ಸಾಂಕೇತಿಕ ಚಿತ್ರ 
ದೇಶ

ಶಿವಸೇನೆಯ 40 ಶಾಸಕರನ್ನು ಅನರ್ಹಗೊಳಿಸುವ ಮೂಲಕ ಪ್ರಧಾನಿ ಯುಸಿಸಿ ಯನ್ನು ಗೌರವಿಸಲಿ: ಉದ್ಧವ್ ಠಾಕ್ರೆ ಬಣ

ಶಿವಸೇನೆಯ ಉದ್ಧವ್ ಠಾಕ್ರೆ ಬಣ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು ಮಾತನಾಡಿದ್ದು, ಷರಿಯಾಗೆ ವಿರುದ್ಧವಾಗಿರುವುದೇ ಯುಸಿಸಿಯ ಆಧಾರವಾಗಿರಬಾರದು ಎಂದು ಹೇಳಿದೆ.

ಮುಂಬೈ: ಶಿವಸೇನೆಯ ಉದ್ಧವ್ ಠಾಕ್ರೆ ಬಣ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು ಮಾತನಾಡಿದ್ದು, ಷರಿಯಾಗೆ ವಿರುದ್ಧವಾಗಿರುವುದೇ ಯುಸಿಸಿಯ ಆಧಾರವಾಗಿರಬಾರದು, ಯುಸಿಸಿ ಎಂದರೆ ಎಲ್ಲರಿಗೂ ಸಮಾನವಾದ ಕಾನೂನು ಮತ್ತು ನ್ಯಾಯ ಆಗಿರಬೇಕು ಎಂದು ಅಭಿಪ್ರಾಯಪಟ್ಟಿದೆ. 

ಷರಿಯಾ ಇಸ್ಲಾಮಿಕ್ ಧಾರ್ಮಿಕ ಕಾನೂನಾಗಿದ್ದು, ಕುರಾನ್ ಹಾಗೂ ಮೊಹಮ್ಮದ್ ಅವರ ಸಾಂಪ್ರದಾಯಿಕ ಬೋಧನೆಗಳನ್ನು ಆಧರಿಸಿದೆ.

ಶಿವಸೇನೆ ಉದ್ಧವ್ ಬಣದ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ, ಪ್ರಧಾನಿ ನರೇಂದ್ರ ಮೋದಿ, ಶಿವಸೇನೆಯ 40 ಶಾಸಕರನ್ನು ಅನರ್ಹಗೊಳಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು ಗೌರವಿಸಲಿ ಎಂದು ಹೇಳಿದೆ.

ಭಿವಾಂಡಿ ನಿಜಾಮ್ ಪುರ ಸಿಟಿ ಮುನ್ಸಿಪಲ್ ಕಾರ್ಪೊರೇಷನ್ (ಬಿಎನ್ ಸಿಎಂಸಿ) ಯ 18 ಮಾಜಿ ಕಾರ್ಪೊರೇಟರ್ ಗಳನ್ನು, 2019 ರ ಮೇಯರ್ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ ಅನರ್ಹಗೊಳಿಸಿ,  6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಮಾಡಲಾಗಿದೆ. 

ಒಂದು ವೇಳೆ ಆಡಳಿತಾರೂಢ ಪಕ್ಷದ ಭ್ರಷ್ಟ ಸಚಿವರು, ಉದ್ಯಮಿಗಳು, ಜನರನ್ನು ರಕ್ಷಿಸಿ, ವಿಪಕ್ಷಗಳ ನಾಯಕರನ್ನು ಭ್ರಷ್ಟಾಚಾರ ವಿರೋಧಿ ಕಾರಣ ಇಟ್ಟುಕೊಂಡು ಹಣಿಯುವುದಾದರೆ ಅದೆಂತಹ ಕಾನೂನು? ಎಂದು ಉದ್ಧವ್ ಬಣ ಸಾಮ್ನಾದಲ್ಲಿ ಪ್ರಶ್ನಿಸಿದೆ
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT