ದೇಶ

ಕೇದಾರನಾಥ ಚಾರಣದಲ್ಲಿ 'ಕಳೆ' ತುಂಬಿದ ಸಿಗರೇಟ್ ಹೊಗೆ ಉಸಿರಾಡುವಂತೆ ಹೇಸರಗತ್ತೆಗೆ ಒತ್ತಾಯ; ವ್ಯಕ್ತಿ ಬಂಧನ

Ramyashree GN

ಡೆಹ್ರಾಡೂನ್: ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಹೇಸರಗತ್ತೆಗೆ ಸಿಗರೇಟಿನಿಂದ ಬರುವ ಹೊಗೆಯನ್ನು ಉಸಿರಾಡುವಂತೆ ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ, ಹೇಸರಗತ್ತೆಯ ಮಾಲೀಕನನ್ನು ಬಂಧಿಸಲಾಗಿದೆ. 

ಓರ್ವ ಹೇಸರಗತ್ತೆಯ ಬಾಯಿ ಮತ್ತು ಒಂದು ಮೂಗನ್ನು ಬಿಗಿಯಾಗಿ ಹಿಡಿದಿರುವಾಗ, ಮತ್ತೋರ್ವ ಇನ್ನೊಂದು ಮೂಗಿನ ಹೊಳ್ಳೆಯ ಮೂಲಕ ಹೊಗೆಯನ್ನು ಉಸಿರಾಡುವಂತೆ ಒತ್ತಾಯಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ತಮ್ಮ ಜೀವನೋಪಾಯಕ್ಕಾಗಿ ಬಳಸುವ ಪ್ರಾಣಿಯನ್ನು ಇಂತಹ 'ಅಮಾನವೀಯ ಕೃತ್ಯಕ್ಕೆ' ಒಳಪಡಿಸಿದ್ದಕ್ಕಾಗಿ ಹೇಸರಗತ್ತೆ ನಿರ್ವಾಹಕರ ವಿರುದ್ಧ ಕಠಿಣ ಕ್ರಮಕ್ಕೆ ಸಾಮಾಜಿಕ ಮಾಧ್ಯಮ ಬಳಕೆದಾರರು ಒತ್ತಾಯಿಸಿದ್ದಾರೆ.

ಕಷ್ಟಪಟ್ಟು ಕೆಲಸ ಮಾಡುವಂತೆ ಮಾಡಲು ಪ್ರಾಣಿಗಳ ಇಂದ್ರಿಯಗಳನ್ನು ನಿಶ್ಚೇತನಗೊಳಿಸಲೆಂದು ಈ ರೀತಿ ಮಾಡಲಾಗುತ್ತಿದೆ ಎಂದು ಅವರು ಊಹಿಸಿದ್ದಾರೆ.

ಕುದುರೆಗಳು ಮತ್ತು ಹೇಸರಗತ್ತೆಗಳನ್ನು ಹಿಮಾಲಯ ದೇವಸ್ಥಾನಕ್ಕೆ ಚಾರಣ ಮಾರ್ಗದಲ್ಲಿ ಯಾತ್ರಿಕರು ಮತ್ತು ಅವರ ಸಾಮಾನುಗಳನ್ನು ಸಾಗಿಸಲು ಬಳಸಲಾಗುತ್ತದೆ.

ರುದ್ರಪ್ರಯಾಗದ ಪೊಲೀಸರು ವಿಡಿಯೋವನ್ನು ಪರಿಶೀಲಿಸಿದ್ದು, ಕೇದಾರನಾಥಕ್ಕೆ 16 ಕಿಲೋಮೀಟರ್ ಉದ್ದದ ಚಾರಣ ಮಾರ್ಗದಲ್ಲಿ ಚೋಟಿ ಲಿಂಚೋಲಿ ಬಳಿಯ ಥಾರು ಕ್ಯಾಂಪ್‌ನಲ್ಲಿ ಇತ್ತೀಚೆಗೆ ಈ ಘಟನೆ ಸಂಭವಿಸಿದೆ ಎಂದು ಸೋನ್‌ಪ್ರಯಾಗ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಚಂದ್ರ ಬಲುನಿ ಹೇಳಿದ್ದಾರೆ.

ಈ ಸಂಬಂಧ ಹೇಸರಗತ್ತೆ ಮಾಲೀಕ ರಾಕೇಶ್ ಸಿಂಗ್ ರಾವತ್ ಅವರನ್ನು ಬಂಧಿಸಲಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಿಗರೇಟಿನಲ್ಲಿ 'ಕಳೆ' ತುಂಬಿದ್ದರೆ ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬಲುನಿ ಹೇಳಿದ್ದಾರೆ.

ಕೇದಾರನಾಥ ಯಾತ್ರೆಯು ಏಪ್ರಿಲ್ 25 ರಂದು ಪ್ರಾರಂಭವಾಯಿತು ಮತ್ತು ಎರಡು ತಿಂಗಳಲ್ಲಿ ಪೊಲೀಸರು ಅಶ್ವಾರೋಹಿಗಳ ಮೇಲಿನ ಕ್ರೌರ್ಯದ 14 ಪ್ರಕರಣಗಳನ್ನು ದಾಖಲಿಸಿದ್ದಾರೆ.

SCROLL FOR NEXT