ಸುಕೇಶ್ ಚಂದ್ರಶೇಖರ್ 
ದೇಶ

ಜೈಲು ವಾರ್ಡ್ ಫೂಟೇಜ್ ಸೋರಿಕೆ: ಮತ್ತೆ ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಪತ್ರ ಬರೆದ ಸುಕೇಶ್ ಚಂದ್ರಶೇಖರ್

ತನ್ನ ಸೆಲ್‌ನ ಸಿಸಿಟಿವಿ ದೃಶ್ಯಾವಳಿಗಳು ಸೋರಿಕೆಯಾದ ಕೆಲವೇ ದಿನಗಳಲ್ಲಿ, ವಂಚಕ ಸುಕೇಶ್ ಚಂದ್ರಶೇಖರ್ ಮತ್ತೊಮ್ಮೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದಾರೆ ಮತ್ತು ಈ ಹಿಂದೆ ರಕ್ಷಣೆ ಹಣವನ್ನು ಪಡೆದಿದ್ದ ಇಬ್ಬರು ಜೈಲು ಅಧಿಕಾರಿಗಳಿಂದ ವಿಡಿಯೋ ಕ್ಲಿಪ್ ಸೋರಿಕೆಯಾಗಿದೆ ಎಂದು ಹೇಳಿದ್ದಾರೆ.

ನವದೆಹಲಿ: ತನ್ನ ಸೆಲ್‌ನ ಸಿಸಿಟಿವಿ ದೃಶ್ಯಾವಳಿಗಳು ಸೋರಿಕೆಯಾದ ಕೆಲವೇ ದಿನಗಳಲ್ಲಿ, ವಂಚಕ ಸುಕೇಶ್ ಚಂದ್ರಶೇಖರ್ ಮತ್ತೊಮ್ಮೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದಾರೆ ಮತ್ತು ಈ ಹಿಂದೆ ರಕ್ಷಣೆ ಹಣವನ್ನು ಪಡೆದಿದ್ದ ಇಬ್ಬರು ಜೈಲು ಅಧಿಕಾರಿಗಳಿಂದ ವಿಡಿಯೋ ಕ್ಲಿಪ್ ಸೋರಿಕೆಯಾಗಿದೆ ಎಂದು ಹೇಳಿದ್ದಾರೆ.

ಸುಕೇಶ್ ಅವರು ತಮ್ಮ ಪತ್ರದಲ್ಲಿ, '4 ದಿನಗಳ ಹಿಂದೆ ನನ್ನ ಸೆಲ್‌ನ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ಭದ್ರತಾ ಲೋಪವಾಗಿದೆ. ಸಹಾಯಕ ಅಧೀಕ್ಷಕ ದೀಪಕ್ ಶರ್ಮಾ ಮತ್ತು ಉಪ ಅಧೀಕ್ಷಕ ಜಯ್ ಸಿಂಗ್ ಅವರಿಂದ ಸೋರಿಕೆಯಾಗಿದೆ ಎಂದು ನಿಮ್ಮ ತುರ್ತು ಗಮನಕ್ಕೆ ತರುತ್ತಿದ್ದೇನೆ' ಎಂದಿದ್ದಾರೆ.

'ಅವರಿಬ್ಬರೂ ಈ ಹಿಂದೆ ಜೈಲು ರಕ್ಷಣೆಯ ಹಣವಾಗಿ ಒಟ್ಟು 5.5 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಮತ್ತು ಆ ವಿಚಾರವನ್ನು ನಿಮ್ಮ ಗೌರವಾನ್ವಿತ ಕಚೇರಿಗೆ ದೂರಾಗಿ ಕಳುಹಿಸಲಾಗಿದೆ' ಎಂದು ಪತ್ರದಲ್ಲಿ ಬರೆಯಲಾಗಿದೆ.

