ದೇಶ

ಮತ್ತೆ ಬಿಜೆಪಿ ಜೊತೆ ಕೈಜೋಡಿಸುವುದಕ್ಕಿಂತ ನಾನು ಸಾಯಲು ಸಿದ್ಧ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

Ramyashree GN

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಬಿಜೆಪಿಯೊಂದಿಗೆ ಮರುಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಅಲ್ಲದೆ, ಅವರು ತಮ್ಮ ಹಿಂದಿನ ಮಿತ್ರರೊಂದಿಗೆ 'ಕೈಜೋಡಿಸುವ ಬದಲು ಸಾಯುವುದೇ ಲೇಸು' ಎಂದು ಪ್ರತಿಪಾದಿಸಿದ್ದಾರೆ.

ತಮ್ಮೊಂದಿಗೆ ಮೈತ್ರಿಯಲ್ಲಿದ್ದಾಗ ಬಿಜೆಪಿಯ ಹಿಂದುತ್ವ ಸಿದ್ಧಾಂತದ ಬಗ್ಗೆ ಯಾವಾಗಲೂ ವಿರುದ್ಧವಾಗಿರುವ ಮುಸ್ಲಿಮರು ಸೇರಿದಂತೆ ತಮ್ಮೆಲ್ಲಾ ಬೆಂಬಲಿಗರ ಮತಗಳನ್ನು ಅದು ಪಡೆಯುತ್ತಿತ್ತು ಎಂದು ಜೆಡಿಯು ನಾಯಕ ನೆನಪಿಸಿಕೊಂಡರು.

ಮುಂದಿನ ವರ್ಷ ರಾಜ್ಯದ 40 ಲೋಕಸಭಾ ಸ್ಥಾನಗಳ ಪೈಕಿ 36 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ ಎಂದು ವ್ಯಂಗ್ಯವಾಡಿದರು.

ತಮ್ಮ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಅವರ ತಂದೆ ಲಾಲು ಪ್ರಸಾದ್ ಅವರ ವಿರುದ್ಧದ 'ಆಧಾರರಹಿತ' ಭ್ರಷ್ಟಾಚಾರ ಪ್ರಕರಣಗಳ ನಂತರ 2017 ರಲ್ಲಿ ಎನ್‌ಡಿಎಗೆ ಮರಳಿದ್ದು 'ತಪ್ಪು' ಎಂದು ಪುನರುಚ್ಚರಿಸಿದರು.

SCROLL FOR NEXT