡುವೆ ಯಾವುದೇ ಜಗಳ ನಡೆದಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮೃತರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು' ಎಂದು ಶಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT