ಎಥೆನಾಲ್ ಉತ್ಪಾದನೆ (ಸಂಗ್ರಹ ಚಿತ್ರ) 
ದೇಶ

2022 ರಲ್ಲಿ ಪೆಟ್ರೋಲ್ ಜೊತೆ ಎಥೆನಾಲ್ ಮಿಶ್ರಣ ಶೇ.10.17 ರಷ್ಟು ಏರಿಕೆ

2022 ರಲ್ಲಿ ಪೆಟ್ರೋಲ್ ಜೊತೆ ಎಥೆನಾಲ್ ಮಿಶ್ರಣ ಶೇ.10.17 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಮ್ ಹಾಗೂ ನೈಸರ್ಗಿಕ ಅನಿಲಗಳ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ನೋಯ್ಡಾ: 2022 ರಲ್ಲಿ ಪೆಟ್ರೋಲ್ ಜೊತೆ ಎಥೆನಾಲ್ ಮಿಶ್ರಣ ಶೇ.10.17 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಮ್ ಹಾಗೂ ನೈಸರ್ಗಿಕ ಅನಿಲಗಳ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಗ್ರೇಟರ್ ನೋಯ್ಡಾದಲ್ಲಿ ಆಟೋ ಎಕ್ಸ್ಪೋದಲ್ಲಿ  ಎಥೆನಾಲ್ ಪೆವಿಲಿಯನ್ ಉದ್ಘಾಟಿಸಿ ಮಾತನಾಡಿದ ಹರ್ದೀಪ್ ಸಿಂಗ್ ಪುರಿ, 2013-14 ರಲ್ಲಿ ಶೇ. 1.53 ರಷ್ಟಿದ್ದ ಪೆಟ್ರೋಲ್ ನೊಂದಿಗಿನ ಎಥೆನಾಲ್ ಮಿಶ್ರಣವನ್ನು 2022 ರಲ್ಲಿ ಶೇ.10.17ಕ್ಕೆ ಏರಿಕೆ ಮಾಡಲಾಗಿದೆ. 2030 ರ ವೇಳೆಗೆ ಇದನ್ನು ಶೇ.20 ಕ್ಕೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. 

ಎಥೆನಾಲ್ ಬ್ಲಂಡೆಡ್ ಇಂಧನದಿಂದಾಗಿ ಸರ್ಕಾರದ ಇಂಧನ ಭದ್ರತೆಯೂ ವೃದ್ಧಿಸುವುದಷ್ಟೇ ಅಲ್ಲದೇ, 41,500 ಕೋಟಿ ರೂಪಾಯಿ ವಿದೇಶಿ ವಿನಿಮಯ ಮೀಸಲು ಉಳಿತಾಯಕ್ಕೂ ಸಹಾಯವಾಗಿದೆ ಜೊತೆಗೆ 27 ಲಕ್ಷ ಎಂ.ಟಿಯಷ್ಟು ಜಿಹೆಚ್ ಜಿ ಎಮಿಷನ್ಸ್ ನ್ನು ಕಡಿಮೆ ಮಾಡುವುದಕ್ಕೆ, ರೈತರಿಗೆ 40,600 ಕೋಟಿ ರೂಪಾಯಿಗಳಷ್ಟು ಪಾವತಿ ಮಾಡುವುದಕ್ಕೆ ಸಹಕಾರಿಯಾಗಿದೆ ಎಂದು ಪುರಿ ವಿವರಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಶೇ.10 ರಿಂದ ಶೇ.85ಕ್ಕೆ ಹೆಚ್ಚಿಸುವ ಗುರಿ: ಕೆಎಸ್‌ಬಿಡಿಬಿ
 
ಮಾರುತಿ ಸುಜೂಕಿ, ಟೊಯಾಟ ಕಿರ್ಲೋಸ್ಕರ್ ಮೋಟಾರ್, ಟಿವಿಎಸ್, ಹಿರೋ ಮೋಟೋಕಾರ್ಪ್, ಬಜಾಜ್ ಆಟೋ, ಹೋಂಡ ಮೋಟರ್ ಸೈಕಲ್, ಯಮಹ, ಸುಜೂಕಿ ಮೋಟರ್ ಸೈಕಲ್ ಸಂಸ್ಥೆಗಳು ಫ್ಲೆಕ್ಸ್-ಇಂಧನ ವಾಹನಗಳ ಮಾದರಿಯನ್ನು ಪ್ರದರ್ಶಿಸಿದ್ದು, ಈ ವಾಹನಗಳು ಶೇ.20-85 ರಷ್ಟು ಎಥೆನಾಲ್ ಇಂಧನ ಮಿಶ್ರಣದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ.

ಇದೇ ಕಾರ್ಯಕ್ರಮದಲ್ಲಿ ಶುದ್ಧ ಇಂಧನ ಪಾಲುದಾರಿಕೆಗಾಗಿ ಅಮೇರಿಕಾ ಗ್ರೇನ್ಸ್ ಕೌನ್ಸಿಲ್ ಮತ್ತು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ನಡುವೆ ಒಪ್ಪಂದಕ್ಕೂ ಸಹಿ ಹಾಕಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT