ದೇಶ

ಮಧ್ಯಪ್ರದೇಶ: ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದ ಡಿಕೆ.ಶಿವಕುಮಾರ್

Manjula VN

ಉಜ್ಜಯಿನಿ: ಮಧ್ಯಪ್ರದೇಶ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಭೇಟಿ ನೀಡಿದ್ದು, ಮಹಾಕಾಳೇಶ್ವರನ ದರ್ಶನ ಪಡೆದುಕೊಂಡರು.

12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಶಿವಕುಮಾರ್, ಪ್ರಾರ್ಥನೆ ಸಲ್ಲಿಸಿದರು.

ಮಹಾಕಾಳೇಶ್ವರನ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಸೇವೆ ಮಾಡಲು ನಮಗೆ ಮಹಾಕಾಳೇಶ್ವರ ಅಧಿಕಾರ ನೀಡಿದ್ದಾನೆ. ಚನಾವಣೆಗೂ ಮುಂಚೆಯೂ ದೇವಸ್ಥಾನಕ್ಕೆ ಬಂದಿದ್ದೆ. ಇಂದು ಉತ್ತಮ ಯೋಜನೆಗೆ ಚಾಲನೆ ನೀಡುತ್ತಿದ್ದೇವೆ. ರಾಜ್ಯದ ಎಲ್ಲಾ ಮಹಿಳೆಯರೂ ಉಚಿತ ಪ್ರಯಾಣ ಮಾಡುವ ಯೋಜನೆ ಅದಾಗಿದೆ. ಚುನಾವಣೆ ನೀಡಿದ್ದ ಎಲ್ಲಾ 5 ಭರವಸೆಗಳನ್ನೂ ಈಡೇರಿಸುತತೇವೆಂದು ಹೇಳಿದ್ದಾರೆ.

SCROLL FOR NEXT