ಜೈಲು ಅಧಿಕಾರಿಗಳು ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಸೆಲ್ ಮೇಲೆ ದಾಳಿ ನಡೆಸಿ ಅವರ ಕೆಲವು ಅತ್ಯಮೂಲ್ಯ ಆಸ್ತಿಯನ್ನು ವಶಪಡಿಸಿಕೊಂಡಾದ ಸುಕೇಶ್ ಕಣ್ಣೀರಿಟ್ಟಿದ್ದರು. ಸುಕೇಶ್ ಅವರ ಸೆಲ್‌ನಿಂದ 1.5 ಲಕ್ಷ ರೂಪಾಯಿ ಮೌಲ್ಯದ ಗುಸ್ಸಿ ಚಪ್ಪಲಿ ಮತ್ತು 80,000 ರೂಪಾಯಿ ಮೌಲ್ಯದ ಎರಡು ಜೀನ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ವಿಡಿಯೋದಲ್ಲಿ, ಅಧಿಕಾರಿಗಳು ಕಪಾಟು ಮತ್ತು ಇತರ ಸಾಮಾನುಗಳನ್ನು ಪರಿಶೀಲಿಸುತ್ತಿರುವಾಗ ಜೈಲಿನ ಕೊಠಡಿಯೊಳಗೆ ಒಂದು ಬದಿಗೆ ಸುಕೇಶ್ ನಿಂತಿರುವುದು ಕಂಡುಬಂದಿದೆ. ಪರಿಶೀಲನಾ ತಂಡದಲ್ಲಿ ತಿಹಾರ್ ಜೈಲರ್ ದೀಪಕ್ ಶರ್ಮಾ, ಉಪ ಅಧೀಕ್ಷಕ ಜೈ ಸಿಂಗ್ ಮತ್ತು ಕೇಂದ್ರ ಭದ್ರತಾ ಪಡೆಗಳ ಸಿಬ್ಬಂದಿ ಇದ್ದರು.

'ತನಗೆ ಬೆದರಿಕೆ ಹಾಕಲಾಗಿದೆ ಮತ್ತು ಆರ್ಥಿಕ ಅಪರಾಧಗಳ ವಿಭಾಗಕ್ಕೆ (ಇಒಡಬ್ಲ್ಯು) ತಮ್ಮ ವಿರುದ್ಧ ನೀಡಿದ ಹೇಳಿಕೆಗಳನ್ನು ಹಿಂಪಡೆಯುವಂತೆ ಕೇಳಲಾಗಿದೆ. 'ವೀಡಿಯೊದಲ್ಲಿ ಕಾಣಿಸುವಂತೆ ದೀಪಕ್ ಶರ್ಮಾ ಮತ್ತು ಜಯ್ ಸಿಂಗ್, ನನ್ನ ಸೆಲ್‌ಗೆ ಬೆದರಿಕೆ ಮತ್ತು ಮಾನಸಿಕ ಕಿರುಕುಳ ನೀಡಲು ಬಂದಿದ್ದರು ಮತ್ತು ಇಒಡಬ್ಲ್ಯುನಲ್ಲಿ ಅವರ ವಿರುದ್ಧ ನೀಡಿರುವ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು' ಎಂದು ಅವರು ಹೇಳಿದರು.

'ಹುಡುಕಾಟದ ನಂತರ, ಮರುದಿನ ದೀಪಕ್ ಶರ್ಮಾ ಮತ್ತು ಜಯ್ ಸಿಂಗ್ ನನ್ನನ್ನು ಅವರ ಕಚೇರಿಗೆ ಕರೆದರು. ಅಲ್ಲಿ, 'ನೀವು ಸತ್ಯೇಂದ್ರ ಜೈನ್ ಅವರ ಹೆಸರನ್ನು ಬಹಿರಂಗಪಡಿಸಿದ್ದೀರಿ, ಈಗ ನಮ್ಮ ಸರದಿ. ನಾವು ನಿಮ್ಮ ವಿಡಿಯೋವನ್ನು ಬಿಡುಗಡೆ ಮಾಡುತ್ತೇವೆ ಮತ್ತು ನಾವು ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದನ್ನು ಜಗತ್ತಿಗೆ ತೋರಿಸುತ್ತೇವೆ. ತನ್ನ ಚಿತ್ರಹಿಂಸೆಯ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ದೀಪಕ್ ಶರ್ಮಾ ಈ ಹಿಂದೆಯೇ ನನಗೆ ಸವಾಲು ಹಾಕಿದ್ದರು' ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT