ಎರಿಕ್ ಗಾರ್ಸೆಟ್ಟಿ 
ದೇಶ

ಅದು ಭಾರತದ ಆಂತರಿಕ ವಿಷಯ ಆದರೆ ಹೃದಯವಿದ್ರಾವಕ; ಮಣಿಪುರದ ಬಗ್ಗೆ ಅಮೇರಿಕಾ ರಾಯಭಾರ ಕಚೇರಿ

ಮಣಿಪುರದಲ್ಲಿನ ಹಿಂಸಾಚಾರ ಭಾರತದ ಆಂತರಿಕ ವಿಷಯವಾಗಿದೆ. ಆದರೆ ಅದು ಹೃದಯವಿದ್ರಾವಕ ಎಂದು ಅಮೇರಿಕಾ ರಾಯಭಾರ ಕಚೇರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನವದೆಹಲಿ: ಮಣಿಪುರದಲ್ಲಿನ ಹಿಂಸಾಚಾರ ಭಾರತದ ಆಂತರಿಕ ವಿಷಯವಾಗಿದೆ. ಆದರೆ ಅದು ಹೃದಯವಿದ್ರಾವಕ ಎಂದು ಅಮೇರಿಕಾ ರಾಯಭಾರ ಕಚೇರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ನವದೆಹಲಿಯಲ್ಲಿರುವ ಅಮೇರಿಕಾದ ಉನ್ನತ ಮಟ್ಟದ ರಾಯಭಾರ ಕಚೇರಿ ಅಧಿಕಾರಿ ಎರಿಕ್ ಗಾರ್ಸೆಟ್ಟಿ,  ಮನುಷ್ಯರು ನೋವು ಎದುರಿಸಿದಾಗಲೆಲ್ಲಾ ಹೃದಯ ಒಡೆಯುತ್ತದೆ ಎಂದು ಹೇಳಿದ್ದಾರೆ. 

ಪ್ರಸ್ತುತ US ಸರ್ಕಾರಿ ಅಧಿಕಾರಿಗಳೊಂದಿಗೆ ಸಮಾಲೋಚನೆಗಾಗಿ ವಾಷಿಂಗ್ಟನ್‌ನಲ್ಲಿರುವ ಗಾರ್ಸೆಟ್ಟಿ, ಮಣಿಪುರದಲ್ಲಿ ಜನಸಮೂಹದಿಂದ ಇಬ್ಬರು ವಿವಸ್ತ್ರಗೊಂಡ ಮಹಿಳೆಯರನ್ನು ಕ್ರೂರವಾಗಿ ನಡೆಸುತ್ತಿರುವ ಗ್ರಾಫಿಕ್ ವೀಡಿಯೊದ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಈ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಮಣಿಪುರ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಘಟನೆ 140 ಕೋಟಿ ಭಾರತೀಯರನ್ನು ನಾಚಿಕೆಪಡಿಸಿದೆ ಎಂದು ಹೇಳಿದ್ದಾರೆ "ಯಾವುದೇ ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ ಮತ್ತು ಕಾನೂನು ತನ್ನ "ಪೂರ್ಣ ಶಕ್ತಿ ಮತ್ತು ದೃಢತೆ" ಯೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ. 

ನಾನು ವೀಡಿಯೋ ನೋಡಿಲ್ಲ. ಇದೇ ಮೊದಲ ಬಾರಿಗೆ ಇದರ ಬಗ್ಗೆ ಕೇಳಿದ್ದೇನೆ. ಆದರೆ ನಾನು ಮೊದಲೇ ಹೇಳಿದಂತೆ, ನಮ್ಮ ನೆರೆಹೊರೆಯಲ್ಲಾಗಲಿ ಅಥವಾ ಜಗತ್ತಿನಾದ್ಯಂತ ಅಥವಾ ನಾವು ವಾಸಿಸುವ ದೇಶದಲ್ಲಿ ಮಾನವ ದುಃಖ ಬಂದಾಗಲೆಲ್ಲಾ ನಮ್ಮ ಹೃದಯಗಳು ಒಡೆಯುತ್ತವೆ, ”ಎಂದು ಯುಎಸ್ ರಾಯಭಾರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT