ದೇಶ

ಈಶಾನ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ; ಸಿಎಂ ಹಿಮಂತ ಬಿಸ್ವಾ ಶರ್ಮಾ 'ಡೀಲ್ ಮಾಸ್ಟರ್'!

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಮಿತ್ರಪಕ್ಷಗಳು ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಅಧಿಕಾರವನ್ನು ಉಳಿಸಿಕೊಂಡಿವೆ. ಮೇಘಾಲಯದಲ್ಲಿ, ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಬಹುಮತದ ಕೊರತೆ ಎದುರಾಗಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಮಿತ್ರಪಕ್ಷಗಳು ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಅಧಿಕಾರವನ್ನು ಉಳಿಸಿಕೊಂಡಿವೆ. ಮೇಘಾಲಯದಲ್ಲಿ, ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಬಹುಮತದ ಕೊರತೆ ಎದುರಾಗಿದ್ದು ಸರ್ಕಾರ ರಚಿಸಲು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿಯಲಿದೆ. ಈಶಾನ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ ಕೀರ್ತಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸಲ್ಲುತ್ತಿದೆ.

ಅಸ್ಸಾಂ ಸಿಎಂ ಬಿಜೆಪಿಯ 'ಪೋಸ್ಟರ್ ಬಾಯ್'
ಹಿಮಂತ ಬಿಸ್ವಾ ಶರ್ಮಾ ಎಂಬುದು ಈಶಾನ್ಯದಲ್ಲಿ ಬಿಜೆಪಿಯ ಉದಯಕ್ಕೆ ಸಹಾಯ ಮಾಡಿದ ವಿವಿಧ ಮೈತ್ರಿಗಳನ್ನು ಒಟ್ಟುಗೂಡಿಸಿದವರ ಹೆಸರು. ಈ ಬಾರಿಯೂ ಹಾಗೆಯೇ ಮಾಡಿದರು. ಭಾರತೀಯ ಜನತಾ ಪಕ್ಷದ (ಬಿಜೆಪಿ) 'ಪೋಸ್ಟರ್ ಬಾಯ್' ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಪ್ರದೇಶದಿಂದ ಪಕ್ಷದ 'ಡೀಲ್ ಮೇಕರ್' ಆಗಿ ಹೊರಹೊಮ್ಮಿದ್ದಾರೆ.

ದಂಗೆಯಿಂದ ಪೀಡಿತ ನಾಗಾಲ್ಯಾಂಡ್‌ನಲ್ಲಿ ಎರಡನೇ ಅವಧಿಗೆ ಬಿಜೆಪಿ ಸರ್ಕಾರ ರಚಿಸುತ್ತಿದೆ. ಅಲ್ಲದೆ, ತ್ರಿಪುರಾದಲ್ಲಿ ಮಾಣಿಕ್ ಸಹಾ ಅವರನ್ನು ಸಿಎಂ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಮುಖ ಗಡಿ ರಾಜ್ಯವಾದ ತ್ರಿಪುರಾದಲ್ಲಿ ಬಿಜೆಪಿಯ ಜನಪ್ರಿಯತೆಗೆ ಉಂಟಾದ ಹಾನಿಯನ್ನು ಹಿಮ್ಮೆಟ್ಟಿಸಲು ಅವರು ಬಿಜೆಪಿಯ ಉನ್ನತ ನಾಯಕತ್ವಕ್ಕೆ ಸಹಾಯ ಮಾಡಿದರು ಮತ್ತು ಮಾಣಿಕ್ ಸಹಾ ಅವರನ್ನು ಆಯ್ಕೆ ಮಾಡಿದರು.

ಮೇಘಾಲಯ ಸಿಎಂ ಜೊತೆ ಸಭೆ
ಮೇಘಾಲಯ ವಿಧಾನಸಭಾ ಚುನಾವಣೆಗೂ ಮುನ್ನವೇ ಎನ್‌ಪಿಪಿ ಬಿಜೆಪಿ ಜತೆಗಿನ ಮೈತ್ರಿಯನ್ನು ಕೊನೆಗೊಳಿಸಿತ್ತು. ಮೇಘಾಲಯ ಸಿಎಂ ಮತ್ತು ಎನ್‌ಪಿಪಿ ಮುಖ್ಯಸ್ಥ ಕೊನ್ರಾಡ್ ಸಂಗ್ಮಾ ಅವರು ಬಹುಮತ ಪಡೆಯದಿದ್ದಲ್ಲಿ ಮತ್ತೆ ಬಿಜೆಪಿ ಬೆಂಬಲ ಕೋರಿದ್ದಾರೆ. ಈ ಮೈತ್ರಿಯನ್ನು ಮತ್ತೆ ಮಾತುಕತೆಯ ಮೇಜಿಗೆ ತರುವಲ್ಲಿ ಶರ್ಮಾ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂಗ್ಮಾ ಅವರು ಶರ್ಮಾ ಅವರೊಂದಿಗೆ ಎರಡು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ ಎಂದು ನಂಬಲಾಗಿದ್ದು ಸಮಸ್ಯೆ ಇತ್ಯರ್ಥಕ್ಕೆ ಬಂದಿದೆ.

ಹಿಮಂತ ಶರ್ಮಾ ಅವರು ತ್ರಿಪುರಾದ ಹಿಂದಿನ ರಾಜಮನೆತನದ ಕುಡಿ ಪ್ರದ್ಯೋತ್ ದೆಬ್ಬರ್ಮಾರಿಂದ ಸ್ಥಾಪಿಸಲ್ಪಟ್ಟ ಟಿಪ್ರಾ ಮೋಥಾವನ್ನು ಮನವೊಲಿಸಲು ಬ್ಯಾಕ್-ಚಾನೆಲ್ ಒಪ್ಪಂದವನ್ನು ಸಹ ಪ್ರಯತ್ನಿಸಿದರು. ತಿಪ್ರಾ ಮೋಥಾ ಅಧ್ಯಕ್ಷ ಬಿಜೋಯ್ ಕುಮಾರ್ ಹರಂಗ್‌ಖಾಲ್ ಅವರು ಕೆಲವು ವಾರಗಳ ಹಿಂದೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಚುನಾವಣಾ ಪೂರ್ವ ಮೈತ್ರಿಗಾಗಿ ಪ್ರಯತ್ನಗಳನ್ನು ಮಾಡಲಾಯಿತು, ಆದರೆ ಯಶಸ್ವಿಯಾಗಲಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT