ರೈತ ಚಂದ್ರಮೌಳಿ 
ದೇಶ

ಚಿತ್ತೂರು: ಟೊಮೆಟೊ ಮಾರಾಟದಿಂದ ಕೋಟ್ಯಾಧಿಪತಿಯಾದ ರೈತ!

ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿರುವಂತೆಯೇ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತರೊಬ್ಬರು ತಾವು ಕೆಂಪು ಸುಂದರಿ ಮಾರಾಟದಿಂದ ಕೋಟ್ಯಾಧಿಪತಿ ಆಗಿರುವುದಾಗಿ ಹೇಳಿಕೊಂಡಿದ್ದಾರೆ.

ಚಿತ್ತೂರು: ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿರುವಂತೆಯೇ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತರೊಬ್ಬರು ತಾವು ಕೆಂಪು ಸುಂದರಿ ಮಾರಾಟದಿಂದ ಕೋಟ್ಯಾಧಿಪತಿ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ 22 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು 3 ಕೋಟಿ ರೂಪಾಯಿ ಆದಾಯ ಗಳಿಸಿರುವುದಾಗಿ ಕರಕಮಂಡ ಗ್ರಾಮದ ರೈತ ಚಂದ್ರಮೌಳಿ ಹೇಳಿದ್ದಾರೆ.

10 ಲಕ್ಷ ರೂಪಾಯಿ ಸಾಗಾಣಿಕೆ ಮತ್ತಿತರ ಕಾರಣಗಳಿಂದ ಖರ್ಚಾಗಿದ್ದು, 20 ಲಕ್ಷ ರೂಪಾಯಿ ಕಮಿಷನ್‌ಗೆ ಹೋಗಿದೆ. ಎಲ್ಲಾ ಕಳೆದು  3 ಕೋಟಿ ರೂಪಾಯಿ ನಿವ್ವಳ ಆದಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಟೊಮೆಟೊ ಬೆಳೆಯಲ್ಲಿ ಹಲವು ಬಾರಿ ನಷ್ಟ ಉಂಟಾಗಿದ್ದರೂ ಬೇಸಿಗೆ ನಂತರ ಬರುವ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬುದನ್ನು ಅರಿತ ಕುಟುಂಬ ಈ ಬಾರಿ ಟೊಮೆಟೊ ಬೆಳೆದು ಬಂಪರ್ ಆದಾಯ ಗಳಿಸಿದೆ.

ಇವರು ಏಪ್ರಿಲ್ 7 ರಂದು 22 ಎಕರೆ ಪ್ರದೇಶದಲ್ಲಿ ಸಾಹು ತಳಿಯ ಟೊಮೆಟೊ ನಾಟಿ ಮಾಡಿದ್ದು, ಸೂಕ್ಷ್ಮ ನೀರಾವರಿ ಪದ್ಧತಿ ಅನುಸರಣೆಯೊಂದಿಗೆ ಜೂನ್ ಅಂತ್ಯದಲ್ಲಿ ಇಳುವರಿ ಪಡೆದಿದ್ದು, ಕೋಲಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಹರಾಜಿನಲ್ಲಿ 15 ಕೆಜಿ ತೂಕದ ಬಾಕ್ಸ್‌ನ ಬೆಲೆ 1,000 ರಿಂದ 1,500 ರೂ.ವರೆಗೆ ಇದ್ದು, ಸುಮಾರು 40,000 ಬಾಕ್ಸ್‌ಗಳು ಮಾರಾಟವಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ತೀವ್ರ ಏರಿಕೆಯ ನಡುವೆ NCCF ಮತ್ತು NAFED  ನಂತಹ ಏಜೆನ್ಸಿಗಳು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ಟೊಮ್ಯಾಟೊ ಖರೀದಿಯನ್ನು ಪ್ರಾರಂಭಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT