ದೇಶ

ಮೈನ್ಪುರಿ: ಕಸ ಹಾಕುವ ವಿಚಾರವಾಗಿ ಜಗಳ: ಗುಂಡೇಟಿಗೆ ಒಂದೇ ಕುಟುಂಬದ ಮೂವರ ಬಲಿ!

Srinivas Rao BV

ಲಖನೌ: ಕಸ ಸುರಿಯುವ ವಿಚಾರವಾಗಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಗುಂಡು ಹಾರಿಸಿ ಮೂವರನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ನಡೆದಿದೆ.

ಅತಿರಾಮ್ಪುರ್ ಎಂಬ ಗ್ರಾಮದಲ್ಲಿ ರಸ್ತೆ ಮೇಲೆ ಕಸ ಸುರಿದಿದ್ದಕ್ಕೆ ಕೆಲವು ಮಂದಿಯ ನಡುವೆ ಈ ಘರ್ಷಣೆ ಆರಂಭವಾಗಿತ್ತು ಎಂದು ಎಸ್ ಪಿ ವಿನೋದ್ ಕುಮಾರ್ ಹೇಳಿದ್ದಾರೆ.

ವಿವಾದ ತೀವ್ರಸ್ವರೂಪ ಪಡೆದುಕೊಂಡು ಓರ್ವ ವ್ಯಕ್ತಿ ಕಯಾಮ್ ಸಿಂಗ್ (85) ರಾಮೇಶ್ವರ್ ಸಿಂಗ್ (75) ಮಮತಾ ದೇವಿ (28) ನ್ನು ಹತ್ಯೆ ಮಾಡಿದ್ದಾನೆ. ಸರೋಜಿನಿ ದೇವಿ ಎಂಬುವವರು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಆರೋಪಿ ರಾಹುಲ್ ಯಾದವ್ ಪತ್ತೆಗೆ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಎಸ್ ಪಿ ಕುಮಾರ್ ಹೇಳಿದರು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.

SCROLL FOR NEXT