ಸಾಧ್ವಿ ಪ್ರಾಚಿ 
ದೇಶ

ಮದರಸಾಗಳು ಲವ್ ಜಿಹಾದ್‌ನ ಕೇಂದ್ರವಾಗಿದ್ದು ಅವುಗಳನ್ನು ಮುಚ್ಚಿದರೆ ಶಾಂತಿ ನೆಲೆಸುತ್ತದೆ: ಸಾಧ್ವಿ ಪ್ರಾಚಿ

ಮಸೀದಿ, ಮದರಸಾಗಳು ಲವ್ ಜಿಹಾದ್ ನ ಕೇಂದ್ರಗಳಾಗಿದ್ದು ಅವುಗಳನ್ನು ಮುಚ್ಚುವುದರಿಂದ ಶಾಂತಿ ನೆಲೆಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.

ಬರೇಲಿ: ಮಸೀದಿ, ಮದರಸಾಗಳು ಲವ್ ಜಿಹಾದ್ ನ ಕೇಂದ್ರಗಳಾಗಿದ್ದು ಅವುಗಳನ್ನು ಮುಚ್ಚುವುದರಿಂದ ಶಾಂತಿ ನೆಲೆಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಧಾಮಿ, ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಇದೇ ವೇಳೆ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಹೋದರ ಸಿಎಂ ಪಟ್ಟಕ್ಕೇರುವ ಕನಸನ್ನು ಬಿಡಬೇಕು ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಬರೇಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಭಾರತದಲ್ಲಿ ಲವ್ ಜಿಹಾದ್ ಬೆಳೆಯುತ್ತಿರುವುದು ಕಳವಳಕಾರಿಯಾಗಿದೆ. ಹಿಂದೂಗಳು ಕೇವಲ ಹಣ ಸಂಪಾದನೆ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ. ಆದರೆ, ಮುಸ್ಲಿಂರು ಭಾರತವನ್ನು ಆಳುವ ಬಗ್ಗೆ ಚಿಂತಿತರಾಗಿದ್ದಾರೆ. ಅವರ ಅಜೆಂಡಾ ಸಾವಿರಾರು ವರ್ಷಗಳದ್ದು ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಪಂಕ್ಚರ್ ಅಂಗಡಿ ಏಕೆ? ಯಾವುದೇ ರಸ್ತೆ ಅಥವಾ ಪ್ರದೇಶದಲ್ಲಿ ಪಂಕ್ಚರ್ ಅಂಗಡಿ ಇದೆಯೇ? ಇದರ ಹಿಂದೆಯೂ ದೊಡ್ಡ ಷಡ್ಯಂತ್ರವಿದೆ. ಮಸೀದಿಗಳಿಂದ ಲವ್ ಜಿಹಾದ್ ಹರಡುತ್ತಿದೆ ಎಂದು ಸಾಧ್ವಿ ಪ್ರಾಚಿ ಆರೋಪಿಸಿದ್ದಾರೆ. ಲವ್ ಜಿಹಾದ್ ಮಸೀದಿಯಿಂದ ಆರಂಭವಾಗುತ್ತದೆ, ಅವರಿಗೆ ಸಂಪೂರ್ಣ ಜ್ಞಾನ ಮಸೀದಿಯಿಂದ ಹಂಚಲಾಗುತ್ತದೆ ಎಂದರು. ಹಾಗಾಗಿಯೇ ಲವ್ ಜಿಹಾದ್ ಹೆಚ್ಚುತ್ತಿದೆ. 

ಭಾರತದಲ್ಲಿ ಮದರಸಾಗಳು ಮತ್ತು ಮಸೀದಿಗಳನ್ನು ಮುಚ್ಚಿದ ದಿನ ಅಂದಿನಿಂದ ಲವ್ ಜಿಹಾದ್ ಕೂಡ ನಿಲ್ಲುತ್ತದೆ. ಆ ನಂತರ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ. ಉತ್ತರಾಖಂಡದಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಸಮಾಧಿಗಳನ್ನು ತೆಗೆಯಲಾಗಿದೆ ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ.  

ಸರ್ಕಾರಿ ಭೂಮಿ ಮತ್ತು ರೈಲ್ವೆಯ ಸರ್ಕಾರಿ ಆಸ್ತಿಗಳಲ್ಲಿ ಮಜಾರ್‌ಗಳನ್ನು ನಿರ್ಮಿಸಲಾಗಿದೆ. ಅವರನ್ನು ತೆಗೆದು ಹಾಕುವ ಮೂಲಕ ಉತ್ತರಾಖಂಡ ಸರ್ಕಾರ ಬಹಳ ಒಳ್ಳೆಯ ಕೆಲಸ ಮಾಡಿದೆ. ಅಷ್ಟೇ ಅಲ್ಲ ಉತ್ತರಾಖಂಡ ದೇವಭೂಮಿ ಹಾಗೂ ದೇವಭೂಮಿಯಲ್ಲಿ ಹಿಂದೂಯೇತರ ಪಂಗಡದವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು. ಅದು ಏಕೆ ಬೆಳೆಯುತ್ತಿದೆ? ಈ ಸಂಖ್ಯೆ ಹೆಚ್ಚಾದಾಗ, ಅವರ ಐಡಿ ಪುರಾವೆಗಳನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಇಂತಹವರು ಹಲವು ನಕಲಿ ಐಡಿಗಳನ್ನೂ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಉತ್ತರಾಖಂಡದಿಂದ ಜನ ವಲಸೆ ಹೋಗುತ್ತಿದ್ದಾರೆ. ಉತ್ತರಾಖಂಡ ಸಿಎಂ ಧಾಮಿ ಪರಿಶೀಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. 

ಉತ್ತರಾಖಂಡದಲ್ಲಿ ಲವ್ ಜಿಹಾದ್ ಹೆಚ್ಚಾಗುತ್ತಿದೆ ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ. ಅಷ್ಟೇ ಅಲ್ಲ ಈಗ ಗೇಮ್ ಜಿಹಾದಿಗಳೂ ಬಂದಿದ್ದಾರೆ. ಮಕ್ಕಳಿಗೆ ಇದು ಎಂತಹ ದೊಡ್ಡ ಅಜೆಂಡಾ. ಭಾರತವನ್ನು ವಶಪಡಿಸಿಕೊಳ್ಳಲು ಷಡ್ಯಂತ್ರ ನಡೆಯುತ್ತಿದೆ ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ. ಆದರೆ, ಹಿಂದೂ ಸಮಾಜ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ಗೆ ಸಂಬಂಧಿಸಿದಂತೆ ಅವರು ಕುರ್ಚಿ ಪಡೆಯುವ ಕನಸನ್ನು ಕೈಬಿಡಬೇಕು. ಅವರಿಗೆ ಈಗ ಕುರ್ಚಿ ಇರುವುದಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲೂ ಮೋದಿ ಸರ್ಕಾರ ಬರಲಿದೆ. ದೇಶದ ಜನತೆ ಮತ್ತೊಮ್ಮೆ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲಿದ್ದಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT